September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯ ಮೂರು ವಕೀಲರ ಕಚೇರಿಗೆ, ಒಂದು ಇಂಜಿನಿಯರ್ ಆಫೀಸ್‌ಗೆ ಕುಂಕುಮ ?

ಬೆಳ್ತಂಗಡಿ: ಇಲ್ಲಿನ ಐಬಿ ರಸ್ತೆಯಲ್ಲಿರುವ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿರುವ ಮೂರು ಮಂದಿ ವಕೀಲರು ಹಾಗೂ ಒಬ್ಬರು ಇಂಜಿನಿಯರ್ ಕಚೇರಿಯ ಬಾಗಿಲಿನ ಮುಂಭಾಗದಲ್ಲಿ ಕಂಕುಮ ಚೆಲ್ಲಿರುವುದು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ಐಬಿ ರಸ್ತೆಯಲ್ಲಿರುವ ವಿಘ್ನೇಶ್ ಸಿಟಿ ವಾಣಿಜ್ಯ ಸಂಕಿರ್ಣದ ಒಂದನೆ ಮಹಡಿಯಲ್ಲಿರುವ ಸಂತೋಷ್ ಕುಮಾರ್, ಗಂಗಾಧರ ಪೂಜಾರಿ ವಕೀಲರ ಕಚೇರಿಯ ಬಾಗಿಲ ಮುಂದೆ ಹಾಗೂ ಸಿದ್ದಿವಿನಾಯಕ ಆಸೋಸಿಯೇಟ್ಸ್ ಇಂಜಿನಿಯರ್ ಕಚೇರಿ ಮುಂದೆ ಇಂದು ಬೆಳಿಗ್ಗೆ ಕುಂಕುಮ ಚೆಲ್ಲಿರುವುದು ಕಂಡು ಬಂದಿದೆ. ಅದೇ ರೀತಿ ಮಹಿಳಾ ಒಕ್ಕೂಟ ಕಟ್ಟಡದಲ್ಲಿರುವ ವಕೀಲರಾದ ಮನೋಹರ ಇಳಂತಿಲರ ಕಚೇರಿಯ ಬಾಗಿಲಿನ ಮುಂದೆಯೂ ಇದೇ ರೀತಿ ಕುಂಕುಮ ಚೆಲ್ಲಿರುವುದು ಕಂಡು ಬಂದಿದೆ.

ನಾಲ್ಕು ಮಂದಿಯ ಕಚೇರಿಯ ಬಾಗಿಲು ಎದುರು ಕುಂಕುಮ ಚೆಲ್ಲಿರುವ ಉದ್ದೇಶ ಏನುಗೊತ್ತಾಗಿಲ್ಲ.ಈ ಕಟ್ಟಡದಲ್ಲಿ ಹಲವು ಕಚೇರಿಗಳಿದ್ದರೂ, ನಾಲ್ಕು ಕಚೇರಿಯ ಎದರು ಮಾತ್ರ ಕುಂಕುಮ ಚೆಲ್ಲಿರುವುದು ಕುತೂಲಹಕ್ಕೆ ಕಾರಣವಾಗಿದೆ.

Related posts

ಕುಂಟಿನಿ ದ.ಕ ಜಿ.ಪಂ.ಕಿ.ಪ್ರಾ ಶಾಲೆಯಲ್ಲಿ ಸ್ವಚ್ಛತೆ ಕಾರ್ಯಕ್ರಮ ಮತ್ತು ಶಾಲಾ ಕೈತೋಟ ರಚನೆ

Suddi Udaya

ಮುಂಡಾಜೆ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿ ಪ್ರತಿಜ್ಞಾವಿಧಿ ಬೋಧನೆ

Suddi Udaya

ಹಿಂದೂ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ರವರಿಂದ “ದಿವ್ಯ ಜ್ಯೋತಿ” ಬಿರುದು ಪುರಸ್ಕೃತೆ ಕು.ಅದ್ವಿತಿ ರಾವ್ ರವರಿಗೆ ಸನ್ಮಾನ

Suddi Udaya

ಭಾರೀ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ: ಪಜಿರಡ್ಕದಲ್ಲಿ ಗಂಗಾಪೂಜೆ

Suddi Udaya

“ತೂಗುಸೇತುವೆಗಳ ಸರದಾರ” ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ ನಿಧನ

Suddi Udaya

ಬೆಳ್ತಂಗಡಿ ಬಿಜೆಪಿ ಪಕ್ಷದ ಕಚೇರಿಗೆ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ

Suddi Udaya
error: Content is protected !!