September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಜಿರೆ: ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದ ವ್ಯಕ್ತಿ ನಾಪತ್ತೆ

ಉಜಿರೆ: ಸುಬ್ರಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಜಿರೆ ಮುಂಡತ್ತೋಡಿ ನಿವಾಸಿ ಹರೀಶ್ ರವರ ಪತ್ನಿ ನಯನರವರ ದೂರಿನಂತೆ ಹರೀಶ್ ( 35 ವರ್ಷ) ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟವುಳ್ಳವರಾಗಿರುತ್ತಾರೆ. ನ.20 ರಂದು ಬೆಳಿಗ್ಗೆ 6 ಗಂಟೆಗೆ ಸುಬ್ರಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಈವರೆಗೆ ಮನೆಗೆ ಬಾರದೇ ಇದ್ದು ಅವರ ದೂರವಾಣಿಗೆ ಕರೆ ಮಾಡಲಾಗಿ ಸ್ವಿಚ್ ಆಫ್ ಇದ್ದು ಅವರ ತಂದೆ-ತಾಯಿ ಮನೆಯಾದ ಈಶ್ವರಮಂಗಳಕ್ಕೆ ಪೋನ್ ಮಾಡಿ ವಿಚಾರಿಸಲಾಗಿ ಅಲ್ಲಿಗೂ ಸಹ ಹೋಗದೇ ಕಾಣೆಯಾಗಿರುತ್ತಾರೆ, ಹಾಗೂ ಈ ಹಿಂದೆಯೂ ಸಹ ಮನೆಯಿಂದ ಹೋದವರು 1 ವಾರದ ನಂತರ ಮನೆಗೆ ಬರುತ್ತಿದ್ದರು ಆದ್ದರಿಂದ ಮರಳಿ ಬರುಬಹುದೆಂಬ ನಿರೀಕ್ಷೆಯಿಂದ ಇದ್ದು ಮರಳಿ ಬಾರದೇ ಇರುವುದರಿಂದ ಡಿ.4 ರಂದು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ,

ಈ ಬಗ್ಗೆ, ಎಲ್ಲಿಯಾದರೂ ಕಂಡು ಬಂದರೆ ಕೂಡಲೇ ಬೆಳ್ತಂಗಡಿ ಪೊಲೀಸ್ ಠಾಣೆ (08256- 232093) ಅಥವಾ ದ.ಕ ಜಿಲ್ಲಾ, ಕಂಟ್ರೋಲ್ ರೂಂ(0824-2220500) ಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.

Related posts

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಬಂಡೆ ಕಲ್ಲಿಗೆ ಲಾರಿ ಡಿಕ್ಕಿ: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya

ಜು.15: ಧರ್ಮಸ್ಥಳದಲ್ಲಿ ಆತಿಥ್ಯ ವೆಜ್ ಹೊಟೇಲ್ ಶುಭಾರಂಭ

Suddi Udaya

ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿ ಬಂಧನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ವಿತರಣೆ

Suddi Udaya

ಬೆಳ್ತಂಗಡಿಯಲ್ಲಿ ಪ್ರಥಮವಾಗಿ ‘ಮೋದಿ ಮತ್ತೊಮ್ಮೆ’ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ

Suddi Udaya
error: Content is protected !!