25.5 C
ಪುತ್ತೂರು, ಬೆಳ್ತಂಗಡಿ
April 24, 2026
ಆಯ್ಕೆಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಡ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ನಡ : 2024-25 ನೇ ಸಾಲಿನ ವಿದ್ಯಾರ್ಥಿ ಶಾಲಾ ಸಂಸತ್ತಿಗೆ ಅಭ್ಯರ್ಥಿಗಳನ್ನು ಇಂದು ನೇರವಾಗಿ ಆಯ್ಕೆ ಮಾಡಲಾಯಿತು.

ಶಾಲಾ ನಾಯಕನಾಗಿ ಪ್ರತೀಶ್ 10ನೇ ತರಗತಿ, ಶಾಲಾ ಉಪನಾಯಕಿಯಾಗಿ ಸಾನ್ವಿ ಎಂ 9ನೇ ತರಗತಿ ಆಯ್ಕೆಗೊಂಡರು.


ಉಳಿದಂತೆ ಕ್ರೀಡಾ ಮಂತ್ರಿಯಾಗಿ ಅಕ್ಷತ್- ಲಾವಣ್ಯ, ಸಾಂಸ್ಕೃತಿಕ ಮಂತ್ರಿಗಳಾಗಿ ಸಿಂಚನಾ, ಅಕ್ಷಯ್, ಸಾನ್ವಿ, ಅತೀಶ್ ಗೌಡ, ಆರೋಗ್ಯ ಮತ್ತು ಆಹಾರ ಮಂತ್ರಿಗಳಾಗಿ ಕಾರ್ತಿಕ್, ಸಿಮಾಕ್, ಚೈತ್ರ, ಅರ್ಷಿಯಾ, ಶಿಕ್ಷಣ ಮತ್ತು ಶಿಸ್ತು ಮಂತ್ರಿಗಳಾಗಿ ಭವಿತ್, ದೀಕ್ಷಿತ್, ಉಲ್ಫಿಯಾ ಬಾನು, ರಝ್ಮಿನಾ ಫಾತಿಮಾ, ಗೃಹ ಮಂತ್ರಿಗಳಾಗಿ ಅನ್ವಿತ್, ಅಭಿಷೇಕ್, ಕೃಷಿ ಮಂತ್ರಿಗಳಾಗಿ ನಿಖಿಲ್, ರಕ್ಷಿತಾ, ಯಶ್ವಿತ್ , ರಾಯಿಶಾ, ಲೋಕೇಶ್, ಶರಣ್ಯ, ನೀರಾವರಿ ಮಂತ್ರಿಗಳಾಗಿ ಚಿಂತನ್, ಶಾಕಿರ್, ಆದಿತ್ಯ, ಮನ್ವಿತ್, ಸ್ವಚ್ಛತಾ ಮಂತ್ರಿಗಳಾಗಿ ಗುಲ್ ಷನ್ ಬಾನು, ಸುಭೀಕ್ಷಾ, ಪ್ರಜ್ವಲ್ ಶೆಟ್ಟಿ, ಶ್ರೇಯಸ್ ಆಯ್ಕೆಗೊಂಡರು.

ಮುಖ್ಯ ಶಿಕ್ಷಕರಾದ ಮೋಹನ ಬಾಬು ಡಿ ಹುದ್ದೆ ಮತ್ತು ಕರ್ತವ್ಯಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಶ್ರೀಮತಿ ಶೋಭಾ ಎಸ್ ಸ್ವಾಗತಿಸಿ, ಶ್ರೀಮತಿ ಜಯಂತಿ ಸ್ಟ್ರೆಲ್ಲಾ ವಂದಿಸಿದರು. ಶಿವಪುತ್ರ ಸುಣಗಾರ, ಶ್ರೀಮತಿ ಸುಜಯ ಬಿ, ಶ್ರೀಮತಿ ಸುಧಾ, ಮಹಾವೀರ ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಪ್ರಾ.ಕೃ.ಪ. ಸಹಕಾರ ಸಂಘದ ರೈತ ಸದಸ್ಯರಿಂದ ಕಡಮ್ಮಾಜೆ ಫಾರ್ಮ್ಸ್ ಗೆ ಭೇಟಿ: ಸಾಕಾಣಿಕೆಗಳ ಹಾಗೂ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಶಿಬಿರ

Suddi Udaya

ಭಾರೀ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ

Suddi Udaya

ವೇಣೂರು ಶ್ರೀಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಆಹ್ವಾನ

Suddi Udaya

ಮಿತ್ತಬಾಗಿಲು ಗ್ರಾಮ ಸಭೆ: ಆಶ್ರಯ ಯೋಜನೆಯ ಮನೆ ಮಂಜೂರಾತಿಯಲ್ಲಿ ಪಾರದರ್ಶಕತೆ ಇರಬೇಕೆಂದು ಗ್ರಾಮಸ್ಥರ ಒತ್ತಾಯ

Suddi Udaya

ಬುರುಡೆ ಪ್ರಕರಣ: ತನಿಖೆ ಮಾಡಿ ಅಂತಿಮ ವರದಿ ಸಲ್ಲಿಸಲು ಸೂಚನೆ

Suddi Udaya

ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಂದ ತೋಡಿನ ಹೂಳೆತ್ತುವ ಕಾರ್ಯಕ್ರಮ

Suddi Udaya
error: Content is protected !!