July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಶ್ರೀ ಸಾಯಿ ಕ್ರಿಕೆಟರ್ಸ್ ಸಹಯೋಗದೊಂದಿಗೆ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಉಜಿರೆ ಶ್ರೀ ಸಾಯಿ ಕ್ರಿಕೆಟರ್ಸ್ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕು ಮಟ್ಟದ 10 ಪ್ರಾಂಚೈಸಿಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಉಜಿರೆ ಪ್ರೀಮಿಯರ್ ಲೀಗ್ ಸೀಸನ್ -5 ಎ.12 ಹಾಗೂ 13 ರಂದು ಉಜಿರೆ ಎಸ್.ಎಂ ಮೈದಾನದಲ್ಲಿ ನಡೆಯಿತು.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸುದೇಶ್ ಶೆಟ್ಟಿ ಕುಂಟಿನಿ, ಉಜಿರೆ ಸಾಯಿ ಕಂಪ್ಯೂಟರ್ಸ್ ನ ಸೂರಜ್, ರೆಹಮಾನ್ ಗೌರವ ಉಪಸ್ಥಿತಿ ವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಅಸ್ತ್ರ ಗ್ರೂಪ್ಸ್ ನ ಸಿಇಒ ಲಾಂಚುಲಾಲ್ ಕೆ.ಎಸ್ ವಹಿಸಿದ್ದರು. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಉಜಿರೆ ಪೂಜಾ ಏಜೆನ್ಸಿ ಮಾಲಕ ರತನ್, ಉಜಿರೆ ಅಸ್ತ್ರ ಫ್ರೆಂಡ್ಸ್ ನ ಸಂತೋಷ್ ವಿ., ಇಂಜಿನಿಯರ್ ಮಧು ಬಿ.ಕೆ ನಿಡ್ಲೆ, ಪೆರ್ಲ ಭಗವತಿ ಕ್ರಿಕೆಟರ್ಸ್ ನ ನಾಗೇಶ್, ಉಜಿರೆ ಶೀತಲ್ ಗಾರ್ಡನ್ ನ ಅಶ್ವತ್ ಶೆಟ್ಟಿ, ಬೆಳ್ತಂಗಡಿ ಶ್ರೀ ದೇವಿ ಎಲೆಕ್ಟ್ರಿಕಲ್ಸ್ ಯೋಗೀಶ್ ದೇವಾಡಿಗ ಗೌರವ ಉಪಸ್ಥಿತಿ ವಹಿಸಿದ್ದರು.

ನಿಡ್ಲೆ ಮನೋಜ್ ಮಾಲಕತ್ವದ ಬರಂಗಾಯ ತಂಡ (ಪ್ರಥಮ) 80,025 ಹಾಗೂ ಶ್ರೀ ಸಾಯಿ ಟ್ರೋಫಿ, ಬೆಳಾಲು ಸೆವೆನ್ ಸ್ಟಾರ್ ತಂಡ(ದ್ವಿತೀಯ) 40,025 ಹಾಗೂ ಶ್ರೀ ಸಾಯಿ ಟ್ರೋಫಿಯನ್ನು ಪಡೆದುಕೊಂಡಿದೆ.

Related posts

ಡಿ.20: ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಮಚ್ಚಿನ, ಮಾಲಾಡಿ, ಕಳಿಯ, ಬಳಂಜದಲ್ಲಿ ಜನಸ್ಪಂದನಾ ಕಾರ್ಯಕ್ರಮ

Suddi Udaya

ಸೌತಡ್ಕ ಗೋಬರ್ ಗ್ಯಾಸ್ ಸ್ಥಾವರ ಕೇಂದ್ರಕ್ಕೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಭೇಟಿ

Suddi Udaya

ಮುಂಡಾಜೆ ಗ್ರಾಮ ಪಂಚಾಯತ್‌ನಲ್ಲಿ ರೈತ ತರಬೇತಿ ಕಾರ್ಯಕ್ರಮ

Suddi Udaya

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯ ಜಯಂತಿ ಆಚರಣೆ

Suddi Udaya

ಪಡಿತರ ಚೀಟಿವಿಲ್ಲದೆ ವಂಚಿತಗೊಂಡಿದ್ದ ನೆರಿಯ ಗ್ರಾಮದ ಕೋಲೋಡಿ ನೀಲಮ್ಮ ಕುಟುಂಬಕ್ಕೆ ಲಭಿಸಿದ ರೇಷನ್ ಕಾರ್ಡ್

Suddi Udaya
error: Content is protected !!