ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಉಜಿರೆ ನಿವಾಸಿ ಅಲ್ಪೋನ್ಸ್‌ ಕರ್ಡೋಜ್ ರಿಗೆ ರೂ. 2.72 ಲಕ್ಷ ವಂಚನೆ

ಬೆಳ್ತಂಗಡಿ: ದುಬೈ ಮೂಲದ ಆಲ್ ಜಬೇರ್ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉಜಿರೆ ಮೂಲದ ನಿವಾಸಿ ಅಲ್ಪೋನ್ಸ್‌ ಕರ್ಡೋಜ್ ರವರಿಂದ ಹಂತ ಹಂತವಾಗಿ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡ ಘಟನೆ ಜು.31 ರಂದು ನಡೆದಿದೆ.

ಉಜಿರೆ ಮಂಜುಶ್ರೀ ನಗರ ನಿವಾಸಿ ಕೊನ್ಸಟೆನಿ ಅಲ್ಪೋನ್ಸ್‌ ಕರ್ಡೋಜ್ (64 ವರ್ಷ)ಎಂಬವರು ಈ ಹಿಂದೆ ವಿದೇಶದಲ್ಲಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದವರು, ಕಳೆದ 4.5 ವರ್ಷದಿಂದ ಊರಿನಲ್ಲಿಯೇ ಇದ್ದವರು ಫೇಸ್ಬುಕ್ ಜಾಲತಾಣದ ಲಿಂಕ್ ಮುಖಾಂತರ ದುಬೈ ಮೂಲದ ಆಲ್ ಜಬೇರ್ (al jaber) ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗದ ಭರವಸೆ ಇರುವುದನ್ನು ಸತ್ಯ ಎಂದು ನಂಬಿ, ಲಿಂಕ್ ಮೂಲಕ ಅಪರಿಚಿತ ಕಂಪನಿಯ HRA ಅಧಿಕಾರಿ ಎಂದು ನಂಬಿಸಿ, ನಂತರ ಪಿರ್ಯಾದುದಾರರು ಆತನ ಮೊಬೈಲ್ ನಂಬ್ರ ಪಡೆದುಕೊಂಡು, ಆತನೊಂದಿಗೆ ವಾಟ್ಸಾಪ್ ಮೂಲಕ ಸಂವಹನ ಬೆಳೆಸಿದಾಗ ಪ್ರಾರಂಭಿಕ ಖರ್ಚು ಎಂದು ಅಲ್ಪೋನ್ಸ್‌ ಕರ್ಡೋಜ್ ನಂಬಿಸಿ ಅಲ್ಪೋನ್ಸ್‌ ಕರ್ಡೋಜ್ ರಿಂದ ಅಪರಿಚಿತನ ಬ್ಯಾಂಕ್ ಖಾತೆಗೆ ಜು. 24 ರಿಂದ ಜು.31 ರವರೆಗೆ ಹಂತ ಹಂತವಾಗಿ ರೂ. 2,72,621/- ಮೊತ್ತ ನಗದನ್ನು ಆತನ ಖಾತೆಗೆ ವರ್ಗಾಯಿಸಿಕೊಂಡು, ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಅಲ್ಪೋನ್ಸ್‌ ಕರ್ಡೋಜ್ ಮೋಸ ಹೋಗಿರುವ ಬಗ್ಗೆ ತಿಳಿದು, ನಂಬಿಸಿ ಮೋಸ ಮಾಡಿದ ಅಪರಿಚಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ. 77/2024 ಕಲಂ: 318(2), 318(4) ಭಾರತೀಯ ನ್ಯಾಯ ಸಂಹಿತೆ ಮತ್ತು 67(D) IT act ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಬೆಳ್ತಂಗಡಿ : ಕಾಲುಗಳನ್ನು ಕತ್ತರಿಸಿದ ರೀತಿಯಲ್ಲಿ ಚಿರತೆ ಮೃತದೇಹ ಪತ್ತೆ: ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದೌಡು ಪರಿಶೀಲನೆ

Suddi Udaya

ಪಡ್ಡಂದಡ್ಕ ಕಟ್ಟೆ: ಪುನಃ ಪ್ರತಿಷ್ಠಾ ಕಲಶಾಭಿಷೇಕ, ದೊಂಪದಬಲಿ ನೇಮೋತ್ಸವ

Suddi Udaya

ಇಂದಬೆಟ್ಟು : ಜಾನುವಾರುಗಳಿಗೆ ಚರ್ಮಗಂಟು ರೋಗದ ವಿರುದ್ಧ ಲಸಿಕಾ ಅಭಿಯಾನ

Suddi Udaya

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಕಳಿಯ ಗ್ರಾ.ಪಂ.ನಲ್ಲಿ ಮೆಸ್ಕಾಂನಿಂದ ಗೃಹಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ ಕಾರ್ಯಕ್ರಮ

Suddi Udaya

ಉಜಿರೆ: ಧರ್ಮ ಸಂರಕ್ಷಣಾ ಪಾದಾಯಾತ್ರೆಯ ಪೋಸ್ಟರ್ ಬಿಡುಗಡೆ

Suddi Udaya

ವೇಣೂರು : ಗೋಳ್ತ್ಯಾರು ತಮ್ಮಯ್ಯ ದೇವಾಡಿಗ ನಿಧನ

Suddi Udaya
error: Content is protected !!