23.7 C
ಪುತ್ತೂರು, ಬೆಳ್ತಂಗಡಿ
April 24, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್.ಎಸ್.ಎಫ್ ಇದರ ಬೆಳ್ತಂಗಡಿ ಡಿವಿಷನ್ ವಾರ್ಷಿಕ ಮಹಾಸಭೆಯು ಜ.23ರಂದು ವೇಣೂರಿನ ಪಡ್ಡಂದಡ್ಕದಲ್ಲಿ ನಡೆಯಿತು.

ಡಿವಿಷನ್ ಅಧ್ಯಕ್ಷ ಖಲಂದರ್ ಶಾಫಿ ಮದನಿ ಸಭಾಧ್ಯಕ್ಷತೆ ವಹಿಸಿದ್ದರು. ಮಹಾಸಭೆಯನ್ನು ಅಬ್ದುಲ್ ಜಲೀಲ್ ಮದನಿ ಉಸ್ತಾದರು ಉದ್ಘಾಟಿಸಿದರು.

ಸಯ್ಯದ್ ಶರಫುದ್ದೀನ್ ತಂಙಳ್ ಪಡ್ಡಂದಡ್ಕ ದುಆ ಆಶೀರ್ವಚನ ನೀಡಿದರು. ದ.ಕ ಈಸ್ಟ್ ಜಿಲ್ಲಾ ನಾಯಕ ಸ್ವಾದಿಕ್ ಮಾಸ್ಟರ್ ಸುಳ್ಯ ಭಾಗವಹಿಸಿದ್ದರು.

2025-26ನೇ ಸಾಲಿನ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಸಾಕ್ ಅಳದಂಗಡಿ, ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಅಹ್ಸನಿ ಮಲೆಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಪಡ್ಡಂದಡ್ಕ, ಕೋಶಾಧಿಕಾರಿಯಾಗಿ ಹಂಝ ಕಕ್ಕಿಂಜೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಬೀನ್ ಉಜಿರೆ, ಕ್ಯೂಡಿ ಕಾರ್ಯದರ್ಶಿಯಾಗಿ ಶಾಕಿರ್ ಉಜಿರೆ, ದಆವಾ ಕಾರ್ಯದರ್ಶಿಯಾಗಿ ಬಾತಿಶ್ ಮುಈನಿ ನಾವೂರು, ಜೀಡಿ ಕಾರ್ಯದರ್ಶಿಯಾಗಿ ಫಯಾಜ್ ಗೇರುಕಟ್ಟೆ, ಮೀಡಿಯಾ ಕಾರ್ಯದರ್ಶಿಯಾಗಿ ಹಾಫಿಲ್ ಬಾಸಿತ್ ಹಿಮಮಿ ಸಖಾಫಿ ನಾವೂರು, ರೈಂಬೋ ಕಾರ್ಯದರ್ಶಿಯಾಗಿ ನೌಫಲ್ ಮರ್ಝೂಖಿ ಸಖಾಫಿ ಶಿರ್ಲಾಲ್ ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಿವಿಷನ್ ವ್ಯಾಪ್ತಿಯ 7 ಸೆಕ್ಟರ್‌ಗಳ ಕೌನ್ಸಿಲರ್‌ಗಳು ಭಾಗವಹಿಸಿದ್ದರು.

ಡಿವಿಷನ್ ಪ್ರಧಾನ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಸ್ವಾಗತಿಸಿ ವರದಿ ಮಂಡಿಸಿದರು. ಕೋಶಾಧಿಕಾರಿ ಇಸಾಕ್ ಅಳದಂಗಡಿ ಲೆಕ್ಕಪತ್ರ ವಾಚಿಸಿದರು. ನೂತನ ಕಾರ್ಯದರ್ಶಿ ನಾಸಿರ್ ವಂದಿಸಿದರು.

Related posts

ಮುಂಡಾಜೆ: ವಿಶ್ವ ಸ್ಕಾರ್ಫ್ ದಿನಾಚರಣೆ

Suddi Udaya

ಮುಂಡಾಜೆಯ ತಿರುವಿನ ಬಳಿ ಮೋರಿಗೆ ಜಾರಿದ ಕಾರು

Suddi Udaya

ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಕ ವಿಜ್ಞಾನ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ

Suddi Udaya

ಜಿಲ್ಲಾ ಅಥ್ಲೆಟಿಕ್ ಕೂಟ: ಎಸ್.ಡಿ.ಎಂ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಜೋಯಲ್ ಮೆಂಡೋನ್ಸ ಆಯ್ಕೆ

Suddi Udaya

ಮುಂಡಾಜೆ: ಸೋಮಂತ್ತಡ್ಕದಲ್ಲಿ ಚರಂಡಿಗೆ ಬಿದ್ದ ಶಾಲಾ ಬಸ್

Suddi Udaya
error: Content is protected !!