23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ ಪವ‌ರ್ ಆನ್ ಸಂಸ್ಥೆಯಲ್ಲಿ ಲಕ್ಕಿ ಸ್ಟಾರ್‌ನ 3ನೇ ಹಂತದ ಡ್ರಾ ಅದೃಷ್ಟವಂತ ಯೋಜನೆಯಲ್ಲಿ ಗ್ರಾಹಕರು ಪಡೆದರು ದ್ವಿಚಕ್ರ ವಾಹನ ಡ್ಯಾನ್ಸ್ ಟು ಡ್ಯಾನ್ಸ್ ಆನ್ ಲೈನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

ಬೆಳ್ತಂಗಡಿ: ತಾಲೂಕಿನ ಪ್ರಸಿದ್ದ ಹಾಗೂ ಪ್ರಾಮಾಣಿಕ ಸಂಸ್ಥೆಯಾಗಿ ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸಿದ ಪವ‌ರ್ ಆನ್ ಸಂಸ್ಥೆಯಲ್ಲಿ ಲಕ್ಕಿ ಸ್ಟಾರ್‌ನ 3ನೇ ಹಂತದ ಡ್ರಾ ಏ.15ರಂದು ಮಧ್ಯಾಹ್ನ ನಡೆಯಿತು.

ಉದ್ಘಾಟನೆಯನ್ನು ಕಟ್ಟಡದ ಮಾಲಕರಾದ ರಾಮದಾಸ್ ಪೈ ನೆರೆವೇರಿಸಿದರು ಮತ್ತು ಡ್ರಾವನ್ನು ಲೋಬೋ ಟಿ.ವಿ.ಎಸ್ ಮಾಲಕರಾದ ರೋನಾಲ್ಡ್ ಲೋಬೋ ನೆರೆವೇರಿಸಿದರು.

ಮೂರನೇ ನೇ ಹಂತದ ಡ್ರಾದಲ್ಲಿ ನಂಬರ್ 2189 ಪ್ರಣಿವಿ ಕೆದ್ದು ನೀಲಿ ಬಣ್ಣದ ಟಿ.ವಿ.ಎಸ್.ಸ್ಕೂಟರ್ ಲಭಿಸಿದೆ.ಪವರ್ ಆನ್‌ಸಂಸ್ಥೆ ವತಿಯಿಂದ ಡ್ಯಾನ್ಸ್‌ ಟು ಡ್ಯಾನ್ಸ್ ಎಂಬ ಅನ್ ಲೈನ್ ಸ್ಪರ್ಧೆಯನ್ನು ಏರ್ಪಡಿಸಿದ್ದರು ಅದರಲ್ಲಿ ಅತೀ ಹೆಚ್ಚು ಲೈಕ್ಸ್ ಬಂದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಬಹುಮಾನ ಅರ್ಚನಾ ಕಡಬ, ಅರ್ಶಿಕಾ ಪೂಜಾರಿ ಬಂಟ್ವಾಳ, ದ್ವಿತೀಯ ಬಹುಮಾನ ಸಾನಿಧ್ಯ ಉಜಿರೆ, ತೃತೀಯ ಬಹುಮಾನ ರಮ್ಯಾ ಉಪ್ಪಿನಂಗಡಿ ಮತ್ತು ವೈಷ್ಣವಿ ಉಜಿರೆ ಪಡೆದರು.30ನೇ ತಾರೀಕಿನ ಒಳಗೆ ಕಂತನ್ನು ಕಟ್ಟಿದ್ದವರಿಗೆ ಒಂದು ವಿಶೇಷ ಬಹುಮಾನ ಕೂಡ ಸಿಕ್ಕಿತ್ತು.ಇನ್ನೂ 10ನೇ ತಾರೀಕು ಒಳಗೆ ಕಂತನ್ನು ಕಟ್ಟಿದ್ದವರಿಗೆ ಚಿನ್ನದ ನಾಣ್ಯ ಬಹುಮಾನ ಕೂಡ ಸಿಕ್ಕಿತು.

ಲೋಬೋ ಟಿ.ವಿ.ಎಸ್.ಮಾಲಕ ರೋನಾಲ್ಡ್ ಲೋಬೋ ಮಾತನಾಡಿ ಪವ‌ರ್ ಆನ್ ಸಂಸ್ಥೆ ಬೆಳ್ತಂಗಡಿಯಲ್ಲಿ ಪ್ರಸಿದ್ಧವಾದ ಸಂಸ್ಥೆಯಾಗಿದೆ.

ಶೀತಲ್ ಜೈನ್‌ರವರು ತುಂಬಾ ಶ್ರಮ ಪಟ್ಟಿದ್ದಾರೆ.ತುಂಬಾ ಕಷ್ಟಪಟ್ಟು ಉದ್ಯಮವನ್ನು ಬೆಳೆಸಿದ್ದಾರೆ. ಅವರು ತುಂಬಾ ಸೇವೆಯನ್ನು ಮಾಡುತ್ತಾರೆ. ಅವರ ಹತ್ತಿರ ಏನಾದರೂ ಹೇಳಿದರೆ ತಕ್ಷಣ ಸ್ಪಂದಿಸುತ್ತಾರೆ ಎಂದರು.

ಪವರ್ ಆನ್ ಸಂಸ್ಥೆಯ ಮಾಲಕ ಶೀತಲ್ ಜೈನ್ ಎಲ್ಲರನ್ನು ಸ್ವಾಗತಿಸಿದರು.ಯುವ ಸಾಹಿತಿ ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

Related posts

ದ.ಕ ಹಾಲು ಒಕ್ಕೂಟದ ವತಿಯಿಂದ ಹೆಣ್ಣು ಕರುಗಳ ಪ್ರದರ್ಶನ

Suddi Udaya

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರಿಂದ ಅರಸಿನಮಕ್ಕಿಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಉದ್ಘಾಟನೆ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಬಾಯಿ ಮತ್ತು ಹಲ್ಲಿನ ಆರೋಗ್ಯದ ಮುಂಜಾಗ್ರತಾ ಕ್ರಮದ ಕುರಿತು ಕಾರ್ಯಾಗಾರ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಹೋರಾಟಗಳಿಗೆ ಭಾರತೀಯ ಮಜ್ದೂರು ಸಂಘದ ಜಿಲ್ಲಾದ್ಯಕ್ಷ ಅನಿಲ್ ಕುಮಾರ್ ಯು ಬೆಂಬಲ

Suddi Udaya

ಗರ್ಡಾಡಿ: ಕುಂಡದಬೆಟ್ಟು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

Suddi Udaya

ತೆಕ್ಕಾರು ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ

Suddi Udaya
error: Content is protected !!