22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ಪದಪ್ರಧಾನ

ಬೆಳ್ತಂಗಡಿ ; ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಮಂತ್ರಿ ಮಂಡಲದ ಪದ ಪ್ರಧಾನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ಪರೀದೀಕ್ಷಕರಾದ ಮುರುಳಿಧರ್ ಹಾಗೂ ಶ್ರೀಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀ ಧನ್ಯ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಪೊಲೀಸ್ ಇಲಾಖೆಯ ಪರಿವೀಕ್ಷಕರಾದ ಶ್ರೀ ಮುರಳೀಧರ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಹೊಸದಾಗಿ ಆಯ್ಕೆಯಾದ ಶಾಲಾ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣ ವಚನವನ್ನು ವಾಚಿಸಿದರು. ಶಾಲಾ ಮಂತ್ರಿಮಂಡಲ ವನ್ನು ಉದ್ಘಾಟಿಸಿದ ಪೊಲೀಸ್ ಪರಿವೀಕ್ಷಕರಾದ ಮುರಳಿಧರ್ ರವರು ಮಾತನಾಡಿ , ಎಸ್ ಡಿ ಎಂ ಸಂಸ್ಥೆಯು ರಾಜ್ಯದಲ್ಲೇ ಪ್ರಸಿದ್ಧ ಸಂಸ್ಥೆಯಾಗಿದೆ. ಸಂಸ್ಥೆಯ ಗೌರವವನ್ನು ಉಳಿಸುವಂತಹ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು, ಒಳ್ಳೆಯ ಸಂಸ್ಕಾರ , ಸಂಸ್ಕೃತಿ ಸಂಸ್ಥೆಯಿಂದ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೆ ತಮ್ಮ ಜ್ಞಾನ ಭಂಡಾರ ವನ್ನು ಹೆಚ್ಚಿಸಿಕೊಳ್ಳಬೇಕು. ಪೂಜ್ಯ ಖಾವಂದರ ಸಂಸ್ಥೆ ಇನ್ನಷ್ಟು ಹೆಸರು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯದ ಧನ್ಯ ಕುಮಾರ್ ಆಗಮಿಸಿ ಆಯ್ಕೆಯಾದ ಹೊಸ ಮಂತ್ರಿಮಂಡಲಕ್ಕೆ ಶುಭ ಹಾರೈಸಿ, ಮತದಾನದ ಪ್ರಕ್ರಿಯೆ ಹಾಗೂ ತಾನು ನಾಯಕನಾಗಿ ಇನ್ನೊಬ್ಬರನ್ನು ನಾಯಕನನ್ನಾಗಿ ಬೆಳೆಸುವ ನಾಯಕತ್ವದ ಗುಣ ವಿದ್ಯಾರ್ಥಿಗಳ ಜೀವನದಲ್ಲಿ ಬೆಳೆಯಬೇಕು. ಉತ್ತಮ ಜೀವನ ಮೌಲ್ಯ ಹವ್ಯಾಸ, ಸಂಸ್ಕಾರಗಳು ಬೆಳೆಸಿಕೊಂಡು ತನ್ನ ಮುಂದಿನ ಜೀವನದ ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು ಸಮಾಜಕ್ಕೆ ಉತ್ತಮ ಸತ್ ಪ್ರಜೆಯಾಗಿ ಬಾಳಬೇಕು.

ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಆಯುಷ್ ಕೆ, ಉಪನಾಯಕನಾಗಿ 9ನೇ ತರಗತಿಯ ಜಯದೀಪ್, ಶಿಕ್ಷಣ ಮಂತ್ರಿಯಾಗಿ 8ನೇ ತರಗತಿಯ ಸುಪ್ರೀತ್, ಕ್ರೀಡಾ ಮಂತ್ರಿಯಾಗಿ 8ನೇ ತರಗತಿಯ ಸಮ್ಯಕ್, ಆರೋಗ್ಯ ಮತ್ತು ಶಿಸ್ತು ಮಂತ್ರಿಯಾಗಿ 10ನೇ ತರಗತಿಯ ಸ್ವಿತಾ ಜೈನ್, ಸಾಂಸ್ಕೃತಿಕ ಮಂತ್ರಿಯಾಗಿ 8ನೇ ತರಗತಿಯ ಭೂಮಿಕಾ, ಮಾನವ ಸಂಪನ್ಮೂಲ ಮಂತ್ರಿಯಾಗಿ 9ನೇ ತರಗತಿಯ ಸುವೀನ್ ಆಯ್ಕೆಯಾದರು.

ಕಾರ್ಯಕ್ರಮದ ನಿರೂಪಣೆಯನ್ನು ಚಾರಿತ್ರ ಹತ್ತನೇ ತರಗತಿ, ಸ್ವಾಗತವನ್ನು ಆರನೇ ತರಗತಿಯ ಸ್ತವ್ಯ ರಾಜೇಶ್ ಶೆಟ್ಟಿ,ಧನ್ಯವಾದವನ್ನು ಎಂಟನೇ ತರಗತಿಯ ದೀಪ್ತ ನೇರವೇರಿಸಿ ಕೊಟ್ಟು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಶಾಲಾ ಶಿಕ್ಷಕ ವೃಂದದವರು ಸಹಕಾರವಿತ್ತು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Related posts

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ: ಪಂಚಾಯತ್ ಸಿಬ್ಬಂದಿಗಳಿಂದ ಸದಸ್ಯರಿಗೆ ವಿದಾಯ ಸಮಾರಂಭ

Suddi Udaya

ಕ್ಯಾಂಪ್ಕೊ ನಿಯಮಿತ ಮಂಗಳೂರು “ಸಾಂತ್ವನ” ಯೋಜನೆಯಡಿ ಕನ್ನಾಜೆಯ ಬೆನೆಡಿಕ್ಟ್ ವೇಗಸ್ ರಿಗೆ ವೈದ್ಯಕೀಯ ನೆರವು

Suddi Udaya

ತೋಟತ್ತಾಡಿಯಲ್ಲಿ ಗೇರು ತೋಟಕ್ಕೆ ಬೆಂಕಿ

Suddi Udaya

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ:ಆರೋಪಿಗೆ ನ್ಯಾಯಾಂಗ ಬಂಧನ

Suddi Udaya

ಕ್ರಿಯೇಟಿವ್ ಸಂಸ್ಥೆಯ ಉಚಿತ ಶಿಕ್ಷಣದ ‘ಹೊಂಗಿರಣ’ಯೋಜನೆಗೆ ಅರ್ಜಿ ಆಹ್ವಾನ

Suddi Udaya

ವಿದ್ಯಾಶ್ರೀ ಅಡೂರ್ ಅವರ 3 ನೇ ಕವನಸಂಕಲನ “ಪಯಣ” ಕವನಗಳ ಹಾದಿಯಲ್ಲಿ ಬಿಡುಗಡೆ

Suddi Udaya
error: Content is protected !!