July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಆಟಿದ ಕೂಟ

ಮುಂಡಾಜೆ : ಬಂಟರ ಗ್ರಾಮ ಸಮಿತಿ ಮುಂಡಾಜೆ ಇದರ ವತಿಯಿಂದ ಜು.28 ರಂದು ಮುಂಡಾಜೆ ಪಂಚಾಯತ್ ಭವನದಲ್ಲಿ ಆಟಿದ ಕೂಟ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಗರಿ ರಾಮಣ್ಣ ಶೆಟ್ಟಿ, ಮುಂಡ್ರುಪಾಡಿ ವಿಶ್ವನಾಥ ಶೆಟ್ಟಿ ಮತ್ತು ವನಿತಾ ಶೆಟ್ಟಿ, ಅಧ್ಯಕ್ಷರು ಉಜಿರೆ ವಲಯ ಬಂಟರ ಸಂಘ ಇವರು ದೀಪ ಬೆಳಗಿಸಿ ಮತ್ತು ಚೆಣ್ಣೆ ಮಣೆ ಆಡಿ ನೆರವೇರಿಸಿದರು.

ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಗರಿ ಇವರು ಆಟಿದ ದಿನದ ಮಹತ್ವದ ಬಗ್ಗೆ ತಿಳಿಸಿದರು.

ಪ್ರಸಾದ್ ಶೆಟ್ಟಿ ಮಂಜುಶ್ರೀ ನಗರ ಮತ್ತು ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಇವರು ವಿವಿಧ ಭಕ್ತಿ ಸುಗಿಪು ಹಾಡುಗಳು ಮತ್ತು ಸಂದಿ ಪಾಡ್ದನಗಳನ್ನು ಹಾಡಿದರು. ಬಳಿಕ ತುಳುನಾಡ ಸಿರಿ ಎಂಬ ಯಕ್ಷಗಾನ ತಾಳಮದ್ದಲೆ ಯನ್ನು ಗ್ರಾಮದ ಬಂಟ ಕಲಾವಿದರು ನೆರವೇರಿಸಿದರು. ಗ್ರಾಮ ಸಮಿತಿಯ ಸದಸ್ಯರು ಆಟಿ ತಿಂಗಳಿನ ವಿವಿಧ ತಿಂಡಿ ತಿನಿಸುಗಳನ್ನು ತಂದು ಶಿವರಾಜ್ ರೈ ಸೋಮಂತಡ್ಕ ಇವರ ಮನೆಯಲ್ಲಿ ಭೋಜನ ಕೂಟ ವನ್ನು ಏರ್ಪಡಿಸಿದರು. ಗ್ರಾಮ ಸಮಿತಿಯ ಎಲ್ಲಾ ಸದಸ್ಯರು ಸಹಕರಿಸಿದರು.

ಜೊತೆ ಕಾರ್ಯದರ್ಶಿ ನವೀನ್ ಶೆಟ್ಟಿ ಇವರು ನಿರೂಪಿಸಿ,ಕಾರ್ಯದರ್ಶಿ ವಿಜಯಕುಮಾರ್ ರೈ ಇವರು ವಂದಿಸಿದರು.

Related posts

ವಾಣಿ ಪ.ಪೂ. ಕಾಲೇಜಿನಲ್ಲಿ “ಗೆಳತಿ” ಭರವಸೆಯ ನಾಳೆಗಾಗಿ ಆಪ್ತ ಸಮಾಲೋಚನ ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ಅನುಮಾನಸ್ಪದ ರೀತಿಯಲ್ಲಿ ಯುವಕನೋರ್ವ ಮೃತದೇಹ ಪತ್ತೆ

Suddi Udaya

ಅರಸಿನಮಕ್ಕಿಯಲ್ಲಿ 22ನೇ ವರ್ಷದ ಅಷ್ಟಮಿ : ಹರೀಶ್ ಪೂಂಜರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಲಾಯಿಲ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದ ವಾರ್ಷಿಕ ಮಾರಿ ಪೂಜೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶ್ರೀ ವೀರಾಂಜನೇಯ ಸೇವಾ ಸಮಿತಿ ಸಂಸ್ಥೆಯಿಂದ ದಿನನಿತ್ಯ ಬಳಕೆಯ ನೆರವು ಕಾರ್ಯಕ್ರಮ

Suddi Udaya

ಇಂದಬೆಟ್ಟು: ಹೆಬ್ಬಾವನ್ನು ಬೇಟೆಯಾಡಿದ ಕಾಳಿಂಗ ಸರ್ಪ: ಸ್ನೇಕ್ ಅಶೋಕ್ ರವರಿಂದ ಹೆಬ್ಬಾವು ರಕ್ಷಣೆ

Suddi Udaya
error: Content is protected !!