22.6 C
ಪುತ್ತೂರು, ಬೆಳ್ತಂಗಡಿ
July 23, 2026
Uncategorized

ಕೆ.ಎಮ್.ಜೆ ಗುರುವಾಯನಕೆರೆ ಸರ್ಕಲ್ ಮಾಸಿಕ ಸಭೆ: ರಾಜ್ಯ ಕೌನ್ಸಿಲರ್ ಗಳಾಗಿ ಆಯ್ಕೆಯಾದ ಅಬ್ಬೋನು ಮದ್ದಡ್ಕ, ಉಮ್ಮರ್ ಮಾಸ್ಟರ್ ಗೆ ಗೌರವಾರ್ಪಣೆ.

ಬೆಳ್ತಂಗಡಿ: ಕರ್ನಾಟಕ ಮುಸ್ಲಿಮ್ ಜಮಾಆತ್ ನ ಗುರುವಾಯನಕೆರೆ ಸರ್ಕಲ್ ವ್ಯಾಪ್ತಿಯ ಯೂನಿಟ್ ಗಳ ಮಾಸಿಕ ಪ್ರಥಮ ಸಭೆಯು ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿಯ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಅಬ್ದುಲ್ ಹಮೀದ್ ಅಲ್ ಫುರ್ಖಾನಿ
ವಹಿಸಿದ್ದರು. ಉಸ್ಮಾನ್ ಸಖಾಫಿ ದುವಾ ನೆರವೇರಿಸಿದರು. ಎನ್.ಎಸ್.ಉಮ್ಮರ್ ಮಾಸ್ಟರ್ ಪ್ರಸ್ತಾವನೆಗೈದರು.

ಗುರುವಾಯನಕೆರೆ ಸರ್ಕಲ್ ನಿಂದ ರಾಜ್ಯ ಸಮಿತಿಗೆ ಕೌನ್ಸಿಲರ್ ಆಗಿ ನೇಮಕಗೊಂಡ ಹಿರಿಯ ಮುಖಂಡರಾದ ಅಬ್ಬೋನು ಮದ್ದಡ್ಕ ಹಾಗೂ ಎನ್.ಎಸ್.ಉಮ್ಮರ್ ಮಾಸ್ಟರ್ ರವರನ್ನು ಗೌರವಿಸಲಾಯಿತು.
ಸಭೆಯಲ್ಲಿ ಸರ್ಕಲ್ ಉಪಾಧ್ಯಕ್ಷರಾದ ಉಸ್ಮಾನ್ ಹಾಜಿ ಆಲಂದಿಲ, ಅಬೂಬಕ್ಕರ್ ಹಾಜಿ ಪರಪ್ಪು,ಅಬ್ದುಲ್ ಕರೀಮ್ ಗೇರುಕಟ್ಟೆ ,ಮಹಮ್ಮದ್ ರಫೀಕ್ ಮುಸ್ಲಿಯಾರ್ ಜಾರಿಗೆಬೈಲು,ಎಮ್.ಎಚ್. ಅಬೂಬಕ್ಕರ್,ಅಬ್ದುಲ್ ರಹಿಮಾನ್ ಲಾಡಿ, ಅಬ್ದುಲ್ ಖಾದರ್ ಹಾಜಿ ಪರಪ್ಪು,ಇಸ್ಮಾಯಿಲ್ ಹಾಜಿ ಜಾರಿಗೆಬೈಲು, ವಿವಿಧ ಯೂನಿಟ್ ಗಳ ಉಸ್ಮಾನ್ ಹಾಜಿ ಪರಪ್ಪು, ಎಸ್.ಸುಲೈಮಾನ್ ಜಾರಿಗೆಬೈಲು,ಮಹಮ್ಮದ್ ಆಲಂದಿಲ,ಮೂಸ ಕೆಲ್ಲಾರು ಹಾಜರಿದ್ದರು.
ವಿವಿಧ ಯೂನಿಟ್ ಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು.
ಕಾಂತಿಜಾಲು – ಅಬ್ಬೋನು ಮದ್ದಡ್ಕ ಹಾಗೂ ಅಬ್ದುಲ್ ಕರೀಮ್,ಮದ್ದಡ್ಕ – ಮಹಮ್ಮದ್ ರಫೀಕ್ ಮುಸ್ಲಿಯಾರ್, ಲಾಡಿ – ಉಸ್ಮಾನ್ ಹಾಜಿ ಆಲಂದಿಲ,ಅಳದಂಗಡಿ – ಮಹಮ್ಮದ್ ಆಲಂದಿಲ, ಪರಪ್ಪು – ಎನ್.ಎಸ್ ಉಸ್ಮಾನ್ ಸಖಾಫಿ,ಜಾರಿಗೆ ಬೈಲು – ಅಬೂಬಕರ್ ಹಾಜಿ ಪರಪ್ಪು, ಆಲಂದಿಲ – ಎಮ್.ಎಚ್. ಅಬೂಬಕ್ಕರ್, ಬದ್ಯಾರ್ – ಇಸ್ಮಾಯಿಲ್ ಹಾಜಿ ಜಾರಿಗೆಬೈಲು, ಗುರುವಾಯನಕೆರೆ – ಅಬ್ದುಲ್ ರಹಿಮಾನ್ ಲಾಡಿ ಆಯ್ಕೆ ಮಾಡಲಾಯಿತು.

Related posts

ಭರತನಾಟ್ಯ ಜೂನಿಯರ್ ಪರೀಕ್ಷೆ: ಉಜಿರೆಯ ಸೃಷ್ಟಿ ಆಚಾರ್ಯ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಬಡ ಕುಟುಂಬದ ಮನೆಯ ದುರಸ್ಥಿ ಕಾರ್ಯ

Suddi Udaya

ಮದ್ದಡ್ಕ ಲ್ಯಾನ್ಸಿ ರೋಡ್ರಿಗಸ್ ನಿಧನ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya

ಜ.25: ಬೆಳ್ತಂಗಡಿಯಲ್ಲಿ ಕೋಟಕ್ ಲೈಫ್ ಉದ್ಘಾಟನೆ

Suddi Udaya

ಬೆಳ್ತಂಗಡಿ : ತಡೆಗೋಡೆ ರಚನೆ ಕಾಮಗಾರಿಗೆ ರೂ.2 ಕೋಟಿ 10 ಲಕ್ಷ ಅನುದಾನ ಮಂಜೂರು: ರಕ್ಷಿತ್ ಶಿವರಾಂ

Suddi Udaya
error: Content is protected !!