ಗ್ರಾಮಾಂತರ ಸುದ್ದಿ

ಅಪಘಾತದಲ್ಲಿ ಸಾವು; ನವೋದಯ ಗುಂಪಿನ ಸದಸ್ಯೆಗೆ 1 ಲಕ್ಷ ರೂ. ವಿಮೆ ಚೆಕ್ ಹಸ್ತಾಂತರ

ಬಂಗಾಡಿ ಸಹಕಾರಿ ಸಂಘದ ನಾವೂರು ಶಾಖೆಯಲ್ಲಿ ಖಾತೆಯನ್ನು ಹೊಂದಿರುವ ಶಿವಪಾರ್ವತಿ ನವೋದಯ ಸ್ವ ಸಹಾಯ ಗುಂಪಿನ ಸದಸ್ಯೆ ಕಮಲಾ ಅವರು ವಾಹನ ಅಪಘಾತದಿಂದ ಮೃತಪಟ್ಟಿದ್ದು, ಅವರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚೈತನ್ಯ ವಿಮಾ ಯೋಜನೆಯಡಿಯಲ್ಲಿ ಮಂಜೂರಾದ ಒಂದು ಲಕ್ಷ ರೂ. ಮೊತ್ತದ ಚೆಕ್ ನ್ನು ಅವರ ಕುಟುಂಬಸ್ಥರಿಗೆ ಬಂಗಾಡಿ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ ಇವರು ಹಾಸ್ತಾoತರಿಸಿದರು.

ಮೃತರ ನಾಮಿನಿ ಯಾಗಿದ್ದ ಅವರ ಪತಿ ನಾವೂರಿನ ಸಂಜೀವ ಮಲೆಕುಡಿಯ, ಹಾಗೂ ಅವರ ಪುತ್ರ ರಮೇಶ್ ಮಲೆಕುಡಿಯ ಪರಿಹಾರದ ಚೆಕ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಹಕಾರಿ‌ಸಂಘದ ಸಿಇಒ ದಯಾನಂದ ಶೆಟ್ಟಿಗಾರ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ, ಸಿಬ್ಬಂದಿಗಳಾದ ರಮಾನಂದ ಮತ್ತು ಮಂಜುನಾಥ ಗೌಡ, ನವೋದಯ ಸಿಬ್ಬಂದಿಗಳಾದ ಸುಮಿತ್ರಾ ಬಂಗಾಡಿ ಮತ್ತು ಜಯರಾಮ ಬಂಗಾಡಿ ಉಪಸ್ಥಿತರಿದ್ದರು.

Related posts

ಬಳಂಜ: ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರೀಶ್ ವೈ ಆಯ್ಕೆ

Suddi Udaya

ಮುಂಡಾಜೆಯ ಇಷ್ಠ ದೇಶಭಕ್ತಿ ಗೀತೆಯಲ್ಲಿ ದ್ವಿತೀಯ ಸ್ಥಾನ

Suddi Udaya

ಪುದುವೆಟ್ಟು ಓಂಶಕ್ತಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯಿಂದ ಆತ್ಮ ಯೋಜನೆಯಡಿ ರೈತರ ಅಧ್ಯಯನ ಪ್ರವಾಸ

Suddi Udaya

ಉರುವಾಲು: ಉಂಡೆಮನೆ ಶಂಕರ ನಾರಾಯಣ ಭಟ್ ರವರ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ

Suddi Udaya

ಉಜಿರೆ: ಕೃಷ್ಣಮೂರ್ತಿ ಹೊಳ್ಳ ನಿಧನ

Suddi Udaya
error: Content is protected !!