September 6, 2026
Uncategorized

ಅಂಡಿಂಜೆ ಪಾಂಡೀಲು ಹೊಸಮನೆ ಎಂಬಲ್ಲಿ ಮನೆಯ ಬೀಗವನ್ನು ಒಡೆದು ಒಳಗಿದ್ದ ಕಳ್ಳರು: ನಗ-ನಗದು ಸೇರಿದಂತೆ ‌ರೂ. 80 ಸಾವಿರ ಮೌಲ್ಯದ ಸೊತ್ತುಗಳ ಕಳವು

ಬೆಳ್ತಂಗಡಿ : ಅಂಡಿಂಜೆ ಗ್ರಾಮದ ಪಾಂಡೀಲು ಹೊಸಮನೆ ಎಂಬಲ್ಲಿ ರಾತ್ರಿ ಸಮಯ ಮನೆಯೊಂದರ‌ ಬೀಗವನ್ನು ಒಡೆದು
ನುಗ್ಗಿದ ಕಳ್ಳರು ನಗ-ನಗದು ಸೇರಿದಂತೆ ‌ರೂ. 80 ಸಾವಿರ ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಅ.28 ರಂದು ವರದಿಯಾಗಿದೆ.
ಅಂಡಿಂಜೆ ಗ್ರಾಮದ ಪಾಂಡೀಲು ಹೊಸ ಮನೆ. ಶ್ರೀಮತಿ ಸುಜಾತ ರಾಘವ ಪುತ್ರನ್ ಅವರ ಮನೆಯಿಂದ ಈ ಕಳ್ಳತನ ನಡೆಸಲಾಗಿದೆ.
ಅ. 27 ರಂದು ಸಂಜೆಯಿಂದ ಅ. 28ರ ಮದ್ಯಾಹ್ನ 12:15 ಗಂಟೆಯ ಮಧ್ಯೆ ಈ ಕಳ್ಳತನ ನಡೆಸಲಾಗಿದೆ.
ಶ್ರೀಮತಿ ಸುಜಾತ ಅವರು
ಮನೆಯ ಬಾಗಿಲಿಗೆ ಬೀಗ ಹಾಕಿ ತನ್ನ ತವರು ಮನೆಯಾದ ಅಳಿಯೂರು ಎಂಬಲ್ಲಿಗೆ ಹೋದ ಸಮಯ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ ಮನೆಯ ಗೋದ್ರೇಜ್‌ ಕಪಾಟಿನಲ್ಲಿದ್ದ ನಗದು ಹಣ ರೂ. 25,000/- ಹಾಗೂ 5 ಗ್ರಾಂ ತೂಕದ ಬೆಂಡೋಲೆ ಒಂದು ಜೊತೆ ಹಾಗೂ 4 ಗ್ರಾಂ ತೂಕದ ಚಿನ್ನದ ಉಂಗುರ ಒಂದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ . ಕಳುವಾದ ಸೊತ್ತುಗಳು, ನಗದು ಸೇರಿ ಒಟ್ಟು ಅಂದಾಜು ಮೌಲ್ಯ 80,000/ ರೂ ಆಗಬಹುದೆಂದು ಅಂದಾಜಿಸಲಾಗಿದೆ.‌ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಧಮ೯ಸ್ಥಳ ಸೇರಿ ವಿವಿಧ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ಅಂತರ್ ರಾಜ್ಯ ದರೋಡೆ ಪ್ರಕರಣಗಳ ಕುಖ್ಯಾತ ಆರೋಪಿಯ ದಸ್ತಗಿರಿ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಪಿಕಪ್ ಪಲ್ಟಿ

Suddi Udaya

ಮಾಜಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರಿಂದ ಗುರುದ್ವಾರ ಭೇಟಿ

Suddi Udaya

ಬರೆಂಗಾಯ : ಮುಳಂಪಾಯ ಎಂಬಲ್ಲಿ ಏರ್‌ಟೆಲ್ ನೆಟ್ ವರ್ಕ್ ಸಮಸ್ಯೆ: ಬಗೆಹರಿಸುವಂತೆ ಸ್ಥಳೀಯರ ಆಗ್ರಹ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಾಯಿ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ

Suddi Udaya

ನಾಳೆ(ಮಾ.8): ಉಜಿರೆ ಪುರದೊಡೆಯ ಶ್ರೀ ಜನಾರ್ದನ ದೇವರಿಗೆ ನೂತನ ಬ್ರಹ್ಮರಥ, ಪುಷ್ಪರಥ ಸಮರ್ಪಣೆ:

Suddi Udaya
error: Content is protected !!