23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಿರಿಯರ ಆಶಯವನ್ನು ಎತ್ತಿ ಹಿಡಿಯಲು ಸ್ವಾತಂತ್ರೋತ್ಸವ ಪ್ರೇರಣೆಯಾಗಲಿ : ಬಿ.ಎಂ.ಭಟ್

ಪಟ್ರಮೆ: ತಾವು ಹೊತ್ತ ಕನಸಿನ ಸ್ವತಂತ್ರ ಭಾರತದ ಸ್ಥಾಪನೆಗೆ ಬೇಕಾಗಿ ಅದೆಷ್ಟೋ ತ್ಯಾಗ ಬಲಿದಾನಗಳ ಮೂಲಕ ಹೋರಾಡಿದ ಹಿರಿಯ ಮಹಾತ್ಮರೆಲ್ಲರ ನೆನೆಯುವ ದಿನ ಮತ್ತು ಅವರು ನಡೆದ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವ ದಿನವೇ ಸ್ವಾತಂತ್ರೋತ್ಸವ ಎಂದು ಸಿಐಟಿಯು ನಾಯಕ ಬಿ.ಎಂ.ಭಟ್ ಹೇಳಿದರು.

ಅವರು ಪಟ್ರಮೆಯ ಜುಮ್ಮಾ ಮಸೀದಿಯಲ್ಲಿ ನಡೆದ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣಗೈದು ಮಾತಾಡುತ್ತಿದ್ದರು.

ನಮ್ಮ ಬದುಕಿನ ಮೇಲೆ ಕಾಳಜಿ ಹೊಂದಿ ಪ್ರಜಾಪ್ರಭುತ್ವ ವ್ಯವಸ್ಥೆ ತಂದು ಕೊಟ್ಟದ್ದನ್ನು ಅನುಭವಿಸಿದರೆ ಸಾಲದು, ಆ ಬದುಕನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಮಹಮ್ಮದ್ ಹನೀಫ್, ಕಾರ್ಯದರ್ಶಿ ಅನ್ಸಪ್, ಖಜಾಂಜಿ ಎನ್.ಎಸ್.ನಾಸಿರ್, ಮಹಮ್ಮದ್ ಪಿ, ಸಿಐಟಿಯು ಮುಖಂಡರಾದ ಧನಂಜಯ ಗೌಡ, ಸಿಪಿಐಎಂ ಮುಖಂಡರೂ ಮಾಜಿ ಪಂಚಾಯತು ಸದಸ್ಯರೂ ಆದ ಮಹಮ್ಮದ್ ಅನಸ್, ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರಗೀತೆ ಹಾಡಿದ ಬಳಿಕ ಮದರಸದ ಪುಟ್ಟ ವಿದ್ಯಾರ್ಥಿಗಳು ಸಾರೇ ಜಹಾಂಸೆ ಅಚ್ಚಾ ಹಾಡು ಹಾಡಿ ಗಮನ ಸೆಳೆದರು. ಮಸೀದಿಯ ಆವರಣ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು.

ಮಸೀದಿಯ ಗುರುಗಳಾದ ತಮೀಮ್ ಅನ್ಸಾರಿ ಕುಂಡಾಜೆ(ಖತೀಬರು ಪಟ್ರಮೆ) ಸ್ವಾಗತಿಸಿ, ವಂದಿಸಿದರು.

Related posts

ಪಡ್ಡಂದಡ್ಕ ನೂರುಲ್ ಹುಧಾ ಜುಮ್ಮಾ ಮಸೀದಿಯಲ್ಲಿ ಮೂಲಭೂತ ಸೌಕರ್ಯಗಳ ಲೋಕಾರ್ಪಣೆ

Suddi Udaya

ಸಾವ್ಯ ಕರ್ಪೋಟ್ಟು ಅನುರಾಧ ನಿವಾಸದ ಶ್ರೀಮತಿ ರಾಧಾ ಹೃದಯಾಘಾತದಿಂದ ನಿಧನ

Suddi Udaya

ಮಚ್ಚಿನ: ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸೇಸು ಮೂಲ್ಯ ನಿಧನ

Suddi Udaya

ಲಯನ್ಸ್ ಕ್ಲಬ್ ವತಿಯಿಂದ ಸುಲ್ಕೇರಿ ಕೋಲ್ಯಾಯದಲ್ಲಿ ನದಿಯ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಕಸಕಡ್ಡಿಗಳ ತೆರವು ಕಾರ್ಯ

Suddi Udaya

ಬುಳೇರಿಮೊಗ್ರು ಸರಕಾರಿ ಪ್ರೌಢಶಾಲೆಗೆ ಸತತ 5ನೇ ಬಾರಿಗೆ ಶೇ.100 ಫಲಿತಾಂಶ

Suddi Udaya

ವಿಧಾನಸಭೆಯ ಕಲಾಪದಲ್ಲಿ ದ.ಕ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮತ್ತು ಅಭಿವೃದ್ಧಿಯ ಬೇಡಿಕೆಗಳನ್ನು ಪ್ರಸ್ತಾಪಿಸಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!