September 6, 2026
Uncategorized

ಕೆ.ಎಮ್.ಜೆ ಗುರುವಾಯನಕೆರೆ ಸರ್ಕಲ್ ಮಾಸಿಕ ಸಭೆ: ರಾಜ್ಯ ಕೌನ್ಸಿಲರ್ ಗಳಾಗಿ ಆಯ್ಕೆಯಾದ ಅಬ್ಬೋನು ಮದ್ದಡ್ಕ, ಉಮ್ಮರ್ ಮಾಸ್ಟರ್ ಗೆ ಗೌರವಾರ್ಪಣೆ.

ಬೆಳ್ತಂಗಡಿ: ಕರ್ನಾಟಕ ಮುಸ್ಲಿಮ್ ಜಮಾಆತ್ ನ ಗುರುವಾಯನಕೆರೆ ಸರ್ಕಲ್ ವ್ಯಾಪ್ತಿಯ ಯೂನಿಟ್ ಗಳ ಮಾಸಿಕ ಪ್ರಥಮ ಸಭೆಯು ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿಯ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಅಬ್ದುಲ್ ಹಮೀದ್ ಅಲ್ ಫುರ್ಖಾನಿ
ವಹಿಸಿದ್ದರು. ಉಸ್ಮಾನ್ ಸಖಾಫಿ ದುವಾ ನೆರವೇರಿಸಿದರು. ಎನ್.ಎಸ್.ಉಮ್ಮರ್ ಮಾಸ್ಟರ್ ಪ್ರಸ್ತಾವನೆಗೈದರು.

ಗುರುವಾಯನಕೆರೆ ಸರ್ಕಲ್ ನಿಂದ ರಾಜ್ಯ ಸಮಿತಿಗೆ ಕೌನ್ಸಿಲರ್ ಆಗಿ ನೇಮಕಗೊಂಡ ಹಿರಿಯ ಮುಖಂಡರಾದ ಅಬ್ಬೋನು ಮದ್ದಡ್ಕ ಹಾಗೂ ಎನ್.ಎಸ್.ಉಮ್ಮರ್ ಮಾಸ್ಟರ್ ರವರನ್ನು ಗೌರವಿಸಲಾಯಿತು.
ಸಭೆಯಲ್ಲಿ ಸರ್ಕಲ್ ಉಪಾಧ್ಯಕ್ಷರಾದ ಉಸ್ಮಾನ್ ಹಾಜಿ ಆಲಂದಿಲ, ಅಬೂಬಕ್ಕರ್ ಹಾಜಿ ಪರಪ್ಪು,ಅಬ್ದುಲ್ ಕರೀಮ್ ಗೇರುಕಟ್ಟೆ ,ಮಹಮ್ಮದ್ ರಫೀಕ್ ಮುಸ್ಲಿಯಾರ್ ಜಾರಿಗೆಬೈಲು,ಎಮ್.ಎಚ್. ಅಬೂಬಕ್ಕರ್,ಅಬ್ದುಲ್ ರಹಿಮಾನ್ ಲಾಡಿ, ಅಬ್ದುಲ್ ಖಾದರ್ ಹಾಜಿ ಪರಪ್ಪು,ಇಸ್ಮಾಯಿಲ್ ಹಾಜಿ ಜಾರಿಗೆಬೈಲು, ವಿವಿಧ ಯೂನಿಟ್ ಗಳ ಉಸ್ಮಾನ್ ಹಾಜಿ ಪರಪ್ಪು, ಎಸ್.ಸುಲೈಮಾನ್ ಜಾರಿಗೆಬೈಲು,ಮಹಮ್ಮದ್ ಆಲಂದಿಲ,ಮೂಸ ಕೆಲ್ಲಾರು ಹಾಜರಿದ್ದರು.
ವಿವಿಧ ಯೂನಿಟ್ ಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು.
ಕಾಂತಿಜಾಲು – ಅಬ್ಬೋನು ಮದ್ದಡ್ಕ ಹಾಗೂ ಅಬ್ದುಲ್ ಕರೀಮ್,ಮದ್ದಡ್ಕ – ಮಹಮ್ಮದ್ ರಫೀಕ್ ಮುಸ್ಲಿಯಾರ್, ಲಾಡಿ – ಉಸ್ಮಾನ್ ಹಾಜಿ ಆಲಂದಿಲ,ಅಳದಂಗಡಿ – ಮಹಮ್ಮದ್ ಆಲಂದಿಲ, ಪರಪ್ಪು – ಎನ್.ಎಸ್ ಉಸ್ಮಾನ್ ಸಖಾಫಿ,ಜಾರಿಗೆ ಬೈಲು – ಅಬೂಬಕರ್ ಹಾಜಿ ಪರಪ್ಪು, ಆಲಂದಿಲ – ಎಮ್.ಎಚ್. ಅಬೂಬಕ್ಕರ್, ಬದ್ಯಾರ್ – ಇಸ್ಮಾಯಿಲ್ ಹಾಜಿ ಜಾರಿಗೆಬೈಲು, ಗುರುವಾಯನಕೆರೆ – ಅಬ್ದುಲ್ ರಹಿಮಾನ್ ಲಾಡಿ ಆಯ್ಕೆ ಮಾಡಲಾಯಿತು.

Related posts

ಮಾಜಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರಿಂದ ಗುರುದ್ವಾರ ಭೇಟಿ

Suddi Udaya

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಮತ್ತು ಯುವವಾಹಿನಿ ಸಂಚಲನಾ ಸಮಿತಿ ಮಿತ್ತಬಾಗಿಲು-ಮಲವಂತಿಗೆ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕ ಬ್ರಹ್ಮಶ್ರೀ ಗುರು ಭವನ ಉದ್ಘಾಟನೆ

Suddi Udaya

ಉಜಿರೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ಎರ್ನೋಡಿ ಇದರ ಸಾಮಾನ್ಯ ಸಭೆ

Suddi Udaya

ದ ಕ ಜಿಲ್ಲಾ ಗೊಲ್ಲ (ಯಾದವ )ಸಂಘ ಬೆಳ್ತಂಗಡಿ ವಲಯದ ವತಿಯಿಂದ ಮನಿಷಾರಿಗೆ ಸನ್ಮಾನ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವಿಧ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಗೋಪಾಲ ಮಡಿವಾಳ ಹೃದಯಾಘಾತದಿಂದ ನಿಧನ

Suddi Udaya
error: Content is protected !!