23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಗೇರುಕಟ್ಟೆ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್: ಖತೀಬರಾದ ತಾಜುದ್ದೀನ್ ಸಖಾಫಿರಿಗೆ ಬೀಳ್ಕೊಡುಗೆ

ಗೇರುಕಟ್ಟೆ ಸಮೀಪದ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್ ಹಬ್ಬದ ಸಾಮೂಹಿಕ ನಮಾಝ್ ಖತೀಬರಾದ ತಾಜುದ್ದೀನ್ ಸಖಾಫಿ ನೇತೃತ್ವದಲ್ಲಿ ನಡೆಯಿತು. ಶಾಂತಿ ಸೌಹಾರ್ಧತೆಯ ಬಗ್ಗೆ ಸಂದೇಶ ಭಾಷಣ ಮಾಡಿದರು.

ಖತೀಬರಾದ ತಾಜುದ್ದೀನ್ ಸಖಾಫಿರವರನ್ನು ಬೀಳ್ಕೊಡುಗೆ:

ಕಳೆದ ಮೂರು ವರ್ಷಗಳಿಂದ ಪರಪ್ಪು ಮಸೀದಿಯಲ್ಲಿ ಖತೀಬರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ತಾಜುದ್ದೀನ್ ಸಖಾಫಿ ಮದರಸ ಮಕ್ಕಳ ವಿದ್ಯಾಭ್ಯಾಸದಲ್ಲಿ ರೇಂಜ್ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಫಲಿತಾಂಶ ಬರಲು ಹಾಗೂ ಮದರಸ ಮಕ್ಕಳ ಪ್ರತಿಭೋತ್ಸವದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆಯಲು ಕೂಡಾ ಕಾರಣಕರ್ತರಾಗಿದ್ದರು.


ಇವರು ಬೇರೆ ಕಡೆ ಉದ್ಯೋಗಕ್ಕಾಗಿ ಹೋಗುವವರಾದ್ದರಿಂದ ಈದುಲ್ ಫಿತರ್ ನ ದಿನದಂದು ಆಡಳಿತ ಸಮಿತಿ ಮತ್ತು ಜಮಾಅತರಿಂದ ಗೌರವಾರ್ಪಣೆಯ ಮೂಲಕ ಬೀಳ್ಕೊಡಲಾಯಿತು.


ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ,ಸಿದ್ದೀಕ್ ಮುಈನಿ, ಅಬ್ಬಾಸ್ ಹಿಶಮಿ,ಇಕ್ಬಾಲ್ ಮರ್ಝಾಕಿ, ಸಿದ್ದೀಕ್ ಸಖಾಫಿ , ಖಾದರ್ ಹಾಜಿ,ಅಬ್ದುಲ್ ಕರೀಮ್, ಖಾದರ್ ಟಿಂಬರ್, ಬಶೀರ್ ಟಿಂಬರ್,ಇಸುಬು ಎಂ.ಕೆ., ಮಹ್ಮದ್ ಎನ್.ಎನ್, ಹಾರಿಶ್ ಎನ್.ಎ, ಅಬ್ಬಾಸ್, ಬಿ.ಎಂ. ಆದಂ ಹಾಜಿ, ಹನೀಫ್ ಬಿ.ಐ., ಆಸಿಫ್.ಎಸ್.ಯು, ಅಬೂಸಾಲಿಹ್ ,ಸಿದ್ದೀಕ್ , ಸೈಫುಲ್ಲಾ, ಹಾಗೂ ಇನ್ನೂ ಅನೇಕ ಮುಖಂಡರು, ಉಸ್ತಾದರುಗಳು ಮೊದಲಾದವರಿದ್ದರು.

Related posts

ಮಡಂತ್ಯಾರು : ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಕ್ಕೆರಕಾಡು ಪರನೀರು ಕಾಂಕ್ರೀಟ್ ರಸ್ತೆ ಉದ್ಘಾಟನೆ

Suddi Udaya

ಕೋರಂ ಕೊರತೆ ಹಾಗೂ ಅಧಿಕಾರಿಗಳು ಭಾಗವಹಿಸದ್ದರಿಂದ ಕೊಕ್ಕಡ ಗ್ರಾಮಸಭೆ ಮುಂದೂಡಿಕೆ

Suddi Udaya

ಎಸ್ ಡಿ ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಸಲ್ಮತ್ ಗೆ ಸಂಸ್ಕೃತದಲ್ಲಿ 99 ಅಂಕ

Suddi Udaya

ಕಳೆದ ರಾತ್ರಿ ಸುರಿದ ಗುಡುಗು ಸಹಿತ ಜೋರಾದ ಗಾಳಿ ಮಳೆ: ಮುಂಡಾಜೆ- ಕಲ್ಮಂಜದಲ್ಲಿ 2 ಮನೆಗಳಿಗೆ ಮರ ಬಿದ್ದು ಸಂಪೂರ್ಣ ಹಾನಿ

Suddi Udaya

ಬಾರ್ಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

Suddi Udaya

ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

Suddi Udaya
error: Content is protected !!