September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಉಜಿರೆ ಸಂತ ಅಂತೋನಿ ಚರ್ಚ್ ಇದರ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಹೊಸಮನೆ ಹಸ್ತಾಂತರ ಕಾರ್ಯಕ್ರಮ

ಉಜಿರೆ: ಸಂತ ಅಂತೋನಿ ಚರ್ಚ್ಇದರ ಮುಂದಾಳತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡ 5ನೇ ಯೋಜನೆ, ಅಶಕ್ತ ಕುಟುಂಬಕ್ಕೆ ಹೊಸಮನೆ “ಅನುಗ್ರಹ” ಇದರ ಆಶೀರ್ವಚನ ಮತ್ತು ಹಸ್ತಾಂತರ ಕಾರ್ಯಕ್ರಮವು ನ.24 ರಂದು ಉಜಿರೆ ನೆಲ್ಲಿಪದವು ನಲ್ಲಿ ನಡೆಯಿತು.

ಉಜಿರೆ ಸಂತ ಅಂತೋನಿ ಚರ್ಚ್ ಇದರ ಧರ್ಮ ಗುರುಗಳಾದ ವಂದನೀಯ ಅಬೆಲ್ ಲೋಬೋ ರವರು ಹೊಸ ಮನೆಯ ಆಶೀರ್ವಚನ ಕಾರ್ಯಕ್ರಮ ನೆರವೇರಿಸಿದರು.

ಅತಿಥಿಗಳಾಗಿ ಹ್ಯುಮ್ಯಾನಿಟಿ ಟ್ರಸ್ಟ್ ಬೆಲ್ಮಣ್ ಇದರ ಸ್ಥಾಪಕರಾದ ರೋಶನ್ ಡಿ’ಸೋಜ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾ ಕಿರಣ್ ಕಾರಂತ್ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ವಂದನೀಯ ಧರ್ಮಗುರು ವಿಜಯ್ ಲೋಬೋ, ಉಜಿರೆ ಸಂತ ಲಾರೆನ್ಸ್ ವಾಳೆ ಗುರಿಕಾರರು ಶ್ರೀಮತಿ ಮರ್ಲಿನ್ ಡಿ’ಸೋಜ, ಫಲಾನುಭವಿ ರೋಜಿ ಪಾಯ್ಸ್ ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಜಿರೆ ದಯಾಳ್‌ಭಾಗ್ ಆಶ್ರಮದ ಸುಪೀರಿಯ‌ರ್ ವಂದನೀಯ ಧರ್ಮಗುರು ಫೆಡ್ರಿಕ್ ಬ್ರಾಗ್ಸ್, ಲಾಯಿಲ ದಯಾ ಸ್ಪೆಷಲ್ ಸ್ಕೂಲ್ ಇದರ ವಂದನೀಯ ಧರ್ಮಗುರು ವಿನೋದ್ ಮಸ್ಕರೇನಸ್, ಉಜಿರೆ ಎಸ್.ಎಂ. ಐ. ಕಾನ್ವೆಂಟ್ ಇದರ ಸುಪೀರಿಯರ್ ಸಿಸ್ಟರ್ ನ್ಯಾನ್ಸಿ ಡಾಯಸ್, ಎಸ್.ವಿ.ಪಿ. ಉಜಿರೆ ಘಟಕದ ಅಧ್ಯಕ್ಷ ಸೆಬಾಸ್ಟಿಯನ್ ಡಿ’ಸೋಜ, ಉಜಿರೆ ಎಸ್.ಸಿ.ಸಿ ಸಂಚಾಲಕ ರೋಶನ್ ಡಿ’ಸೋಜಾ, ಪಂಚಾಯತ್ ಸದಸ್ಯರು ಹಾಗೂ ಕಟ್ಟಡ ನಿರ್ಮಾಣ ಗುತ್ತಿಗೆದಾರಅನಿಲ್ ಡಿ’ಸೋಜಾ, ಫಲಾನುಭವಿಗಳಾದ ರೋಜಿ ಪಾಯ್ಸ್ ರವರ ಕುಟುಂಬಸ್ಥರು, ದಾನಿಗಳು, ಸ್ಥಳೀಯರು ಉಪಸ್ಥಿತರಿದ್ದರು.

ಉಜಿರೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಅಗೋರಿ ವಾಸ್, ಪಾಲನಾ ಆಯೋಗ ಸಂಚಾಲಕಿ ಶ್ರೀಮತಿ ಲವೀನಾ ಫೆರ್ನಾಂಡಿಸ್ ನಿರೂಪಿಸಿ ಧನ್ಯವಾದವಿತ್ತರು.

Related posts

ಅಳದಂಗಡಿಯಲ್ಲಿ ಆಮಂತ್ರಣ ದಶಮಾನೋತ್ಸವಕ್ಕೆ ಚಾಲನೆ

Suddi Udaya

ಆ.30: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya

ರಾಜ್ಯ ಮಟ್ಟದ ಜಾನಪದ ಗೀತ ಗಾಯನ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ರೋವರ್ಸ್ ತಂಡ ಪ್ರಥಮ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಕುಕ್ಕೇಡಿ: ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Suddi Udaya
error: Content is protected !!