25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿರಾಜ್ಯ ಸುದ್ದಿವರದಿ

ಕೆಂಪು ಕಲ್ಲು ಮತ್ತು ಮರಳು ಸಾಗಾಟಕ್ಕೆ ಕಠಿಣ ಕಾನೂನು : ಜನ ಪ್ರತಿನಿಧಿಗಳ ಮೌನವೇಕೆ ? : ಸಮಾಜ ಸೇವಕ ಡಾ. ರವಿ ಕಕ್ಕೆ ಪದವು

ಬೆಳ್ತಂಗಡಿ: ಕೆಂಪು ಕಲ್ಲು ಮತ್ತು ಮರಳು ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವಂತದ್ದು. ಆದರೆ ಸರಕಾರದ ಕಠಿಣ ಕಾನೂನಿಂದಾಗಿ ಕಟ್ಟಡ ನಿರ್ಮಾಣದಲ್ಲಿ ಸಮಸ್ಯೆಯಾಗಿರುವುದು ಮಾತ್ರವಲ್ಲದೆ, ಸಾವಿರಾರು ಕುಟುಂಬಗಳು ಬೀದಿಗೆ ಬೀಳುವಂತಹ ಸ್ಥಿತಿಯಲ್ಲಿದೆ. ಈ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಯಾಕೆ ಮೌನ ಮುರಿಯುತ್ತಿಲ್ಲ ಎಂದು ಗುತ್ತಿಗೆದಾರ ಹಾಗೂ ಸಮಾಜ ಸೇವಕ ಡಾ. ರವಿ ಕಕ್ಕೆಪದವು ಪ್ರಶ್ನಿಸಿದ್ದಾರೆ.

ಈ ಕುರಿತು ಬಹಿರಂಗ ಪತ್ರ ಬರೆದಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರತೀ ರಾಜಕಾರಣಿಗಳ ಮನೆಗೆ, ಸರ್ಕಾರಿ ಕಟ್ಟಡಗಳಿಗೆ, ಸಾರ್ವಜನಿಕ ಬಡ ಕುಟುಂಬದವರಿಗೆ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಕೆಂಪು ಕಲ್ಲುಗಳು ಬೇಕು. ಆದರೆ ಇದಕ್ಕೆ ಯಾಕೆ ಇಷ್ಟು ಕಠಿಣ ಕಾನೂನು? ಕೆಂಪು ಕಲ್ಲಿನ ಹಿಂದ ಅದಷ್ಟೋ ಬಡ ಕುಟುಂಬದ ಪರಿಶ್ರಮ ಇದೆಯೆಂದು ಜನಪ್ರತಿನಿಧಿಗಳು ಆಲೋಚನೆ ಮಾಡಿಲ್ಲ ಯಾಕೆ ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಮನೆ ಕಟ್ಟಲು ಕೆಂಪು ಕಲ್ಲು ಬೇಕು. ಆದರೆ ಕೆಂಪ ಕೋರೆ ನಡೆಸುವವರ ವಿರುದ್ಧ ಸರ್ಕಾರ ದಿನಕ್ಕೊಂದು ಕಾನೂನು ತರುತ್ತಿದೆ. ಜನಪ್ರತಿನಿಧಿಗಳು, ಸಾರ್ವಜನಿಕರು ಇದನ್ನು ಯಾವತ್ತಾದರೂ ಪ್ರಶ್ನೆ ಮಾಡಿಲ್ಲ ಯಾಕೆ?

ಈಗ ಕೆಂಪು ಕಲ್ಲು ಸಾಗಾಟವೇ ಬಂದ್ ಆಗಿದೆ. ಇದರಿಂದಾಗಿ ಅದೆಷ್ಟು ಕುಟುಂಬಗಳು ಬೀದಿ ಪಾಲಾಗಿದ್ದಾರೆ ? ಇದರ ಬಗ್ಗೆ, ಜನಪ್ರತಿನಿಧಿಗಳು ಕಿಂಚಿತ್ತೂ ಚಿಂತೆ ಮಾಡಿಲ್ಲ ಯಾಕೆ..? ಕೆಂಪು ಕಲ್ಲು, ಮರಳು ಎಲ್ಲರಿಗೂ ಬೇಕು. ಆದರೆ ಸರ್ಕಾರ ನೀಡುತ್ತಿರುವ ಕಿರುಕುಳ ನಿಮಗರಿಯದಾಯಿತೇ ? ಅದಕ್ಕಾಗಿಯೇ ನಾವುಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್ ಗೆ ಕರೆ ನೀಡಿದ್ದು. ಒಂದು ಕೆಂಪು ಕಲ್ಲು ಪಾಯ ಮಾಡ ಬೇಕಾದರೆ ಸರ್ಕಾರ ನೀಡುವ ಆದೇಶಗಳನ್ನು ಪಾಲಿಸಿ ಕೆಂಪು ಕಲ್ಲು ಪಾಯ ಪ್ರಾರಂಭ ಮಾಡುವಾಗ ನಮ್ಮ ಅರ್ಧ ಜೀವ ಹೋಗಿರುತ್ತದೆ. ದಿನ ಹೋದ ಹಾಗೆ ಸರ್ಕಾರದ ಕಾನೂನು ಜಾಸ್ತಿ ಆಗಿ ಕೊನೆಗೆ ಕೆಂಪು ಕಲ್ಲು ಪಾಯವನ್ನೆ ಬಂದ್ ಮಾಡುವ ಅನಿವಾರ್ಯತೆ ಬಂದಿದೆ. ಈಗ ಆಗಿರುವುದೂ ಅದೇ. ಕೆಂಪು ಕಲ್ಲು ಸಾಗಾಟ ಆಗದಿದ್ದರೆ ಕೆಂಪು ಕಲ್ಲು ಕೋರೆಯಲ್ಲಿ ಕೆಲಸ ಮಾಡುವುದರಿಂದ ಹಿಡಿದು ಮನೆಕಟ್ಟುವ ಮೇಸ್ತ್ರಿಗಳು, ಹೆಲ್ಪರ್ ಗಳು, ಸೆಂಟ್ರಿಂಗ್ ಪ್ರೈಂಟಿಂಗ್ ಕೆಲಸಗಾರರು.. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ 25000 ರಿಂದ 30000 ಸಾವಿರ ಕಾರ್ಮಿಕರಿಗೆ ಕೆಲಸವಿಲ್ಲದೆ ಬೀದಿಪಾಲು ಆಗಿದ್ದಾರೆ. ಇದಕ್ಕೆ, ಕಾರಣ ಕರ್ತರು ಯಾರು ? ಸರ್ಕಾರ, ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ಇನ್ನಾದರೂ ಎಚ್ಚೆತ್ತು ಕೊಂಡು ಕೆಂಪು ಕಲ್ಲು ಹಾಗೂ ಹೊಯಿಗೆ ಗಳಿಗೆ ನೀಡುವ ಪರವಾನಿಗೆಯ ಕಾನೂನು ಸಡಿಲಗೊಳಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಕೈಗೆಟುಕುವ ದರದಲ್ಲಿ ನೀಡ ಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಗಳಲ್ಲಿ ಬೇಡಿಕೊಳ್ಳುತ್ತೇವೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಗ್ರಾಮೀಣ ಘಟಕದ ವತಿಯಿಂದ ಕೊಕ್ಕಡ ಎಂಡೊಸಲ್ಪಾನ್ ಕೇಂದ್ರದಲ್ಲಿ ಇಂದಿರಾ ಗಾಂಧಿ ಜನ್ಮದಿನ ಆಚರಣೆ

Suddi Udaya

ಅಜಿತ್ ಪೂಜಾರಿ ಕನ್ಯಾಡಿ ರಚಿಸಿರುವ ‘ಬಂದೆನು ಶಾಲೆಗೆ ಓಡೋಡಿ’ ಹಾಡು ಬಿಡುಗಡೆ

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರಖಂಡ ಮತ್ತು ಘಟಕ ಸಮಿತಿಗಳ ಸಮಾಲೋಚನಾ ಬೈಠಕ್

Suddi Udaya

ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಮತದಾನ

Suddi Udaya

ಉಜಿರೆ : ಸುರ್ಯ ರಸ್ತೆಯಲ್ಲಿ ಬೃಹತ್ ಗಾತ್ರದ ಅಪಾಯಕಾರಿ ಮರ: ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗಳೂರಿನ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸಹಯೋಗದೊಂದಿಗೆ’ಯಕ್ಷ ಶಿಕ್ಷಣ’ ಕಾರ್ಯಕ್ರಮದ ಉದ್ಘಾಟನೆ

Suddi Udaya
error: Content is protected !!