ಬಂಗಾಡಿ ಬಿಎಸ್ಎನ್ಎಲ್ ನೆಟ್ವರ್ಕ್ಸ್ ಸಮಸ್ಯೆಯಿಂದ ಗ್ರಾಹಕರು ಕಂಗಾಲು: ಸಂಬಂಧ ಪಟ್ಟವರು ನೆಟ್ವರ್ಕ್ಸ್ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಇಂದಬೆಟ್ಟು, ಬಂಗಾಡಿ ಪರಿಸರದ ಬಿಎಸ್ಎನ್ಎಲ್ ಗ್ರಾಹಕರಿಗೆ ಒಂದುವಾರದಿಂದ ನೆಟ್ವರ್ಕ್ಸ್ ಇಲ್ಲದೆ ಹಣ ವರ್ಗಾವಣೆ, ಹಾಗೂ ಬ್ಯಾಂಕ್ ವ್ಯವಹಾರಗಳು, ಇತರ ಅಗತ್ಯ ಕರೆ ಸಂಪರ್ಕಕ್ಕೂ ಬಹಳ ಸಮಸ್ಯೆಗಳಾಗುತ್ತಿದ್ದು ಗ್ರಾಹಕರು ಕಂಗಲಾಗಿದ್ದಾರೆ.

ಈ ಪ್ರದೇಶದಲ್ಲಿ ಬಿಎಸ್ಎನ್ಎಲ್ ಬಿಟ್ಟು ಬೇರೆ ಯಾವುದೆ ನೆಟ್ವರ್ಕ್ಸ್ ಗಳು ಇಲ್ಲಿ ಇರುವುದಿಲ್ಲ. ಅತೀ ಹೆಚ್ಚು ಬಿಎಸ್ಎನ್ಎಲ್ ಗ್ರಾಹಕರನ್ನು ಹೊಂದಿರುವ ಬಂಗಾಡಿ ಯಲ್ಲಿ ಗ್ರಾಹಕರು ಪದೆ ಪದೆ ಕೆಟ್ಟು ಹೋಗುತ್ತಿರುವ ನೆಟ್ವರ್ಕ್ಸ್ ನಿಂದ ರೀಚಾರ್ಜ್ ಮಾಡಿದರೂ ಸಮರ್ಪಕ ನೆಟ್ವರ್ಕ್ಸ್ ನೀಡದೆ ಗ್ರಾಹಕರನ್ನು ಹಗಲು ದರೋಡೆ ಮಾಡುತ್ತಿರುವಂತಾಗಿದೆ ಸಂಬಂಧ ಪಟ್ಟ ಇಲಾಖೆಯವರು ಬಂಗಾಡಿ ಪರಿಸರದ ಬಿಎಸ್ಎನ್ಎಲ್ ಗ್ರಾಹಕರ ನೆಟ್ವರ್ಕ್ಸ್ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರ ಬೇಡಿಕೆಯಾಗಿದೆ

Leave a Comment

error: Content is protected !!