July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೋಣಂದೂರು: ಸಬರಬೈಲು ಕುವ್ವತುಲ್ ಇಸ್ಲಾಮ್ ಯುವಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಸೋಣಂದೂರು : ಕುವ್ವತುಲ್‌ ಇಸ್ಲಾಮ್ ಯುವಕರ ಸಂಘ ಸಬರಬೈಲು ಇದರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಕಾರ್ಯಕ್ರಮವನ್ನು ಹಿರಿಯರಾದ ಮಹಮ್ಮದ್ ಸಾಗರ್ ಹಾಜಿಯವರು ದುವಾದೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೂರುಲ್ ಹುದಾ ಜುಮಾ‌ ಮಸೀದಿ ಮದ್ದಡ್ಕ ಇದರ ಪ್ರಧಾನ‌ ಕಾರ್ಯದರ್ಶಿಗಳಾದ ಸಿರಾಜ್ ಚಿಲಿಂಬಿಯವರು ಮಾತನಾಡಿ ಕುವ್ವತುಲ್‌ ಇಸ್ಲಾಮ್ ಯುವಕರ ಸಂಘ 1998 ರಿಂದ ನಡೆದು ಬಂದ ಬಗ್ಗೆ ಮತ್ತು ಅದರ ಕಾರ್ಯ ವೈಖರಿಯನ್ನು ತಿಳಿಸಿದರು.

ನೂತನ ಪದಾಧಿಕಾರಿಗಳಾಗಿ ಕೆ ಐ ವೈ ಎಸ್ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಕೆ ಎಸ್ ಆರ್ ಟಿ ಸಿ ಸಬರಬೈಲು, ಉಪಾಧ್ಯಕ್ಷರಾಗಿ ಶಕೀಲ್‌ ಸಬರಬೈಲು, ಕಾರ್ಯದರ್ಶಿಯಾಗಿ ಫಯಾಝ್ ಸಬರಬೈಲು, ಜೊತೆ ಕಾರ್ಯದರ್ಶಿಯಾಗಿ ನೌಶಾದ್ ಸಬರಬೈಲು, ಕೋಶಾಧಿಕಾರಿಯಾಗಿ ಶರೀಫ್ ಸಬರಬೈಲು ಇವರನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಮಹಮ್ಮದ್ ಸಾಗರ್ ಹಾಜಿ ಮತ್ತು ಸಲಹೆಗಾರರಾಗಿ ಸಲೀಮ್ ತಂಙಲ್ ಎo ಎ. ರಝಕ್ ಸಬರಬೈಲು, ಅಬ್ದುಲ್ಲಾ ಎಸ್ ಎ ಸಬರಬೈಲು, ರಮ್ಲನ್, ಇಲ್ಯಾಸ್ ಝಹೀರ್ ಬಿನ, ಇಬ್ರಾಹಿಮ್ ಕೆ ಎಸ್ ಬಿ, ಶಂಸುದ್ದೀನ್ ಭೂಲೋಕ, ರಿಯಾಝ್ ಎಚ್ ಎಚ್, ಸಮೀರ್ ಸಬರಬೈಲು ಇವರನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.


ನೌಶಾದ್ ಎo ಎo ಕಾರ್ಯಕ್ರಮ ನಿರೂಪಿಸಿದರು. ನಿಯಾಝ್ ಸ್ವಾಗತಿಸಿ, ಹನೀಫ್ ಧನ್ಯವಾದ ಮಾಡಿದರು.

Related posts

ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಹೊಸ ವಾಹನ , ಅತ್ಯಾಧುನಿಕ ವ್ಯವಸ್ಥೆ ಒಳಗೊಂಡ ವಾಹನ ಆಪತ್ತಿನ ಸೇವೆಗೆ ಸಜ್ಜಾಗಿದೆ

Suddi Udaya

ಮಾನವನ ವರ್ತನೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಮತ್ತು ಭವಿಷ್ಯ: ಅಂತಾರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಗೇರುಕಟ್ಟೆ ಉಮರ್ ಫಾರೂಕ್ ಮೃತದೇಹ ಹೊರತೆಗೆದು ಕುಟುಂಬಕ್ಕೆ ಹಸ್ತಾಂತರ

Suddi Udaya

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರವರಿಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಕೆ : ಬ್ಯಾನರ್ ತೆರವು ಗೊಳಿಸಿದ ಪಟ್ಟಣ ಪಂಚಾಯತ್ ಸಿಬ್ಬಂದಿಗಳು

Suddi Udaya

ವೇಣೂರು ಗ್ರಾಮದಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮ; 2 ಸಾವಿರ ಗಿಡಗಳ ನಾಟಿ

Suddi Udaya

ಬುರುಡೆ ಪ್ರಕರಣ: ಚಿನ್ನಯ್ಯನನ್ನು ಮಹಜರು ನಡೆಸಲು ಕರೆದುಕೊಂಡು ಹೋದ ಎಸ್.ಐ.ಟಿ

Suddi Udaya
error: Content is protected !!