22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಜೈನ ಮತ್ತು ಹಿಂದೂ ಸಮುದಾಯಗಳ ನಡುವೆ ಅಶಾಂತಿಯನ್ನು ಪ್ರೇರೇಪಿಸುವ ಭಾಷಣ ಆರೋಪ: ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಜಿರೆಯ ಅಜಿತ್ ಹೆಗ್ಡೆಯವರಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ಸೆ. 8 ರಂದು ಉಜಿರೆಯ ಗಣೇಶ ಚತುರ್ಥಿ ಹಬ್ಬದ ಸಾರ್ವಜನಿಕ ಸಮಾರಂಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿರುವ ವಿಷಯ ಜಾತಿ ವೈಮನಸ್ಸು ಉಂಟುಮಾಡಲು,ಸಮುದಾಯಗಳ ನಡುವೆ ಅಶಾಂತಿ ಹಾಗೂ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿಯಾಗಿದ್ದು, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಜಿರೆಯ ಅಜಿತ್ ಹೆಗ್ಡೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಣೇಶ ಚೌತಿಯ ಹಬ್ಬದ ಧಾರ್ಮಿಕ ಸಮಾರಂಭದಲ್ಲಿ ಜೈನ ಸಮುದಾಯಕ್ಕೆ ಬೆದರಿಕೆ ಹಾಕಿ, ಟೀಕೆ ಮಾಡಿ, ಅವಹೇಳನಕಾರಿ ಭಾಷಣ ಮಾಡಿದ್ದಾರೆ. ಜೈನ ಮತ್ತು ಹಿಂದೂ ಸಮುದಾಯದ ನಡುವೆ ಅಶಾಂತಿಯನ್ನು ಪ್ರೇರೇಪಿಸಲು ಮತ್ತು ಅಪಾಯಕರವಾದ ಪರಿಸರವನ್ನು ನಿರ್ಮಿಸಲು ಉದ್ದೇಶಿಸಿರುವುದು ಸ್ಪಷ್ಟವಾಗಿವೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸಮುದಾಯಗಳನ್ನು ಬೆದರಿಸಿರುವುದಲ್ಲದೆ ಹಲವಾರು ದೇವರ ಮತ್ತು ದೇವಸ್ಥಾನ ಮೊದಲಾದ ಸಾರ್ವಜನಿಕ ಸಂಸ್ಥೆಗಳ ವಿರುದ್ಧ ಅವಹೇಳನ ಪೂರ್ಣ ಶಬ್ದಗಳನ್ನು ಬಳಸಿ, ಜೈನ ವರ್ಗದ ಜನರ ಮತ್ತು ಜೈನ ಸಮುದಾಯಗಳ ಸಂಸ್ಥೆಗಳ ಮೇಲಿನ ಗೌರವವನ್ನು ಕುಗ್ಗಿಸಲು ಯತ್ನಿಸಿಸಲಾಗಿದೆ.

ಜೈನ ಹಾಗೂ ಹಿಂದೂ ಬಾಂಧವರ ಮಧ್ಯೆ ಜಾತಿ-ಧರ್ಮದ ಆಧಾರದಲ್ಲಿ ವೈರತ್ವ ಬೆಳೆಸುವ ದೊಡ್ಡ ಮಟ್ಟದ ಹಾಗೂ ದೂರಗಾಮಿ ಹುನ್ನಾರ ಮಾಡಲಾಗಿದೆ. ಇದು ಏಕತೆಗೆ ಮಾರಕವಾದ ದುರುದ್ದೇಶ ಎಂದು ದೂರಿನಲ್ಲಿ ತಿಳಿಸಿದ್ದಾರೆ.

“ಮೊದಲಿನಿಂದಲೂ ಭಾರತದ ಮೇಲೆ ಇಲ್ಲಿ ಎಷ್ಟೆಷ್ಟು ದಾಳಿಗಳಾಗಿವೆ? ಪೋರ್ಚರು, ಡಚ್ಚರು,ಫ್ರೆಂಚರು, ಅವರು, ಇವರು ಮೊಗಲರು, ಬ್ರಿಟಿಷರು, ಇವತ್ತು ಜೈನರು ಕೂಡಾ ಸ್ವತಂತ್ರ ಭಾರತದಲ್ಲಿ ಸನಾತನವಾದ ಹಿಂದೂ ಧರ್ಮವನ್ನು ಹಿಂದೂ ದೇವಾಸ್ಥಾನಗಳನ್ನು ಅದರ ದಾಖಲೆಗಳನ್ನು ನಾಶ ಮಾಡಿ ಇವತ್ತು ಜೈನರ ವಶ ಮಾಡಿಕೊಂಡಿದ್ದಾರಲ್ಲಾ… ಏನು ಹೇಳುತ್ತದೆ ಈ ಹಿಂದೂ ಸಮಾಜ?, ಏನು ಹೇಳುತ್ತದೆ ಈ ದೇಶದ ವಿಶ್ವ ಹಿಂದೂ ಪರಿಷತ್, ಏನು ಹೇಳುತ್ತದೆ? ಈ ದೇಶದ ಭಜರಂಗದಳ, ಏನು ಹೇಳುತ್ತದೆ? ಹಿಂದೂ ಸಂಘಟನೆಗಳು, ನಮ್ಮನ್ನು ಸಾಕಿ ಬೆಳೆಸಿದಂತಹ ಮಹೋನ್ನತ ಸಂಘಟನೆ ಆರ್.ಎಸ್.ಎಸ್. ಏನು ಹೇಳುತ್ತದೆ ಇವತ್ತು”?, ಮತ್ತು “ಒಟ್ಟು 0.04% ಇರುವ ಜೈನರು ಇವತ್ತು 86% ಇರುವ ಹಿಂದೂಗಳನ್ನು ಮೂರ್ಖರನ್ನಾಗಿಸಿದ್ದಾರೆ”. ಮತ್ತು “ಮುಂದಿನ ದಿನಗಳಲ್ಲಿ ಕ್ರಾಂತಿಯಾಗುತ್ತದೆ”.

ಈ ಪ್ರಚೋದನಾಕಾರಿ ಹೇಳಿಕೆಗಳು ಸಾರ್ವಜನಿಕವಾಗಿ ಕಾಳಿಚ್ಚಿನಂತೆ ಹರಿದಾಡುತ್ತಿದ್ದು ನನಗೆ ಅಭದ್ರತೆಯ ಭಾಸವಾಗುತ್ತಿದೆ ಇದರ ಬಗ್ಗೆ
ತ್ವರಿತವಾಗಿ ತನಿಖೆ ನಡೆಸಿ ಸಾರ್ವಜನಿಕ ಶಾಂತಿ ಮತ್ತು ನ್ಯಾಯಕ್ಕಾಗಿ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Related posts

ಪುಂಜಾಲಕಟ್ಟೆ ಯಕ್ಷದ್ರುವ ಪಟ್ಲ ಫೌಂಡೇಶನ್ ಮಹಿಳಾ ಘಟಕದಿಂದ ಉಮಾ ಡಿ. ಗೌಡರಿಗೆ ಸನ್ಮಾನ

Suddi Udaya

ಜೈನರಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಿರಿಯೂರಿನ ಶಾಸಕ ಡಿ. ಸುಧಾಕರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಿ: ನಿರಂಜನ್ ಜೈನ್ ಕುದ್ಯಾಡಿ‌

Suddi Udaya

ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ನೂತನ ಸಮಿತಿಗೆ ತಾಲೂಕಿನ ಐದು ಸದಸ್ಯರ ಆಯ್ಕೆ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರ ಬಿಡುಗಡೆ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಬೆಳ್ತಂಗಡಿ ಟೀಮ್ ನವಭಾರತ್ ವತಿಯಿಂದ ದಿ. ತುಷಾರ್. ಕೆ ಸ್ಮರಣಾರ್ಥ ರಕ್ತದಾನ ಶಿಬಿರ

Suddi Udaya

ಸುಲ್ಕೇರಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!