July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಂಗ, ಕಾಡುಹಂದಿ, ನವಿಲುಗಳ ಹಾವಳಿಯಿಂದ ಕೃಷಿ ಮತ್ತು ಫಸಲು ನಾಶದ ಬಗ್ಗೆ ಶಾಶ್ವತ ಪರಿಹಾರ ಒದಗಿಸುವಂತೆ ಅರಣ್ಯ ಸಚಿವರಿಗೆ ಬೆಳ್ತಂಗಡಿ ಅಖಿಲ ಭಾರತ ಕಿಸಾನ್ ಮಹಾಸಭಾ ವತಿಯಿಂದ ಮನವಿ ಸಲ್ಲಿಕೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಹುತೇಕ ತಾಲೂಕುಗಳಲ್ಲಿ ಮಂಗಗಳ ಹಾವಳಿಯಿಂದ ಕೃಷಿ ಸಂಪತ್ತು ಕೋಟ್ಯಾಂತರ ರೂ. ಗಳ ಫಸಲು ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸರಕಾರದ ವತಿಯಿಂದ ಮಾಡಬೇಕಾಗಿದೆ. ಸುಮಾರು ಹದಿನಾಲ್ಕು ವರ್ಷಗಳಿಂದ ಮಂಗಗಳ ಹಾವಳಿಯನ್ನು ತಡೆಗಟ್ಟಲು ಮಂಕಿಪಾರ್ಕ್ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅದು ಇಲ್ಲಿಯ ತನಕ ಕಾರ್ಯಗತವಾಗಿಲ್ಲ.

ಮನವಿ ಸಲ್ಲಿಕೆ: ದಿನಾಂಕ 13-08-2024 ರಂದು ದ.ಕ. ಜಿಲ್ಲಾಧಿಕಾರಿ ಮಂಗಳೂರು ಇವರು ತಮ್ಮ ಕಛೇರಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆದಿರುತ್ತಾರೆ.
ಈ ಸಭೆಯಲ್ಲಿ ಮಂಕಿಪಾರ್ಕ್ ರಚನೆಯ ಬಗ್ಗೆ ಚರ್ಚಿಸುವ ಸಮಯದಲ್ಲಿ ಎಲ್ಲಾ ರೈತ ಮುಖಂಡರು ರೈತರರಿಗೆ ಅವರು ಬೆಳೆಸಿದ ಬೆಳೆಯ ಫಸಲು ಕೈಗೆಬರುವಂತೇ ಮಾಡುವುದೇ ಪರಿಹಾರವೆಂದು ಒಕ್ಕೊರೊಲಿನಿಂದ ಘೋಷಣೆದೊಳಗಿರುತ್ತದೆ. ಕನ್ನಡ ದಿನ ಪತ್ರಿಕೆಯಲ್ಲಿ ಮಂಗಗಳ ಹಾವಳಿಯಿಂದ ಉಂಟಾದ ನಷ್ಟಕ್ಕೆ ಪರಿಹಾರ ಧನವನ್ನು ಒದಗಿಸುವ ಬಗ್ಗೆ ಅರಣ್ಯಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿಯವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ. ಈ ಪತ್ರಿಕಾ ಹೇಳಿಕೆಯಲ್ಲಿ” ಹೇಳಿರುವ ವಿಚಾರವು ನಮಗೆ ಒಪ್ಪಿಗೆ ಇರುವುದಿಲ್ಲ. ರೈತರಿಗೆ ಸರಕಾರದಿಂದ ಪರಿಹಾರ ಧನ ನೀಡಿದಲ್ಲಿ ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ರೈತರಿಗೆ ಅವರು ಬೆಳೆಸಿದ ಕೃಷಿಯ ಫಸಲು ಅವರ ಕೈಗೆ ಸಂಪೂರ್ಣವಾಗಿ ಸಿಕ್ಕಿದಲ್ಲಿ ರೈತರ ಆತ್ಮಕ್ಕೆ ತೃಪ್ತಿಯಾಗುತ್ತದೆ. ಹಣದ ರೂಪದಲ್ಲಿ ಸಹಾಯ ಮಾಡಿದಲ್ಲಿ ಅದರಿಂದ ರೈತರಿಗೆ ಆತ್ಮ ಸಂತೋಷ ದೊರೆಯುವುದಿಲ್ಲ ಇದಕ್ಕಾಗಿ ಕೃಷಿ ಫಸಲು ನಾಶದ ಬಗ್ಗೆ ಶಾಶ್ವತ ಪರಿಹಾರವಾಗಿ ಮಂಕಿಪಾರ್ಕ್ ನಿರ್ಮಿಸಿ ನಾಡಿನಿಂದ ಕಾಡಿಗೆ ಮಂಗಗಳನ್ನು ವರ್ಗಾಯಿಸಿದಲ್ಲಿ ರೈತರು ಬೆಳೆಸಿದ ಬೆಳೆಯು ಉಳಿಯುತ್ತದೆ. ಇದರಿಂದ ದೇಶದ ಜನತೆಗೆ ಆಹಾರವು ದೊರೆಯುತ್ತದೆ. ದಿನಂಪ್ರತಿ ಮಂಗಗಳ ಹಾವಳಿಯಿಂದ ರೈತರಿಗೆ ಕೃಷಿಫಸಲು ನಷ್ಟ ಉಂಟಾಗುತ್ತಿರುವುದರಿAದ ಯಾವುದೇ ಸರಕಾರಕ್ಕೂ ಪರಿಹಾರಧನವನ್ನು ನೀಡಲು ಅಸಾಧ್ಯವಾಗಿರುತ್ತದೆ. ಮಂಗಗಳ ಹಾವಳಿಯನ್ನು ತಡೆಗಟ್ಟಲು ವೈಜ್ಞಾನಿಕ ರೀತಿಯಲ್ಲಿ ಮಂಕಿಪಾರ್ಕ್ ನಿರ್ಮಿಸಿ ಅದರಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿದಲ್ಲಿ ಸಮಸ್ಯೆಗೆ ಪರಿಹಾರ ದೊರೆಯಬಹುದು.ಅದೇ ರೀತಿ ನವಿಲುಗಳು ಕೃಷಿ ಜಮೀನಿಗೆ ಲಗ್ಗೆ ಇಡುತ್ತಿದ್ದು ಇದರ ನಿಯಂತ್ರಣಕ್ಕೆ ನವಿಲು ಪಾರ್ಕ್ ನಿರ್ಮಾಣಕ್ಕೂ ಕೂಡ ಹಲವಾರು ವರ್ಷಗಳ ಮನವಿ ಮನವಿಯಾಗಿಯೇ ಉಳಿದಿದೆ.
ಹಂದಿ ಹಾಗೂ ಮುಳ್ಳು ಹಂದಿಗಳ ಕಾಟದಿಂದಾಗಿ ಆಗುವ ಕೃಷಿ ನಾಶ ನಷ್ಟಗಳನ್ನು ರಕ್ಷಿಸಲು ಕೋವಿಯನ್ನು ಬಳಸಲು ಅವಕಾಶ ನೀಡುವ ಕುರಿತು ಆದುದರಿಂದ ತಾವು ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಿ ಮನವರಿಕೆ ಮಾಡಿಕೊಟ್ಟು ರೈತರಿಗೆ ಮಂಗಗಳಿಂದಾಗುವ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಶಾಶ್ವತ ಪರಿಹಾರಕ್ಕಾಗಿ ಈ ವಿಷಯವನ್ನು ರಾಜ್ಯ ವಿಧಾನ ಸಭೆಯಲ್ಲಿ ಚರ್ಚಿಸಿ ಮುಖ್ಯ ಮಂತ್ರಿಯವರ ಗಮನಕ್ಕೆ ತರಲು ಪ್ರಯತ್ನಿಸಬೇಕಾಗಿ ಒತ್ತಾಯಿಸಿ ಬೆಳ್ತಂಗಡಿ ಉಪತಹಶೀಲ್ದಾರರ ಮೂಲಕ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಅಖಿಲ ಭಾರತ ಕಿಸಾನ್ ಮಹಾಸಭಾ ಮುಖಂಡರಾದ ರಾಮಣ್ಣ ವಿಟ್ಲ, ಮಹಾವೀರ್ ಜೈನ್, ಸಂಜೀವ ಬೆಳ್ತಂಗಡಿ, ಸುಧಾ ಕೃಷ್ಣ ರಾವ್, ಕುಸುಮಾವತಿ, ಭವಾನಿ ಬಿ.ಎಸ್, ನಾರಾಯಣ ಮಲೆಬೆಟ್ಟು, ಮೇರಿ ಉಜಿರೆ ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಕ್ರೀಡೋತ್ಸವ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ನಡ-ಕನ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

Suddi Udaya

ಧರ್ಮಸ್ಥಳ ವಿರುದ್ದ ಅಪಪ್ರಚಾರ, ಷಡ್ಯಂತ್ರಗಳ ಹಿಂದೆ ಇರುವ ಕಾಣದ ಕೈಗಳನ್ನು ಸೂಕ್ತ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಭೇಟಿ ಮಾಡಿದ ರಾಜ್ಯ ಬಿಜೆಪಿ ನಾಯಕರ ನಿಯೋಗ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಭೇಟಿ

Suddi Udaya

ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆ: ನಡ ಸರಕಾರಿ ಪಿ.ಯು. ಕಾಲೇಜು ಬಾಲಕರ ಹಾಗೂ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕೊಯ್ಯೂರಿನಲ್ಲಿ ಸಿಡಿಲು ಬಡಿದು ದನ ಸಾವು

Suddi Udaya
error: Content is protected !!