22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುದ್ದಿ ಉದಯ ವಾರಪತ್ರಿಕೆಯು ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ “ಹೇ ಶಾರದೆ” ಫೋಟೊ ಸ್ಪರ್ಧೆಯ ಫಲಿತಾಂಶ ಪ್ರಕಟ

ಬೆಳ್ತಂಗಡಿ: ಸುದ್ದಿ ಉದಯ ವಾರಪತ್ರಿಕೆಯು ಮೊದಲ ಬಾರಿಗೆ ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಹಾಗೂ ನಿಡ್ಲೆ ಅಗ್ರೀಲೀಫ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ “ಹೇ ಶಾರದೆ” ಫೋಟೊ ಸ್ಪರ್ಧೆ” ಆಯೋಜಿಸಿತ್ತು.

ಇದರ ಫಲಿತಾಂಶವು ಪ್ರಕಟಗೊಂಡಿದ್ದು ಪ್ರಥಮ ಬಹುಮಾನವನ್ನು ಶಾರ್ವಿ ಶೆಟ್ಟಿ ಸುಮುಖ ಸದನ ಕರ್ನೋಡಿ, ದ್ವಿತೀಯ ಬಹುಮಾನವನ್ನು ಓಶ್ಮಿ ಜಿ. ಅಕ್ಕಳ ಮನೆ ಪುತ್ತಿಲ, ತೃತೀಯ ಬಹುಮಾನವನ್ನು ದೀಕ್ಷಿತಾ ಶಿವಾಜಿನಗರ ಲಾಯಿಲ ಇವರು ಪಡೆದುಕೊಂಡಿದ್ದಾರೆ.

ಈ ಹಿಂದೆ ಎರಡು ಬಾರಿ ರಾಧೇ-ಕೃಷ್ಣ ಫೋಟೋ ಸ್ಪರ್ಧೆಯನ್ನು ಬೆಳ್ತಂಗಡಿ ತಾಲೂಕಿನವರಿಗೆ ಆಯೋಜಿಸಿದಾಗ ಹಲವಾರು ತಾಲೂಕಿನ ಹೊರಗಡೆ ಇರುವ ಪತ್ರಿಕೆ ಹಾಗೂ ಆನ್‌ಲೈನ್ ಓದುಗರಿಂದ ನಮಗೂ ಒಂದು ಅವಕಾಶ ನೀಡಿ ಎಂಬ ಬೇಡಿಕೆಯಂತೆ “ಹೇ ಶಾರದೇ” ಎಂಬ ಶಾರದಾ ಫೋಟೋ ಸ್ಪರ್ಧೆ ಆಯೋಜಿಸಿದ್ದು ಅದರಂತೆ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ, ಮಂಗಳೂರು, ಕಾರ್ಕಳದಿಂದ ಇನ್ನೂರಕ್ಕೂ ಮಿಕ್ಕಿ ಫೋಟೋಗಳು ಬಂದಿರುತ್ತದೆ. ಈ ಫೋಟೋ ಸ್ಪರ್ಧೆಯಲ್ಲಿ ಉಜಿರೆ ರಶ್ಮಿ ಸ್ಟುಡಿಯೋದ ರಾಮಕೃಷ್ಣ ರೈ ರವರು ತೀರ್ಪುಗಾರರಾಗಿದ್ದರು.

Related posts

ಎಸ್ ಡಿ ಯಂ ಪಾಲಿಟೆಕ್ನಿಕ್ – ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ಪ.ಪಂ. ನಾಮ ನಿರ್ದೇಶಿತ ಸದಸ್ಯರಾಗಿ ಹೆನ್ರಿ ಲೋಬೊ ಆಯ್ಕೆ

Suddi Udaya

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

Suddi Udaya

ನಡ ಗ್ರಾಮದ ಬಸ್ರಾಯ ವೆಂಟೆಡ್ ಡ್ಯಾಮ್ ನಲ್ಲಿ ಪ್ರವಾಹಕ್ಕೆ ಬಂದು ಸಿಲುಕಿಕೊಂಡಂತಹ ಕಸ ಹಾಗೂ ಮರದ ದಿಮ್ಮಿಗಳ ತೆರವು

Suddi Udaya

ಅಕ್ರಮ ಕಲ್ಲು ಕೋರೆ ದಾಳಿ ನೆಪದಲ್ಲಿ ಬಿಜೆಪಿ ಕಾರ್ಯಕರ್ತನ ಬಂಧನ: ಇಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ

Suddi Udaya

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೆ ಟಿ ಗಟ್ಟಿಯವರಿಗೆ ನುಡಿನಮನ

Suddi Udaya
error: Content is protected !!