22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕವರದಿ

ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಪುತ್ತೂರು ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರಿಂದ ಪೂಜಾರ್ಪಣೆ

ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಜುಲೈ 19ರಂದು ಆರಂಭಗೊಂಡ ನವದಿನಗಳ ನೋವೇನಾ ಮಹೋತ್ಸವದ ಎಂಟನೇ ದಿನದಲ್ಲಿ ಪುತ್ತೂರು ಸೀರೋ ಮಲಂಕರ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ಗೀವರ್ಗೀಸ್ ಮಾರ್ ಮಕಾರಿಯೋಸ್ ಬಲಿ ಪೂಜೆಯನ್ನು ಅರ್ಪಿಸಿದರು ಮತ್ತು ಸಂತ ಅಲ್ಫೋನ್ಸ ನೋವೇನಾದ ಆಶೀರ್ವಾದವನ್ನು ನೀಡಿದರು.

ಪರಮ ಪೂಜ್ಯರು ಸೇವೆ, ತ್ಯಾಗ, ಮತ್ತು ದೇವರಲ್ಲಿನ ಪ್ರೀತಿಯನ್ನು ಬಾಳಿನಲ್ಲಿ ಮೈಗೂಡಿಸಿಕೊಂಡಾಗ, ಎಲ್ಲವನ್ನು ಸಹಿಸುವ ತಾಳುವ ಶಕ್ತಿಯನ್ನು ಪ್ರತಿಯೋರ್ವ ವ್ಯಕ್ತಿ ಜೀವನದಲ್ಲಿ ಪಡೆಯಬಹುದೆಂದು ಕರೆ ನೀಡಿದರು.

ಬೇಥನಿ ಸಂಸ್ಥೆಗಳ ವಂದನಿಯ ವರ್ಗೀಸ್, ಕೈಪನಡ್ಕ ಪುತ್ತೂರು ಧರ್ಮ ಪ್ರಾಂತ್ಯದ ಚಾನ್ಸಲರ್ ವಂದನಿಯ ಫಾ. ಬಿಜು ಜೋನ್, ಸೆಂಟ್ ಜೋರ್ಜ್ ಸಂಸ್ಥೆಗಳ ಸಂಚಾಲಕರಾದ ವಂದನಿಯ ಫಾ. ನೋಮಿಸ್ ಸಹಾಯಕರಾಗಿ ಭಾಗವಹಿಸಿ ಪ್ರಾರ್ಥಿಸಿದರು. ವಂದನಿಯ ಫಾ. ಎಬಿನ್ ಸ್ವಾಗತಿಸಿ ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ವಂದಿಸಿದರು.

Related posts

ಕಾಶಿಪಟ್ಣ ಕೇಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಯತೀಶ್ ಕೇದಿಗೆ

Suddi Udaya

ವಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ವಾಗ್ಮಿ ದಾಮೋದರ ಶರ್ಮ ಸಂವಾದ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಐಪಿಒ ತಂತ್ರಗಳ ಬಗ್ಗೆ ಪ್ರಾಯೋಗಿಕ ಅಧಿವೇಶನ” ಕುರಿತು ಮಾಹಿತಿ ಕಾರ್ಯಗಾರ:

Suddi Udaya

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿಗೆ ತಾ.ಪಂ ಇಓ ಭೇಟಿ, ಸ್ಥಳ ಪರಿಶೀಲನೆ

Suddi Udaya

ಬಾನಂಗಳದಲ್ಲಿ ಗೋಚರಿಸಿದ ಸೂಪರ್ ಬ್ಲೂಮೂನ್ ಸೆರೆಹಿಡಿದ ಅಂಡಿಂಜೆಯ ಛಾಯಾಗ್ರಹಕ ಚಂದ್ರಹಾಸ ಹೆಬ್ಬಾರ್

Suddi Udaya

ಉಜಿರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ‘ಕೂಸಿನ ಮನೆ’ ಶಿಶು ಪಾಲನಾ ಕೇಂದ್ರ ಉದ್ಘಾಟನೆ

Suddi Udaya
error: Content is protected !!