September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಅವ್ಯಾಚವಾಗಿ ಬೈದು ಹಲ್ಲೆ ಆರೋಪ – ಬಳಂಜ ಪ್ರಕಾಶ್ ಶೆಟ್ಟಿಯವರಿಂದ‌ ಪೊಲೀಸರಿಗೆ ದೂರು

ಬಳಂಜ : ಹಿಂಬದಿಯಿಂದ ಬಂದು ತನ್ನನ್ನು ತಳ್ಳಿ, ಈ ಬಗ್ಗೆ ಪ್ರಶ್ನಿಸಿದಾಗ ಅವ್ಯಾಚವಾಗಿ ಬೈದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ, ಬಳಂಜ ಗ್ರಾಮದ ಪ್ರಕಾಶ್ ಶೆಟ್ಟಿಯವರು ಅಶ್ವಿನ್ ಪೂಜಾರಿ ಎಂಬವರ ವಿರುದ್ಧ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕಾಶ್‌ ಶೆಟ್ಟಿ ಹಾಗೂ ಅಶ್ವಿನ್‌ ಪೂಜಾರಿ ಎಂಬಾತನಿಗೂ ಎಲೆಕ್ಟ್ರೀಷಿಯನ್ ಕೆಲಸದ ವಿಚಾರವಾಗಿ ಮನಸ್ತಾಪ ಇದ್ದು, ಮೇ 20 ರಂದು ರಾತ್ರಿ ಪ್ರಕಾಶ್ ಶೆಟ್ಟಿಯವರು ಬಳೆಂಜ ಗ್ರಾಮದಲ್ಲಿ ತನ್ನ ಪರಿಚಯಸ್ಥರ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳಿದ್ದು, ಅದೇ ಕಾರ್ಯಕ್ರಮಕ್ಕೆ ಆಶ್ವಿನ್ ತನ್ನ ತಾಯಿಯೊಂದಿಗೆ ಬಂದಿರುತ್ತಾರೆ. ಈ ವೇಳೆ ಪ್ರಶಾಂತ್ ಪೂಜಾರಿ ರವರು ಮನೆಯ ಅಂಗಳದಲ್ಲಿ ನಿಂತಿದ್ದ ಸಮಯ, ಅಶ್ವಿನ್ ಎಂಬಾತನು ಹಿಂಬದಿಯಿಂದ ಬಂದು ತಳ್ಳಿದ್ದು, ಈ ಬಗ್ಗೆ ಪ್ರಕಾಶ್ ಶೆಟ್ಟಿ ಪ್ರಶ್ನಿಸಿದಾಗ. ಆರೋಪಿಯು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುತ್ತಾರೆ ಎಂದು ಪ್ರಕಾಶ್ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.


ಹಲ್ಲೆಯಿಂದ ಗಾಯಗೊಂಡ ಪ್ರಕಾಶ್ ಶೆಟ್ಟಿಯವರು ಬೆಳ್ತಂಗಡಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಈ ದೂರನ್ನು ನೀಡಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 48/2024 ಕಲಂ : 341, 323,504, 506 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ನಾಲ್ಕೂರು ತೋಟದಪಲ್ಕೆ ನಾರಾಯಣ ಪೂಜಾರಿ ನಿಧನ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಮಂತ್ರಿಮಂಡಲ ರಚನೆ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

Suddi Udaya

ತೀರಾ ಹದಗೆಟ್ಟ ಪಡ್ಡಂದಡ್ಕ ರಸ್ತೆ: ಶಾಲಾ ಮಕ್ಕಳಿಂದ ದುರಸ್ತಿ ಕಾರ್ಯ

Suddi Udaya

ಗುರುವಾಯನಕೆರೆ:ಎಕ್ಸೆಲ್ ಕಾಲೇಜಿನಲ್ಲಿ ಕೆಎಂಎಫ್ ನಂದಿನಿ ಮಾರಾಟ ಮಳಿಗೆ ಉದ್ಘಾಟನೆ

Suddi Udaya

ಶಿಬಾಜೆ ಜನಸ್ಪಂದನ ಸಭೆ

Suddi Udaya
error: Content is protected !!