July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಐಟಿಐಯಲ್ಲಿ ಕ್ಯಾಂಪಸ್ ಸಂದರ್ಶನ

ವೇಣೂರು : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ 2025ರ ಸಾಲಿನಲ್ಲಿ ತರಬೇತಿ ಪಡೆದು ತೇರ್ಗಡೆಯಾಗುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪನಿಗಳಿಂದ ಆಯ್ಕೆ ಸಂದರ್ಶನಗಳನ್ನು ನಡೆಸಲಾಯಿತು.

ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ ಟೊಯೋಟೊ ಕಿರ್ಲೋಸ್ಕರ್ ಮೋಟರ್ಸ್, ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್, ಎಲ್ ಅಂಡ್ ಟಿ, ಇಶಾರ್ ಮೋಟಾರ್ಸ್, ಕಿರ್ಲೋಸ್ಕರ್ ಟೋಯೋಡಾ ಟೆಕ್ಸ್ಟೈಲ್ಸ್ ಮೆಷಿನರಿಸ್, ಬಾಷ್, ಸಸ್ಮೋಸ್, ಅದ್ವೆöತ್ ಹುಂಡೈ, ಟ್ರೆöಡೆಂಟ್ ಗ್ರೂಫ್ಸ್, ಟಾಟಾ ಅರವಿಂದ್ ಮೋಟಾರ್ಸ್, ಭಾರತ್ ಅಟೋ ಕಾರ್ಸ್, ಭವಾನಿ ಇಂಡಸ್ಟ್ರಿಸ್ ಮುಂತಾದ ಖ್ಯಾತನಾಮ ಕೈಗಾರಿಕಾ ಸಂಸ್ಥೆಗಳಿಂದ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಆಸುಪಾಸಿನ ಹಲವಾರು ಐಟಿಐ ಸಂಸ್ಥೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿರೂ ಈ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಂಡಿದ್ದು ಐಟಿಐ ತರಬೇತಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೇಮಕಾತಿಯ ಅವಕಾಶವನ್ನು ಪಡೆದಿದ್ದು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲದಂತಾಗಿದ್ದು ಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶ ಪ್ರಾಪ್ತಿಯಾಗಿದೆ.

ವೇಣೂರು ಐಟಿಐಯ ಎಲ್ಲಾ ತರಬೇತಿದಾರರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಐಟಿಐಗಳ 600ಕ್ಕೂ ಹೆಚ್ಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಇದರ ಪ್ರಯೋಜನ ಪಡೆಯುವಂತಾಗಿದೆ ಎಂದು ವೇಣೂರು ಐಟಿಐನ ಪ್ರಾಚಾರ್ಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Related posts

ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಲವಂತಿಗೆ -ಮಿತ್ತಬಾಗಿಲು ನಲ್ಲಿ “ಸ್ವ ಸಹಾಯ ಸಂಘಗಳ” ಉದ್ಘಾಟನೆ

Suddi Udaya

ಪಿಯುಸಿ ವಿದ್ಯಾರ್ಥಿ ಸಾನ್ವಿ ಅಸೌಖ್ಯದಿಂದ ನಿಧನ

Suddi Udaya

ಧರ್ಮಸ್ಥಳ ಶಾಂತಿವನದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Suddi Udaya

ಮಂಗಳೂರು ಶ್ರೀ ನಾರಾಯಣ ಗುರು ವೈದಿಕ ಸಮಿತಿ ವತಿಯಿಂದ ಗುರುವಂದನಾ ಕಾರ್ಯಕ್ರಮ

Suddi Udaya

ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್‌ : ಉಜಿರೆಯ ಎಸ್.ಡಿ.ಎಂ ವಿದ್ಯಾರ್ಥಿಗಳ ಸಾಧನೆ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಬಾಲಕರ ಪುಟ್ ಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!