September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಿಡಿಗಲ್ ನೇತ್ರಾವತಿ ನದಿಯಲ್ಲಿ ಸಿಕ್ಕಿಹಾಕಿಕೊಂಡ ದನಗಳ ರಕ್ಷಣೆ

ಕಲ್ಮಂಜ : ನಿಡಿಗಲ್ ನೇತ್ರಾವತಿ ನದಿಯಲ್ಲಿ ಏಕಾಏಕಿ ನೀರು ಏರಿಕೆ ಉಂಟಾದಾಗ ನದಿ ಮಧ್ಯದ ದಿಬ್ಬದಲ್ಲಿ ಸಿಲುಕಿದ್ದ ದನಗಳನ್ನು ರಕ್ಷಿಸಿದ ಘಟನೆ ಆ.21ರ ಸಂಜೆ ನಡೆದಿದೆ.

ನಿಡಿಗಲ್‌ನಲ್ಲಿ ಹರಿಯುವ ನೇತ್ರಾವತಿ ನದಿಯ ಮಧ್ಯದ ದಿಬ್ಬದಲ್ಲಿ ಮೂರು ದನಗಳು ಮೇಯುತ್ತಿದ್ದವು. ಈ ವೇಳೆ ನದಿಯಲ್ಲಿ ನೀರು ಏಕಾಏಕಿ ಏರಿಕೆಯಾಗಿದೆ. ನದಿಯ ಮಧ್ಯ ಭಾಗದಲ್ಲಿ ಸಿಲುಕಿದ್ದ ದನಗಳನ್ನು ಕರ್ತವ್ಯ ಮುಗಿಸಿ ದಿಡುಪೆ ಕಡೆ ಸರ್ವಿಸ್ ವಾಹನದಲ್ಲಿ ತೆರಳುತ್ತಿದ್ದ ಗೃಹರಕ್ಷಕ ದಳ ಮತ್ತು ಪ್ರವಾಹ ರಕ್ಷಣಾ ಪಡೆಯ ಚಾಕೋ ಕೆ.ಜೆ.ಅವರು ನೋಡಿದ್ದು ತಕ್ಷಣ ವಾಹನ ನಿಲ್ಲಿಸಿ ಜೀಪು ಚಾಲಕರಾದ ಮಾಜಿ ತಾ.ಪಂ.ಸದಸ್ಯ ಜಯರಾಮ ದಿಡುಪೆ ಹಾಗೂ ಪ್ರಸನ್ನ ಶಿಕ್ಷಣ ಸಂಸ್ಥೆಗಳ ಚಾಲಕ ಅಬೂಬಕರ್ ಅವರ ಜತೆ ನದಿಗೆ ಇಳಿದು ಈಜಿಕೊಂಡು ಹೋಗಿ ಹಗ್ಗದ ಮೂಲಕ ದನಗಳನ್ನು ನದಿಯ ಇನ್ನೊಂದು ಬದಿಗೆ ತಂದು ರಕ್ಷಣೆ ಮಾಡಿದ್ದಾರೆ.

Related posts

ವಿಷು ಕಣಿ ಆಚರಣಾ ಸಮಿತಿಯಿಂದ ಕೇರಳ ಸಂಪ್ರಾದಾಯಿಕ ವಿಷು ಕಣಿ ಆಚರಣೆ: ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಮನೋರಂಜನಾ ಕಾರ್ಯಕ್ರಮ, 30 ಬಗೆಯ ಉಟೋಪಚಾರ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳಾಲು ಯಕ್ಷ ಮಾಣಿಕ್ಯ ಕಲಾ ಸಂಘ ಉದ್ಘಾಟನೆ

Suddi Udaya

ಬೆಳ್ತಂಗಡಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿಯ ಅಧ್ಯಕ್ಷರಾಗಿ ಆನಂದ ದೇವಾಡಿಗ , ಕಾರ್ಯದರ್ಶಿಯಾಗಿ  ವೆಂಕಟರಮಣ ಆಚಾರ್  

Suddi Udaya

ಬೆಳ್ತಂಗಡಿ ಮಾಸ್ಟರ್ಸ್ ಕೋಚಿಂಗ್ ಕ್ಲಾಸ್ ನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಮೇಲಂತಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಧರ್ಮಚಾವಡಿ ಪಾಲೆತ್ತಡಿ ಗುತ್ತು ಜೀರ್ಣೋದ್ದಾರದ ಸಮಾಲೋಚನ ಸಭೆ

Suddi Udaya
error: Content is protected !!