ಮಚ್ಚಿನ : ಇಲ್ಲಿಯ ಪುರುಷರ ಮಜಲು ಕಲಾಯಿ ರಸ್ತೆಯು ತೀರಾ ಹದಗೆಟಿದ್ದು ನಡೆದಾಡಲು ಸಾಧ್ಯವಾಗದಂತೆಯಾಗಿದೆ. ನಿತ್ಯ ಶಾಲೆಗೆ ತೆರಳುವ ಈ ಮಕ್ಕಳು ಕೆಸರಿನಲ್ಲಿ ಹೊರಳಾಡಿಕೊಂಡು ಶಾಲೆಗೆ ತೆರಳುವ ಸ್ಥಿತಿ ನಿರ್ಮಾಣಗೊಂಡಿದೆ.

ಈ ರಸ್ತೆಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ನೀಡಿದರು ಯಾವುದೇ ಸ್ಪಂದನೆ ನೀಡದಿರುವುದು ಸ್ಥಳೀಯ ಜನರಿಗೆ ಅಕ್ರೋಶಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಎಸ್ ಟಿ ಹಾಗೂ ಇತರ ವರ್ಗದ ಸುಮಾರು ಮನೆಗಳಿದ್ದರು ಒಂದು ಕಿಲೋ ಮೀಟರ್ ರಸ್ತೆ ಮಾತ್ರ ದುರಸ್ತೆಯ ಯೋಗ್ಯವೆ ಇಲ್ಲ ಸ್ಥಳೀಯರಿಗೆ ಆರೋಗ್ಯದ ಸಮಸ್ಯೆ ಬಂದಾಗ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ತೆರಳುವ ಸ್ಥಿತಿ ನಿರ್ಮಾಣಗೊಂಡಿದೆ. ಸ್ಥಳೀಯರು ಒಟ್ಟು ಸೇರಿ ಸುಮಾರು ಐವತ್ತು ಸಾವಿರದವರೆಗೂ ಮೋರಿ ಕೆಲಸಗಳನ್ನು ತಾವೆ ಮಾಡಿಸಿದರು. ಆದರೆ ಜನಪ್ರತಿನಿಧಿಗಳ ಭರವಸೆ ಒಂದೇ ನಮಗೆ ವರದಾನವಾಗಿದೆ ಎನ್ನುತ್ತಾರೆ. ಸ್ಥಳೀಯರು ಜನಪ್ರತಿನಿಧಿಗಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ಮಕ್ಕಳ ಮೇಲೆ ಕರುಣೆ ತೋರಿಯಾದರೂ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡುವಂತೆ ಸ್ಥಳೀಯರು ಒತ್ತಾಯಸಿದ್ದಾರೆ.
✍️ ಹರ್ಷ ಬಳ್ಳಮಂಜ












