
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಹತ್ತು ದಿನಗಳ ಯೋಗ ತರಬೇತಿ ಶಿಬಿರ ಜೂ.11ರಂದು ಉದ್ಘಾಟನೆಗೊಂಡಿತು.
ಉಜಿರೆಯ ಶ್ರೀ ಧ.ಮಂ. ನ್ಯಾಚುರೋಪತಿ ಕಾಲೇಜಿನ ಉಪಪ್ರಾಂಶುಪಾಲೆ ಸುಜಾತ ಉದ್ಘಾಟಿಸಿ ಮಾತನಾಡಿ, ಯೋಗವು ಈ ಕ್ಷಣದ ಬದುಕನ್ನು ಮತ್ತು ವರ್ತಮಾನವನ್ನು ಪ್ರತ್ಯಕ್ಷವಾಗಿ ತೋರಿಸಲು ಅತ್ಯುತ್ತಮ ಸಾಧನ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಕೆ. ಸುರೇಶ್ ಮಾತನಾಡಿ, ಯೋಗ ಮಾನವನ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ದಿನನಿತ್ಯದ ಜೀವನ ಶೈಲಿಗೆ ಯೋಗ ಅತ್ಯಗತ್ಯ ಎಂದರು.
ಯೋಗ ತರಬೇತುದಾರರು, ಶ್ರೀ ಧ.ಮಂ. ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳಾದ ಕ್ಷಮಾ ಮತ್ತು ಅಮೃತವರ್ಷಿಣಿ, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕರಾದ ಚಂದ್ರಶೇಖರ ಸ್ವಾಗತಿಸಿ, ಅರ್ಚನಾ ವಂದಿಸಿ, ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.