September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘ (ರಿ)ಬೆಳ್ತಂಗಡಿ ಇದರ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷ ವಿನಯ್ ಹೆಗ್ಡೆ ನಾರಾವಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ದಯಾನಂದ ಸಂಜಯನಗರ ಸ್ವಾಗತಿಸಿ, ಸಂಘದ ಖರ್ಚು ವೆಚ್ಚವನ್ನು ಮಂಡಿಸಿದರು. ಸಂಘದ ಗೌರವಾಧ್ಯಕ್ಷರಾಗಿ ಗಿರಿರಾಜ್ ಬಾರಿತ್ತಾಯ, ಅಧ್ಯಕ್ಷರಾಗಿ ವಿನಯ್ ಹೆಗ್ಡೆ ನಾರಾವಿ ಮತ್ತು ಕಾರ್ಯದರ್ಶಿಯಾಗಿ ದಯಾನಂದ್ ಸಂಜಯನಗರ ಇವರನ್ನೂ ಮುಂದುವರಿಸುವುದೆಂದು ತೀರ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷರಾಗಿ ಗಣೇಶ್ ಕಾಣಾಲ್, ರಫೀಕ್ ಬಾಂಬಿಲ, ಕೋಶಾಧಿಕಾರಿಯಾಗಿ ಜಯಕುಮಾರ್ ಕಲ್ಲಗುಡ್ಡೆ , ಜೊತೆ ಕಾರ್ಯದರ್ಶಿಯಾಗಿ ರೋಹಿತ್ ಧರ್ಮಸ್ಥಳ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಘದ ಸಲಹೆಗಾರರಾಗಿ ವಸಂತ್ ಮಜಲ್, ಮಂಜುನಾಥ್ ಕಾಮತ್, ಜನಾರ್ಧನ ಗೌಡ, ವಿಶ್ವನಾಥ್ ಲಾಯಿಲ, ರಾಜಪ್ರಕಾಶ್ ಪಡ್ಡಾಯಿ, ಕಾರ್ಯಕಾರಿಣಿ ಸದಸ್ಯರಾಗಿ ನವಾಝ್ , ಅಧಿಷ್ ಕಾಮತ್,ರಾಘವೇಂದ್ರ, ಮನೋಜ್, ದಿಶಾಂತ್ ಮಿತ್ತಮಾರ್, ಸುಜಿತ್ ಚಂದ್ರಪಾಲ್, ಗಣೇಶ್ ಲಾಯಿಲ, ಧನಂಜಯ್ ರಾವ್, ನಝೀರ್ ಶಕ್ತಿನಗರ, ರವಿ ಗುಂಪಲಾಜೆ, ಸಹದೇವ್ ಉಜಿರೆ ಆಯ್ಕೆಯಾದರು. ಸಭೆಯಲ್ಲಿ ಮಾಜಿ ಶಾಸಕ ದಿವಂಗತ ವಸಂತ ಬಂಗೇರ ಇವರಿಗೆ ನುಡಿನಮನ ಸಲ್ಲಿಸಲಾಯಿತು.

Related posts

ಗುರುಚೇತನ ಪುನಃಶ್ಚೇತನ-ಬೆಳ್ತಂಗಡಿ ಧರ್ಮಪ್ರಾಂತ್ಯದ ಶಾಲಾ ಅಧ್ಯಾಪಕ ಶಿಬಿರ

Suddi Udaya

ತಾಲೂಕಿನ ಬಡ ಮುಸ್ಲಿಂರನ್ನು ಅಜ್ಮೀರ್‌ಗೆ ಕಳುಹಿಸುವ ಪಿತೂರಿ: ಮತದಾರರು ಜಾಗೃತರಾಗಬೇಕು: ಸಲೀಂ ಗುರುವಾಯನಕರೆ

Suddi Udaya

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ದರ್ಶನಕ್ಕಾಗಿ ಬಿಜೆಪಿ ಕಾರ್ಯಕರ್ತರಿಗೆ ಆಯಾ ರಾಜ್ಯದ ನೇತೃತ್ವದಲ್ಲಿ ವಿಶೇಷ ಅವಕಾಶ: ಬೆಳಾಲಿನ ಬಿಜೆಪಿ ಮುಖಂಡ ಸೀತಾರಾಮ ಬಿ.ಎಸ್. ರವರಿಂದ ಭಕ್ತರಿಗೆ ಮಾರ್ಗದರ್ಶನ ನೀಡುವ ಸೇವೆ

Suddi Udaya

ಬಂಗೇರ ನಿಧನಕ್ಕೆ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಸಂತಾಪ

Suddi Udaya

ಬೆಳ್ತಂಗಡಿಯಲ್ಲಿ ಭಾರಿ ರಿಯಾಯಿತಿ ದರದಲ್ಲಿ ಬ್ರಾಂಡೆಡ್ ಬಟ್ಟೆಗಳ ಮಾರಾಟ ಮೇಳ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ. ಸಹಕಾರ ಸಂಘದ ರೈತ ಸದಸ್ಯರಿಂದ ಕಡಮ್ಮಾಜೆ ಫಾರ್ಮ್ಸ್ ಗೆ ಭೇಟಿ: ಸಾಕಾಣಿಕೆಗಳ ಹಾಗೂ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಶಿಬಿರ

Suddi Udaya
error: Content is protected !!