July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಳ ಯಕ್ಷಕೂಟದ ವತಿಯಿಂದ ಯಕ್ಷಗಾನ ವೈಭವ

ಬೆಳ್ತಂಗಡಿ : ಜು.1 ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜು.1 ರಂದು ರಾತ್ರಿ ಯಕ್ಷಗಾನ ವೈಭವ ಜರುಗಿತು.
ಕಳಿಯ ಸಿ.ಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ, ಸುರೇಶ ಕುಮಾರ್ ಆರ್.ಎನ್. ಅಶೋಕ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.


ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಮಳೆಗಾಲದ ಮಹೋನ್ನತ ತೆಂಕು ಮತ್ತು ಬಡಗು ಸಂಯೋಜನೆಯಲ್ಲಿ ಭಾಗವತರಾಗಿ ಸತೀಶ ಶೆಟ್ಟಿ ಪಟ್ಲ,ಸೃಜನ್ ಹೆಗಡೆ, ಸುಧೀರ್ ಭಟ್ ಪೆರ್ಡೂರು, ಶಶಾಂಕ ಎಲಿಮಲೆ,ಹಿಮ್ಮೇಳ ತೆಂಕು:ಗುರು ಪ್ರಸಾದ್ ಬೊಳಿಂಜಡ್ಕ,ಕೌಶಿಕ್ ರಾವ್ ಪುತ್ತಿಗೆ,ಬಡಗು:ಶಶಿಕುಮಾರ್ ಆಚಾರ್ಯ ಉಡುಪಿ,ಪ್ರಜ್ವಲ್ ಕುಮಾರ್ ಮುಂದಾಡಿ, ಚಕ್ರತಾಳ: ಸುಂದರ ನಾಯ್ಕಪಾಣಾಜೆ, ನಿರೂಪಣೆ: ವಿನಾಯಕ ಭಟ್ ಗಾಳಿಮನೆ ಯಕ್ಷ ವೈಭವ ವನ್ನು ನಡೆಸಿದರು.


ನಾಳ ಯಕ್ಷಕೂಟ ಅಧ್ಯಕ್ಷರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ನೇತೃತ್ವ ವಹಿಸಿದ್ದರು. ದೇವಸ್ಥಾನದ ವಿವಿಧ ಸಮಿತಿಯ ಸದಸ್ಯರು,ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಸದಸ್ಯ,ನಾಳ ಯಕ್ಷ ಕೂಟ ಕಾರ್ಯದರ್ಶಿ ರಾಘವ ಹೆಚ್. ಸ್ವಾಗತಿಸಿ, ವಂದಿಸಿದರು.

Related posts

ಬೆಳ್ತಂಗಡಿ : ವಿಪರೀತ ಮಳೆಯಾಗುತ್ತಿರುವ ಕಾರಣ ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

Suddi Udaya

ಉಜಿರೆ: ಧರ್ಮಜಾಗೃತಿ ಸಮಿತಿಯ ಪ್ರಧಾನ ಸಂಚಾಲಕರಾಗಿ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಆಯ್ಕೆ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ದಕ್ಷಿಣ ಭಾರತ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಎಸ್ ಡಿ ಎಂ ಪದವಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಭಾಗಿ

Suddi Udaya

ಧರ್ಮ ಸಂರಕ್ಷಣ ರಥಯಾತ್ರೆಯ ಆಗಮನ, ಉಜಿರೆಯಲ್ಲಿ ಅದ್ದೂರಿ ಸ್ವಾಗತ

Suddi Udaya

ವರ್ತಕರ ಸಂಘದಿಂದ ನೂತನ ಡಿ.ವೈ.ಎಸ್.ಪಿ. ಸಿ.ಕೆ ರೋಹಿಣಿ ಯವರಿಗೆ ಅಭಿನಂದನೆ

Suddi Udaya
error: Content is protected !!