25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕರಂಬಾರು ಹಿ.ಪ್ರಾ. ಶಾಲೆಯಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

ಶಿರ್ಲಾಲು: ಕರಂಬಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಭರತನಾಟ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ ಎ.5ರಂದು ಜರಗಿತು.

ಹಿರಿಯ ಭರತನಾಟ್ಯ ಶಿಕ್ಷಕಿ ಉಮಾ ಮಾಧವಿ ಕೊಳಲಗಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಠ್ಯದೊಂದಿಗೆ ಭರತನಾಟ್ಯ, ಸಂಗೀತ ನಾಟಕ, ಯಕ್ಷಗಾನ ಮೊದಲಾದ ಕಲೆಗಳನ್ನು ಕಲಿಯುವುದರಿಂದ ಜ್ಞಾನದ ಅಭಿವೃದ್ಧಿ ಉಂಟಾಗುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಊರಿನ ಹಿರಿಯರಾದ ನಾರಾಯಣ ಹೆಬ್ಬಾರ್ ಮತ್ತು ಕುಟುಂಬಸ್ಥರ ಶ್ರಮದ ಫಲವಾಗಿ ಈ ಶಾಲೆ ನಿರ್ಮಾಣವಾಗಿದ್ದು ಸ್ಥಳೀಯರ ಶಿಕ್ಷಣ ವ್ಯವಸ್ಥೆಗೆ ಪೂರಕ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಷ್ಪರಾಜ ಎಂ.ಕೆ., ಉಪಾಧ್ಯಕ್ಷೆ ವಿಜಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿವೇಕ ಕೇಳ್ಕರ್, ಶಿಕ್ಷಕಿಯರಾದ ಚೈತ್ರಾ ಕುಮಾರಿ, ಸೌಜನ್ಯಾ, ಲತಾ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ರಮೇಶ್ ಚೌಹಾನ್ ಸ್ವಾಗತಿಸಿದರು. ತಸ್ಮಿಯಾ ಪರ್ವಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಕುಮಾರ್ ನಿರೂಪಿಸಿ,ಸಾವಿತ್ರಿ ಎಂ. ವಂದಿಸಿದರು.

ಒಂದರಿಂದ ಏಳು ತರಗತಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಸಂಗೀತ, ಯೋಗ ತರಗತಿಗಳು ನಡೆಯುತ್ತಿದ್ದು ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲಾಗುತ್ತಿದೆ. ಈ ಶೈಕ್ಷಣಿಕ ವರ್ಷದಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಭರತನಾಟ್ಯ ತರಗತಿಗಳು ನಡೆಯಲಿವೆ.

Related posts

“ಕೊಕ್ಕಡ ಶ್ರೀ ವೈದ್ಯನಾಥೇಶ್ವರ” ತುಳು ಆಲ್ಬಮ್ ಹಾಡಿನ ವಿಡಿಯೋ ಚಿತ್ರೀಕರಣ

Suddi Udaya

ಉಜಿರೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಬೆಂಕಿ ರಹಿತ ಪೌಷ್ಟಿಕ ಆಹಾರ ತಯಾರಿ ಸ್ಪರ್ಧೆ

Suddi Udaya

ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ರವಿ ಕಕ್ಕೆಪದವು ಹಾಗೂ ಸುಬ್ರಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸದಸ್ಯರಿಂದ ಸುಬ್ರಹ್ಮಣ್ಯದ ಕುಮಾರಧಾರ ವೆಂಟೆಡ್ ಡ್ಯಾಮ್ ಬಳಿ ಸ್ವಚ್ಛತಾ ಕಾರ್ಯ

Suddi Udaya

ಉಜಿರೆ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ ಉಜಿರೆಯಲ್ಲಿ ಶಿಕ್ಷಕರ ದಿನಾಚರಣೆ ಜೊತೆಗೆ ಓಣಂ ಹಬ್ಬದ ಆಚರಣೆ

Suddi Udaya

ಫ್ರೆಂಡ್ಸ್ ಬದ್ಯಾರ್ ತಂಡದ ಸದಸ್ಯರಿಂದ ಶ್ರಮದಾನ

Suddi Udaya

ಗುರುವಾಯನಕೆರೆ: ಜನ ಮಂಗಲ ಕಾರ್ಯಕ್ರಮದಡಿ ಯು ಶೇಪ್ ವಾಕರ್ ವಿತರಣೆ

Suddi Udaya
error: Content is protected !!