30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುದ್ದಿ ಉದಯ ವಾರಪತ್ರಿಕೆಯು ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ “ಹೇ ಶಾರದೆ” ಫೋಟೊ ಸ್ಪರ್ಧೆಯ ಫಲಿತಾಂಶ ಪ್ರಕಟ

ಬೆಳ್ತಂಗಡಿ: ಸುದ್ದಿ ಉದಯ ವಾರಪತ್ರಿಕೆಯು ಮೊದಲ ಬಾರಿಗೆ ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಹಾಗೂ ನಿಡ್ಲೆ ಅಗ್ರೀಲೀಫ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ “ಹೇ ಶಾರದೆ” ಫೋಟೊ ಸ್ಪರ್ಧೆ” ಆಯೋಜಿಸಿತ್ತು.

ಇದರ ಫಲಿತಾಂಶವು ಪ್ರಕಟಗೊಂಡಿದ್ದು ಪ್ರಥಮ ಬಹುಮಾನವನ್ನು ಶಾರ್ವಿ ಶೆಟ್ಟಿ ಸುಮುಖ ಸದನ ಕರ್ನೋಡಿ, ದ್ವಿತೀಯ ಬಹುಮಾನವನ್ನು ಓಶ್ಮಿ ಜಿ. ಅಕ್ಕಳ ಮನೆ ಪುತ್ತಿಲ, ತೃತೀಯ ಬಹುಮಾನವನ್ನು ದೀಕ್ಷಿತಾ ಶಿವಾಜಿನಗರ ಲಾಯಿಲ ಇವರು ಪಡೆದುಕೊಂಡಿದ್ದಾರೆ.

ಈ ಹಿಂದೆ ಎರಡು ಬಾರಿ ರಾಧೇ-ಕೃಷ್ಣ ಫೋಟೋ ಸ್ಪರ್ಧೆಯನ್ನು ಬೆಳ್ತಂಗಡಿ ತಾಲೂಕಿನವರಿಗೆ ಆಯೋಜಿಸಿದಾಗ ಹಲವಾರು ತಾಲೂಕಿನ ಹೊರಗಡೆ ಇರುವ ಪತ್ರಿಕೆ ಹಾಗೂ ಆನ್‌ಲೈನ್ ಓದುಗರಿಂದ ನಮಗೂ ಒಂದು ಅವಕಾಶ ನೀಡಿ ಎಂಬ ಬೇಡಿಕೆಯಂತೆ “ಹೇ ಶಾರದೇ” ಎಂಬ ಶಾರದಾ ಫೋಟೋ ಸ್ಪರ್ಧೆ ಆಯೋಜಿಸಿದ್ದು ಅದರಂತೆ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ, ಮಂಗಳೂರು, ಕಾರ್ಕಳದಿಂದ ಇನ್ನೂರಕ್ಕೂ ಮಿಕ್ಕಿ ಫೋಟೋಗಳು ಬಂದಿರುತ್ತದೆ. ಈ ಫೋಟೋ ಸ್ಪರ್ಧೆಯಲ್ಲಿ ಉಜಿರೆ ರಶ್ಮಿ ಸ್ಟುಡಿಯೋದ ರಾಮಕೃಷ್ಣ ರೈ ರವರು ತೀರ್ಪುಗಾರರಾಗಿದ್ದರು.

Related posts

ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಶೈಲೇಶ್ ಕುಮಾರ್ ಕುತೋ೯ಡಿ

Suddi Udaya

ಚಾರ್ಮಾಡಿ: ಕಂದಕಕ್ಕೆ ಉರುಳಿ ಬಿದ್ದ ಕಾರು: ಓರ್ವ ಮಹಿಳೆ ಸಾವು, ಮಕ್ಕಳು ಸಹಿತ ನಾಲ್ವರಿಗೆ ಗಂಭೀರ ಗಾಯ

Suddi Udaya

ಕಕ್ಕಿಂಜೆಯಲ್ಲಿ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಳಾಂತರಿತ ಶಾಖೆ ಉದ್ಘಾಟನೆ

Suddi Udaya

8ನೇ ವರ್ಷದ ಮಂಗಳೂರು ಕಂಬಳಕ್ಕೆ ಅದ್ದೂರಿ ಚಾಲನೆ: ರಾಮ – ಲಕ್ಷ್ಮಣ ಜೋಡುಕರೆಯಲ್ಲಿ ಪಂದ್ಯಾಟ

Suddi Udaya

ಲಾಯಿಲ: ಕಾಶಿಬೆಟ್ಟು ಬಳಿ ಇಂಡಸ್ಟ್ರೀಯಲ್ ಎಸ್ಟೇಟ್ ಉದ್ದಿಮೆದಾರರಿಂದ ಪ್ರತಿಭಟನೆಯ ನಾಮಫಲಕ: ಶೀಘ್ರವೇ ಸಮಸ್ಯೆ ಪರಿಹರಿಸದಿದ್ದಲ್ಲಿ ಬಹಿರಂಗ ಪ್ರತಿಭಟನೆ

Suddi Udaya

ವೇಣೂರು ವಲಯ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!