September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕವರದಿ

ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಪುತ್ತೂರು ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರಿಂದ ಪೂಜಾರ್ಪಣೆ

ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಜುಲೈ 19ರಂದು ಆರಂಭಗೊಂಡ ನವದಿನಗಳ ನೋವೇನಾ ಮಹೋತ್ಸವದ ಎಂಟನೇ ದಿನದಲ್ಲಿ ಪುತ್ತೂರು ಸೀರೋ ಮಲಂಕರ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ಗೀವರ್ಗೀಸ್ ಮಾರ್ ಮಕಾರಿಯೋಸ್ ಬಲಿ ಪೂಜೆಯನ್ನು ಅರ್ಪಿಸಿದರು ಮತ್ತು ಸಂತ ಅಲ್ಫೋನ್ಸ ನೋವೇನಾದ ಆಶೀರ್ವಾದವನ್ನು ನೀಡಿದರು.

ಪರಮ ಪೂಜ್ಯರು ಸೇವೆ, ತ್ಯಾಗ, ಮತ್ತು ದೇವರಲ್ಲಿನ ಪ್ರೀತಿಯನ್ನು ಬಾಳಿನಲ್ಲಿ ಮೈಗೂಡಿಸಿಕೊಂಡಾಗ, ಎಲ್ಲವನ್ನು ಸಹಿಸುವ ತಾಳುವ ಶಕ್ತಿಯನ್ನು ಪ್ರತಿಯೋರ್ವ ವ್ಯಕ್ತಿ ಜೀವನದಲ್ಲಿ ಪಡೆಯಬಹುದೆಂದು ಕರೆ ನೀಡಿದರು.

ಬೇಥನಿ ಸಂಸ್ಥೆಗಳ ವಂದನಿಯ ವರ್ಗೀಸ್, ಕೈಪನಡ್ಕ ಪುತ್ತೂರು ಧರ್ಮ ಪ್ರಾಂತ್ಯದ ಚಾನ್ಸಲರ್ ವಂದನಿಯ ಫಾ. ಬಿಜು ಜೋನ್, ಸೆಂಟ್ ಜೋರ್ಜ್ ಸಂಸ್ಥೆಗಳ ಸಂಚಾಲಕರಾದ ವಂದನಿಯ ಫಾ. ನೋಮಿಸ್ ಸಹಾಯಕರಾಗಿ ಭಾಗವಹಿಸಿ ಪ್ರಾರ್ಥಿಸಿದರು. ವಂದನಿಯ ಫಾ. ಎಬಿನ್ ಸ್ವಾಗತಿಸಿ ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ವಂದಿಸಿದರು.

Related posts

ಪತ್ನಿಯಿಂದ ಪತಿಯ ಕೊಲೆ ಪ್ರಕರಣ: ಕೊಲೆ ಪ್ರಕರಣ ಸಾಬೀತಾದರೂ ಪತ್ನಿಗಿಲ್ಲ ಶಿಕ್ಷೆ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ವೇಣೂರು ಎಸ್‌ಡಿಎಂ ಐಟಿಐ ಯಲ್ಲಿ 41ನೇ ಬ್ಯಾಚ್‌ಗೆ ಭವ್ಯ ಚಾಲನೆ

Suddi Udaya

ಮುಂಡಾಜೆ ಕಾಯರ್ತೋಡಿ- ಕಲ್ಲಾರ್ಯ ಸಾರ್ವಜನಿಕ ನಾಗಬನದಲ್ಲಿ ಕ್ಷೀರಾಭಿಷೇಕ, ಮಹಾಪೂಜೆ

Suddi Udaya

ನಿಡ್ಲೆ ಶೀರೂರು ಪರ್ಯಾಯ ಸ್ವಾಗತ ಸಮಿತಿಯಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಗೌರವಾರ್ಪಣೆ

Suddi Udaya

ಅಯೋಧ್ಯೆ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಪ್ರಯುಕ್ತ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ

Suddi Udaya
error: Content is protected !!