July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೇಲಂತಬೆಟ್ಟು ಪಾಲೆತ್ತಾಡಿಗುತ್ತು ಶ್ರೀ ಬ್ರಹ್ಮ ಬೈದರ್ಕಳ ಧರ್ಮಚಾವಡಿ ಜೀರ್ಣೋದ್ಧಾರ ಸಮಿತಿ ರಚನೆ

ಮೇಲಂತಬೆಟ್ಟು: ಮೇಲಂತಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಧರ್ಮಚಾವಡಿ ಜೀರ್ಣೋದ್ದಾರ ಸಮಿತಿ ಪಾಲೆತ್ತಾಡಿಗುತ್ತು ಇದರ ಸಮಿತಿ ರಚನೆಯ ಸಭೆಯು ಮಾ.2 ರಂದು ಪಾಲೆತ್ತಾಡಿಗುತ್ತು ಮನೆ ಯಲ್ಲಿ ಶ್ರೀಮತಿ ನಾಗಮ್ಮ ಕುಂಜರ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ಬಿ.ರಕ್ಷಿತ್ ಶಿವರಾಂ, ಕಿರಣ್ ಚಂದ್ರ ಡಿ. ಪುಷ್ಪಗಿರಿ ಉದ್ಯಮಿಗಳು ಬೆಂಗಳೂರು, ಯೋಗೀಶ್ ಕುಮಾರ್ ನಡಕ್ಕರ, ಜಯಂತ್ ಪೂಜಾರಿ ಆಯ್ಕೆಯಾದರು.

ಅಧ್ಯಕ್ಷರಾಗಿ ಸಚಿನ್ ಕುಮಾರ್ ನೂಜೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷಣ ಎಚ್ ಕಡಿರುದ್ಯಾವರ ಹೊಸಮನೆ, ಕೋಶಾಧಿಕಾರಿಯಾಗಿ ಶ್ರೀಮತಿ ಸುಚಿತ್ರಾ ಲಕ್ಷ್ಮೀಶ್, ಕಾರ್ಯಾಧ್ಯಕ್ಷರಾಗಿ ಭಗೀರಥ ಜಿ. ನೋಟರಿ ವಕೀಲರು ಬೆಳ್ತಂಗಡಿ, ನಾರಾಯಣ ಪೂಜಾರಿ ಬರೆಮೇಲು, ಚಂದ್ರರಾಜ್ ನೂಜೀಲು, ಉಪಾಧ್ಯಕ್ಷರಾಗಿ ಗಿರಿಯಪ್ಪ, ಅವಿನಾಶ್ ಬಳಂಜ, ಶ್ರೀಮತಿ ಮಧುರಾ ರಾಘವ, ಕೃಷ್ಣಪ್ಪ ಪೂಜಾರಿ, ಶ್ರೀಮತಿ ಸುಧಾಮಣಿ ರಮಾನಂದ ಮುಂಡೂರು, ಜಗದೀಶ್, ಶ್ರೀಮತಿ ಗುಣವತಿ, ಪ್ರವೀಣ್ ಬಟ್ಕರಡ್ಡಿ, ಯಶವಂತ ನ್ಯಾಕ್, ಗೋಪಾಲಕೃಷ್ಣ ಧರ್ಮಸ್ಥಳ, ಹರ್ಷ ಹೆಚ್ ಆರ್, ಗುರುವಪ್ಪ ಪೂಜಾರಿ ಉಜಿರೆ, ಕಾರ್ಯದರ್ಶಿಗಳಾಗಿ ಭೋಜ ಪೂಜಾರಿ ಮಜಲು, ಮೋಹನ್ ಬಟ್ಕರಡ್ಡ, ವಿನಯ್ ಗುರಿಪಳ್ಳ, ಶ್ರೀಮತಿ ದೀಪಿಕಾ ಯೋಗೀಶ್ ಕುಲಾಲ್, ಇನ್ನಿತರ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಲಕ್ಷಣ ಎಚ್ ಸಮಿತಿ ರಚನೆಯ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು. ಅಧ್ಯಕ್ಷ ಸಚಿನ್ ಕುಮಾರ್ ನೂಜೋಡಿಯವರು ಸಭಿಕರಿಗೆ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಗುರುವಪ್ಪ ಪೂಜಾರಿ, ನಾರಾಯಣ ಪೂಜಾರಿ ಬರೆಮೇಲು, ಹರೀಶ್ ಗೌಡ, ಗಿರಿಯಪ್ಪ, ಮುತ್ತ ಯಾನೆ ಧರ್ಣಪ್ಪ ಪೂಜಾರಿ, ಲಕ್ಷ್ಮೀಶ ಪಾಲೆತ್ತಾಡಿ, ಪ್ರವೀಣ್ ಬಟ್ಕರಡ್ಕ, ಚಂದ್ರರಾಜ್ ನೂಜೇಲು, ಜಗದೀಶ್, ಶ್ರೀಮತಿ ದೀಪಿಕಾ, ರವೀಂದ್ರ ಗುಂಪೋಲಿ, ಯಶವಂತ ನಾಯ್ಕ, ಕುಂಜರ ಪೂಜಾರಿ ಮಜಲು ಇನ್ನಿತರರು ಉಪಸ್ಥಿತರಿದ್ದರು. ಭೋಜ ಪೂಜಾರಿ ಮಜಲು ಸ್ವಾಗತಿಸಿದರು. ಸಚಿನ್ ಕುಮಾರ್ ನೂಜೋಡಿ ಮಾಹಿತಿ ನೀಡಿದರು. ಶ್ರೀಮತಿ ಸುಧಾಮಣಿ ರಮಾನಂದ ನಿರೂಪಿಸಿ ವಂದಿಸಿದರು.

Related posts

ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಭಾರಿ ಮತಗಳ ಅಂತರದಿಂದ ಗೆಲುವು

Suddi Udaya

ಶಿಬಾಜೆ ಭಂಡಿಹೊಳೆಯಲ್ಲಿ ಪ್ರಕೃತಿ ಪ್ರಿಯರಿಂದ ರಸ್ತೆ ಸ್ವಚ್ಛತಾ ಅಭಿಯಾನ

Suddi Udaya

ಮಾತೃ ವೇದಿಕೆ ಉದನೆ ವಲಯ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ಗೆ ಸಮಗ್ರ ಪ್ರಶಸ್ತಿ

Suddi Udaya

ಪಟ್ರಮೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ

Suddi Udaya

ಫೆ.12-13: ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ವೇಣೂರಿನಲ್ಲಿ ಸುಮುಖ ಮೆಡಿಕಲ್ಸ್ ಶುಭಾರಂಭ

Suddi Udaya
error: Content is protected !!