September 6, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ನಯನರಮ್ಯ ಧರ್ಮಸ್ಥಳ ಲಕ್ಷದೀಪೋತ್ಸದಲ್ಲಿ ಸನಾತನ ಸಂಸ್ಥೆಯ ಸಹಭಾಗ : ಡಾ. ಡಿ. ವೀರೇಂದ್ರ ಹೆಗ್ಡೆಯವರಿಂದ ಸನಾತನದ ವಿಶೇಷ ಗ್ರಂಥ ಪ್ರದರ್ಶನಕ್ಕೆ ಚಾಲನೆ

ಬೆಳ್ತಂಗಡಿ : ಎಂಟು ಶತಮಾನಗಳ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ. ಈ ಕ್ಷೇತ್ರದಲ್ಲಿ ನವೆಂಬರ್ 26 ರಿಂದ 30 ರ ವರೆಗೆ ಲಕ್ಷದೀಪೋತ್ಸವವು ನಡೆಯಲಿದೆ.ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮದ ನಿಮಿತ್ತ ನವೆಂಬರ್ 26 ರಂದು ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಗ್ರಂಥ ಪ್ರದರ್ಶನಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಶ್ರೀ ಡಿ. ವೀರೇಂದ್ರ ಹೆಗ್ಡೆಯವರರಿಂದ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆ ಮಾಡಿದರು.

ಈ ಪ್ರದರ್ಶನದಲ್ಲಿ ಅಧ್ಯಾತ್ಮ, ಹಬ್ಬಗಳ ಆಚರಣೆಯ ಶಾಸ್ತ್ರ, ಹಿಂದೂ ಧರ್ಮದಲ್ಲಿ ಹೇಳಿದ ಜೀವನ ಶೈಲಿಯ ಶಾಸ್ತ್ರ ಈ ರೀತಿ ಮಾನವ ಕುಲಕ್ಕೆ ಉಪಯುಕ್ತ ಅಮೂಲ್ಯ ಗ್ರಂಥ ಸಂಪತ್ತು ಇದೆ, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರಿಗೂ ಈ ಗ್ರಂಥಗಳಲ್ಲಿನ ಜ್ಞಾನ ಅತ್ಯಾವಶ್ಯಕ ಆಗಿವೆ. ಅಷ್ಟೆ ಅಲ್ಲದೆ ಈ ಪ್ರದರ್ಶನದಲ್ಲಿ ಸುಗಂಧ ಭರಿತ ವಿವಿಧ ಊದುಬತ್ತಿಗಳು, ಸುಗಂಧಭರಿತ ಸಾಬೂನು, ಉಟನೆ, ಶುದ್ಧ ಅರಿಷಿಣದಿಂದ ತಯಾರಿಸಿದ ಕುಂಕುಮ, ದೇವತೆಗಳ ಸಾತ್ವಿಕ ಭಾವ ಚಿತ್ರಗಳು, ಪಂಚಾಂಗ, ಸೇರಿದಂತೆ ಅನೇಕ ಉತ್ಪಾದನೆಗಳು ಲಭ್ಯವಿದ್ದು ಭಕ್ತರು ತಪ್ಪದೆ ಇಲ್ಲಿ ಭೇಟಿ ನೀಡಬೇಕೆಂದು ಸನಾತನ ಸಂಸ್ಥೆ ಕರೆ ನೀಡಿದೆ. ಈ ಪ್ರದರ್ಶನವು 55ನೆಯ ಮಳಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ , ಉಜಿರೆಯಲ್ಲಿ 26 ರಿಂದ 30 ಡಿಸೆಂಬರ್ ವರೆಗೆ ಎಲ್ಲರಿಗಾಗಿ ಉಪಲಬ್ಧವಿದೆ ಎಂದು ಸನಾತನ ಸಂಸ್ಥೆ ರಾಜ್ಯ ವಕ್ತಾರರು ವಿನೋದ ಕಾಮತ್ ತಿಳಿಸಿದರು.


Related posts

ಶ್ರೀ ಧ.ಮಂ.ಪ.ಪೂ. ಕಾಲೇಜಿನ ಉಪನ್ಯಾಸಕರ ಸಂಘದ ವತಿಯಿಂದ ಗ್ರಂಥಪಾಲಕ ಮನೋಹರ ಶೆಟ್ಟಿಯವರಿಗೆ ಸನ್ಮಾನ

Suddi Udaya

ಧಮ೯ಸ್ಥಳ ಮಹಾದ್ವಾರದ ಬಳಿ ಪಾದಯಾತ್ರಿಗಳಿಗೆ ಸ್ವಾಗತ

Suddi Udaya

ಉಜಿರೆ ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್‌ ಸಯನ್ಸ್‌ ಉಪನ್ಯಾಸಕಿ ಸುಚೇತಾರವರಿಗೆ ಪಿ.ಎಚ್.ಡಿ ಪದವಿ

Suddi Udaya

ಬೆಳ್ತಂಗಡಿ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಅನಿಲ್ ಎ.ಜೆ, ಉಪಾಧ್ಯಕ್ಷರಾಗಿ ಜಾರ್ಜ್ ಎಮ್.ವಿ. ಆಯ್ಕೆ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ದಿನಕರ ಪೂಜಾರಿ ಕಡ್ತಿಲರಿಗೆ ನುಡಿನಮನ: ಹೃದಯ ಶ್ರೀಮಂತಿಕೆಯ ವ್ಯಕ್ತಿ ದಿನಕರ ಪೂಜಾರಿಯವರು: ಸಂತೋಷ್ ಕುಮಾರ್ ಕಾಪಿನಡ್ಕ

Suddi Udaya
error: Content is protected !!