July 23, 2026
Uncategorized

ನಾರಾವಿ ವಲಯ ಬಂಟರ ಸಂಘದ ಸಭೆ

ನಾರಾವಿ: ನಾರಾವಿ ವಲಯ ಬಂಟರ ಸಂಘದ ಸಭೆಯು ಶ್ರೀ ಮಹಮ್ಮಾ ಯಿ ಸಭಾಭವನ ಸುಲ್ಕೇರಿಯಲ್ಲಿ ಅ. 20ರಂದು ನಡೆಯಿತು ಈ ಸಭೆಯ ಅಧ್ಯಕ್ಷತೆಯನ್ನು ವಲಯ ಬಂಟರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ವಹಿಸಿದ್ದರು ವೇದಿಕೆಯಲ್ಲಿ ನಾರಾವಿ ವಲಯ ಸಂಚಾಲಕರಾದ ರವಿಶೆಟ್ಟಿ ವಿಶ್ವನಾಥ್ ಶೆಟ್ಟಿ, ಸುಳ್ಕೇರಿ ಗ್ರಾಮ ಸಮಿತಿಯ ಗೌರವ ಅಧ್ಯಕ್ಷರಾದ ರಾಮಶೆಟ್ಟಿ ಅಧ್ಯಕ್ಷರಾದ ಮಹಾಬಲ ಶೆಟ್ಟಿ, ವಲಯದ ಕಾರ್ಯದರ್ಶಿ ಶಿವಣ್ಣ ಶೆಟ್ಟಿ ಕೋಶಾಧಿಕಾರಿ ಅರುಣ್ ಶೆಟ್ಟಿ ಉಪಸ್ಥಿತರಿದ್ದರು ಶ್ರೀಮತಿ ಸ್ವಾತಿ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು ಈ ಸಭೆಯಲ್ಲಿ ಕಾಶಿಪಟ್ಟಣ ಗ್ರಾಮ ಸಮಿತಿಯ ಸಭೆಯನ್ನು ನವೆಂಬರ್ 10ನೇ ತಾರೀಕಿನಂದು ಕೊಕ್ರಾಡಿ ಗ್ರಾಮ ಸಮಿತಿಯ ಸಭೆಯನ್ನು ನವೆಂಬರ್ 14ನೇ ತಾರೀಕಿನಂದು ಹಾಗೂ ನಾರಾವಿ ಕುತ್ಲೂರು ಗ್ರಾಮ ಸಮಿತಿಯ ಸಭೆಯನ್ನು ನವೆಂಬರ್ 17ರಂದು ನಡೆಸುವುದೆಂದು ತೀರ್ಮಾನಿಸಲಾಯಿತು ಸಭೆಯಲ್ಲಿ ಹಿರಿಯರಾದ ದೇವರಾಜ ಶೆಟ್ಟಿ ಪೆರಾಡಿ ಸಂಜೀವ ಶೆಟ್ಟಿ ನಾರಾಯಣಶೆಟ್ಟಿ ಪೆರಾಡಿ ರಾಜು ಶೆಟ್ಟಿ ಸುರೇಶ್ ಶೆಟ್ಟಿ ಕೊಕ್ರಾಡಿ ಸುಂದರ ಶೆಟ್ಟಿ, ಸುಲ್ಕೇರಿ ಕೃಷ್ಣಶೆಟ್ಟಿ ನಾರಾವಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಕೂತ್ಲೂರುಹಾಗೂ ಇನ್ನಿತರ ಬಂಟ ಬಂಧುಗಳು ಈ ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು

Related posts

ದೇಯಿ ಬೈದ್ಯೆತಿ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ

Suddi Udaya

ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ರೀಲ್ಸ್‌ ತಾರೆ ಇದೀಗ ಸೀರಿಯಲ್ ಬೆಡಗಿ: ನಾರಾವಿಯ ಕೃಷ್ಣಪ್ರಿಯಾ ಭಟ್ ನಂದಗೋಕುಲದಲ್ಲಿ ರಕ್ಷಾ

Suddi Udaya

ಧರ್ಮಸ್ಥಳದ ವಿರುದ್ಧದ ಅಪಪ್ರಚಾರಕ್ಕೆ ಖಂಡಿಸಿಡಾ.ಎಂ.ಎನ್ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಹಕಾರಿಗಳಿಂದಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ‘ಧರ್ಮ ಜಾಗೃತಿ ಯಾತ್ರೆ’

Suddi Udaya

ಲಾಯಿಲ: ಪ್ರಸನ್ನ ಕಾಲೇಜು ಬಳಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ

Suddi Udaya

ಬಳಂಜ ಶಾಲಾ ಪ್ರಾರಂಭೋತ್ಸವ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

Suddi Udaya
error: Content is protected !!