September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬದನಾಜೆ ಹೈಸ್ಕೂಲ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೆಳಾಲು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ ) ಬೆಳ್ತಂಗಡಿ ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ (ರಿ )ಬೆಳ್ತಂಗಡಿ ಮತ್ತು ಸರಕಾರಿ ಪ್ರಾಥಮಿಕ ಶಾಲೆ ಬದನಾಜೆ ಹೈಸ್ಕೂಲ್ ಇದರ ಸಹಯೋಗದೊಂದಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತ್ತು.


ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಬಾಬು ನಾಯ್ಕ್, ಉಮ್ಮರಬ್ಬ ಮತ್ತು ಶಾಲಾ ಮುಖ್ಯ ಶಿಕ್ಷಕರಾದ ಜಮುನಾ ಕೆ ಸ್ ಒಕ್ಕೂಟದ ಮತ್ತು ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿಯವರಾದ ದೇವಿಪ್ರಸಾದ್ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕಿಯಾಗಿ ಆಗಮಿಸಿದ ಜನಜಾಗೃತಿ ವೇದಿಕೆಯ ಶಿಬಿರಧಿಕಾರಿಯವರಾದ ದೇವಿ ಪ್ರಸಾದ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು, ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗುತ್ತಿದ್ದು ತಮ್ಮ ಜೀವನವನ್ನು ಹಾನಿಗೊಳಪಡಿಸುತ್ತಿದ್ದು, ವಿನಾಶದ ಅಂಚಿಗೆ ದಾಪುಗಾಲನ್ನು ಇಡುತ್ತಿದ್ದಾರೆ ಕುಡಿತ ಧೂಮಪಾನ ಮಾದಕ ದ್ರವ್ಯ ವ್ಯಸನ ಮುಕ್ತರಾಗುವಂತೆ ಕರೆ ನೀಡುವುದರೊಂದಿಗೆ ಕೆಲವು ದೃಷ್ಟಾಂತಗಳನ್ನು ವಿದ್ಯಾರ್ಥಿಗಳಿಗೆ ನೈಜ ಘಟನೆ ಬಗ್ಗೆ ಉದಾರಣೆಯೊಂದಿಗೆ ತಿಳಿಸಿದರು. ವಿದ್ಯಾರ್ಥಿಗಳು ಆಧುನಿಕ ಯುಗದ ಕೆಟ್ಟ ಚಾಳಿಗಳಿಗೆ ಬಲಿಯಾಗದಂತೆ ಜಾಗೃತಗೊಳಿಸುವಂತೆ ಮನವರಿಕೆ ಮಾಡಿದರು.

ಗಾಂಜಾದಿಂದಾಗಿ ಮಕ್ಕಳಲ್ಲಿ ವಿದ್ಯಾಭ್ಯಾಸದಲ್ಲಿ ಕೊರತೆ ಆಹಾರ ಸೇವನೆ ಕಡಿಮೆ ಆಗುತ್ತಿದೆ ಮೊಬೈಲ್ ಬಳಕೆಯ ಸಾಧಕ ಭಾದಕಗಳನ್ನು ತಿಳಿಸಿದರು ಮುಂದಿನ ಯುವ ಜನಾಂಗವು ದುಶ್ಚಟಗಳಿಗೆ ಬಲಿಯಾಗದಂತೆ ಕಿವಿ ಮಾತನ್ನು ತಿಳಿಸುವುದರೊಂದಿಗೆ ಎಲ್ಲಾ ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಬೋಧಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಮುನಾ ಕೆ ಯಸ್ ರವರು ಕಾರ್ಯಕ್ರಮದ ಬಗ್ಗೆ ಮಾತನಾಡುತ ಯುವಪೀಳಿಗೆ ಜನ ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತ ವಯಿಸಬೇಕು,ಎಂದು ತಿಳಿಸುತ ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಮಾಜಿ ವಲಯ ಅಧ್ಯಕ್ಷರು ಬದನಾಜೆ ಒಕ್ಕೂಟದ ಅಧ್ಯಕ್ಷರು ಸೇವಾಪ್ರತಿನಿದಿ ಹೇಮಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಮಹಾದೇವ ಶೆಟ್ಟಿ ಬಿ ನಿರೂಪಿಸಿ ಸ್ವಾಗತಿಸಿದರು ಪ್ರಾಥನೆ ಶಾಲಾ ವಿದ್ಯಾರ್ಥಿ ಕುಮಾರಿ ನಿಶ್ಮಿತಾ, ರಶ್ಮಿತಾ ಪ್ರಣಮ್ಯ ಮಾಡಿದರು ಶಾಲಾ ಶಿಕ್ಷಕಿ ಸುಮಂಗಲ ಧನ್ಯವಾದ ನೀಡಿದರು.

Related posts

ನಾವೂರು: ಡೈನಿಂಗ್ ಹಾಲ್ ನಲ್ಲಿ ಕಿಂಗ್ ಕೋಬ್ರಾ

Suddi Udaya

ಉಜಿರೆ: ಶ್ರೀ ಧ.ಮ. ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನ್ಯೂ ಬೈನರಿ ಅಕ್ರಿಡಿಟೇಶನ್ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (NEP) ಕುರಿತು ಉಪನ್ಯಾಸ

Suddi Udaya

ಕಕ್ಕಿಂಜೆ ಮನ್ನಡ್ಕಪಾದೆ ಗುಡ್ಡಕ್ಕೆ ಬೆಂಕಿ

Suddi Udaya

ಮಿನಿ ವಿಮಾನ ನಿಲ್ದಾಣ: ಧರ್ಮಸ್ಥಳ ನೀರಚಿಲುಮೆ ಬಳಿ ಜಾಗ ಪರಿಶೀಲನೆ ನಡೆಸಿದ ಅಧಿಕಾರಿಗಳು

Suddi Udaya

ಅಳದಂಗಡಿಯಲ್ಲಿ ಮಕ್ಕಳ ಸಮ್ಮೇಳನ: ವಿಜಯ್ ಕುಮಾರ್ ಜೈನ್ ನೇತೃತ್ವದಲ್ಲಿ, ಯಕ್ಷಗಾನ ಸಂಭ್ರಮ,ಕುಣಿತ ಭಜನೆ, ಜನಪದ ಉತ್ಸವ

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ.ನಲ್ಲಿ ವಾರ್ಷಿಕೋತ್ಸವ

Suddi Udaya
error: Content is protected !!