July 23, 2026
ಅಪರಾಧ ಸುದ್ದಿ

ಗುಂಡ್ಯ ಬಳಿ ಟ್ರಕ್ ಕಾರಿಗೆ – ಡಿಕ್ಕಿ ಗೇರುಕಟ್ಟೆ ಪರಿಸರದ ಐವರಿಗೆ ಗಾಯ:ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಟ್ರಕ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸಹಿತ ಮೂವರು ಗಂಭೀರ ಗಾಯಗೊಂಡು ತಾಯಿ ಮಗುವಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಹೆಚ್.ಪಿ.ಸಿ.ಎಲ್.ಸಂಸ್ಥೆಯಲ್ಲಿ ಲೈನ್ ವಾಕರ್ ಗುತ್ತಿಗೆ ಆಧಾರದಲ್ಲಿ ಉದ್ಯೋಗಿ ಗೇರುಕಟ್ಟೆ ಸಮೀಪದ ಯೋಗೀಶ್ ಗೌಡ ಬೆಂಗಳೂರಿನಲ್ಲಿರುವ ಹುಂಡೈ ಶೋ ರೂಮ್ ನಿಂದ ಐ. ಟೆನ್ .(ಹಳೆಯ) ಕಾರನ್ನು ಎರಡು ದಿನಗಳ ಹಿಂದೆ ಖರೀದಿಸಿ ಬೆಂಗಳೂರು, ತಿರುಪತಿ ಹಾಗೂ ಪುಣ್ಯ ಕ್ಷೇತ್ರ ಗಳಿಗೆ ಭೇಟಿ ನೀಡಿ ಕಳೆದ ರಾತ್ರಿ ಬೆಂಗಳೂರಿನಿಂದ ಊರಿಗೆ ಬರುವ ದಾರಿಯಲ್ಲಿ ಈ ಘಟನೆ ಸಂಭವಿಸಿದೆ.

ಕಾರು ಮಾಲಕ ಚಿಕ್ಕಪ್ಪ ನ ಮಗ ಹರೀಶ್ (ಕಾರು ಚಾಲಕ) ಯೋಗೀಶ ಗೌಡ ನ ತಂಗಿ ಗಂಡ (ಬಾವ) ಲೋಕೇಶ ಯಾನೆ ಹರೀಶ್ ಗೌಡ ಹಾಗೂ ಚಾಲಕ ಹರೀಶ ಗೌಡರ ಪತ್ನಿ ತಾರಾ ಓರ್ವ ಮಗಳು ಕಾರಿನಲ್ಲಿ ಪ್ರಯಾಣಿಸುತ್ತಿದರು.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾ
ಳಾಗಿದ್ದು ಇಬ್ಬರು ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ವೇಣೂರು: ಅಕ್ರಮ ಗೋ ಸಾಗಾಟ: ಆರೋಪಿಗಳು ಪೊಲೀಸರ ವಶ

Suddi Udaya

ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪುದುವೆಟ್ಟಿನ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

Suddi Udaya

ಪುದುವೆಟ್ಟು: ಮಿಯಾರು ನಿವಾಸಿ ಶೇಖರ್ ಗೌಡ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅತ್ಯಾಚಾರ ಪ್ರಕರಣ: ತನಿಖೆ ಆರಂಭಿಸಿದ ಸಿಐಡಿ ತಂಡ

Suddi Udaya

ಸೌತಡ್ಕ: ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣ ಎಣಿಕೆ ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿಗಳಿಂದಲೇ ಗೋಲ್‌ಮಾಲ್

Suddi Udaya

ಕಣಿಯೂರು ಅಕ್ರಮ ಡೀಸೆಲ್ ಪ್ರಕರಣ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು

Suddi Udaya
error: Content is protected !!