24 C
ಪುತ್ತೂರು, ಬೆಳ್ತಂಗಡಿ
June 21, 2026
ತಾಲೂಕು ಸುದ್ದಿ

ನಾಳ: ಶಿಥಿಲ ಗೊಂಡ ಅಂಗನವಾಡಿ ಕೇಂದ್ರಕ್ಕೆ ತಡೆ ಬೇಲಿ ಹಾಗೂ ನೂತನ ಕಟ್ಟಡ ರಚನೆಗೆ ಪೋಷಕರ ಆಗ್ರಹ

ಬೆಳ್ತಂಗಡಿ : . ನಾಳ ಅಂಗನವಾಡಿ ಕೇಂದ್ರ ಬಾಲ ವಿಕಾಸ ಸಮಿತಿ ಹಾಗೂ ಪೋಷಕರ ಸಭೆ ಆ.6.ರಂದು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ನಾಳ ಅಂಗನವಾಡಿ ಕೇಂದ್ರ 42 ಹಿಂದೆ ಪ್ರಾರಂಭವಾಗಿದ್ದು,. 38 ವರ್ಷಗಳ ಹಿಂದೆ ನಿರ್ಮಾಣವಾದ ಕಟ್ಟಡ ಶಿಥಿಲವಾಗಿದೆ.ನೂತನ ಕಟ್ಟಡ ರಚನೆ ಆಗಬೇಕೆಂದು ಪೋಷಕರು ಬಾಲ ವಿಕಾಸ ಸಮಿತಿಯವರು ಒತ್ತಾಯಿಸಿದರು. ಈಗಾಗಲೇ ಅಂಗನವಾಡಿ ಕೇಂದ್ರ ವಠಾರದಲ್ಲಿದ್ದ ಅಪಾಯಕಾರಿ ಮರಗಳನ್ನು ತೆರವು ಗೊಳಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಮೀಸಲಾದ 0.15 ಸೆಂಟ್ಸ್ ಜಾಗದ ಆಕ್ರಮಣವಾಗದಂತೆ ತಕ್ಷಣ ಸಿಮೆಂಟು ಕಂಬಗಳನ್ನು ಅಳವಡಿಸಿ ತಂತಿ ಬೇಲಿ ಮಾಡುವುದಾಗಿ ತೀರ್ಮಾನಿಸಿದರು.
ಕಳಿಯ ಗ್ರಾಮ ಪಂಚಾಯತ್ ವತಿಯಿಂದ ಅಂಗನವಾಡಿ 5 ಸಾವಿರ ಮೌಲ್ಯದ ಉಪಕರಣಗಳನ್ನು ವಿವರಿಸಲಾಯಿತು.ಅಂಗನವಾಡಿ ಅಭಿವೃದ್ಧಿಗೆ ಶ್ರಮ ವಹಿಸಿದ ಕೇಶವ ಪೂಜಾರಿ ನಾಳ ಅವರನ್ನು ಸನ್ಮಾನಿಸಿ ಗೌರವಿಸಿದರು. ಸ್ಥಳೀಯ ವಿಧ್ಯಾಭಿಮಾನಿ ಕಲ್ಲುಕಂಬ,ತಂತಿ ಹಾಗೂ ಚರಂಡಿ, ಮೋರಿ ವ್ಯವಸ್ಥೆಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಭವಾನಿ ಲೋಕೇಶ್ ಅಧ್ಯಕ್ಷತೆ

ವಹಿಸಿದರು. ಈ ಸಂದರ್ಭದಲ್ಲಿ ಕಳಿಯ ಗ್ರಾ.ಪಂ. ಅಧ್ಯಕ್ಷ ದಿವಾಕರ ಎಮ್., ಕಳಿಯ ಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಕೆ,ಸುಧಾಕರ ಮಜಲು,ಪುಷ್ಪವತಿ, ಲತೀಫ್,ಕಳಿಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕುಂಞ್ಞ ಕೆ. ಮಾಜಿ ಅಧ್ಯಕ್ಷ ಕೇಶ‌ವ ಪೂಜಾರಿ ನಾಳ, ನಾಳ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ,ರಕ್ತೇಶ್ವರಿ ಪದವು ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನ್ಯಾಯತರ್ಪು ಆಶಾ ಕಾರ್ಯಕರ್ತೆ ಶಶಿಕಲಾ, ಪೂರ್ಣಿಮಾ, ಬಾಲ ವಿಕಾಸ ಸಮಿತಿ ಪದಾಧಿಕಾರಿಗಳು ಹಾಗೂ ಮಕ್ಕಳ ಪೋಷಕರು ಭಾಗವಹಿಸಿದರು. ಅಂಗನವಾಡಿ ಕಾರ್ಯಕರ್ತೆ ಸ್ವಾಗತಿಸಿ ಧನ್ಯವಾದ ವಿತ್ತರು.

Related posts

ಲಾಯಿಲ: ಶ್ರೀ ಮಹಮ್ಮಾಯಿ ಅಮ್ಮನವರ ಮಾರಿ ಪೂಜೋತ್ಸವ

Suddi Udaya

ತುಮಕೂರುನಲ್ಲಿ ನಡೆದ ಘಟನೆಯನ್ನು ನಿಷ್ಪಕ್ಷಪಾತವಾದ ತನಿಖೆ ನಡೆಸಲು ಸಿ.ಓ.ಡಿ.ಗೆ ವಹಿಸಲು ಕೆ.ಪಿ.ಸಿ.ಸಿ. ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಆಗ್ರಹ

Suddi Udaya

ಉದ್ಯಮಿ ಶಶಿಧರ ಶೆಟ್ಟಿ ಬರೋಡರಿಂದ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಬಡ ಬಂಟ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು

Suddi Udaya

ಕುಂಟಾಲಪಳಿಕೆ ಅಂಗನವಾಡಿ ಕೇಂದ್ರದ 28ನೇ ವರ್ಷದ ಸಂಭ್ರಮ “ಮಕ್ಕಳ ಹಬ್ಬ

Suddi Udaya

ಲಾಯಿಲ ಬಲಮುರಿ ವಿಘ್ನೇಶ್ವರನ ಸನ್ನಿಧಿಯಲ್ಲಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ 108 ಕಾಯಿ ಗಣಹೋಮ

Suddi Udaya

ನಿಡ್ಲೆ : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

Suddi Udaya
error: Content is protected !!