23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುಂಡೂರಿ: ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ ಆರೋಪ: ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

ಗುಂಡೂರಿ : ಇಲ್ಲಿಯ ಶಾಂತಿಗುಡ್ಡೆ ಎಂಬಲ್ಲಿ ಸುಭಾಷ್ ಪೂಜಾರಿ ಮನೆ ಬಳಿಯ ಗುಡ್ಡೆಯಲ್ಲಿ ಸೊಪ್ಪು ಕಡಿದು ತೆಂಗಿನ ಮರದ ಬುಡಕ್ಕೆ ತಂದು ಹಾಕುತ್ತಿದ್ದುದನ್ನು ಆಕ್ಷೇಪಿಸಿ ರಾಜು, ವಿನೋದ, ದೀಪಕ್ ರವರು ಸುಭಾಷ್ ಪೂಜಾರಿ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.ಎಂದು ಆರೋಪಿಸಿ ನೀಡಿದ ದೂರಿನಂತೆ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿಜೂ.27ರಂದು ಪ್ರಕರಣ ದಾಖಲಾಗಿದೆ.


ಘಟನೆ ವಿವರ: ಜೂ.27 ರಂದು ಗುಂಡೂರಿ ಗ್ರಾಮದ ಶಾಂತಿಗುಡ್ಡೆ ಎಂಬಲ್ಲಿ ಸುಭಾಷ್ ಪೂಜಾರಿ ಎಂಬುವವರು ತನ್ನ ವಾಸದ ಮನೆಯಲ್ಲಿರುವ ಸಮಯ ರಾಜು ಮತ್ತು ಆತನ ಹೆಂಡತಿ ಶ್ರೀಮತಿ ವಿನೋದ ರವರು ಸುಭಾಷ್ ಪೂಜಾರಿ ಮನೆ ಬಳಿಯ ಗುಡ್ಡೆಯಲ್ಲಿ ಸೊಪ್ಪು ಕಡಿದು ಸುಭಾಷ್ ಪೂಜಾರಿ ಸ್ವಾಧೀನವಿರುವ ತೆಂಗಿನ ಮರದ ಬುಡಕ್ಕೆ ತಂದು ಹಾಕುತ್ತಿದ್ದುದನ್ನು ಕಂಡು ಸುಭಾಷ್ ಪೂಜಾರಿ ಆಕ್ಷೇಪಿಸಿದ್ದಕ್ಕೆ ರಾಜು ಎಂಬಾತನು ಸುಭಾಷ್ ಪೂಜಾರಿ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನಡೆಸಿ ಏಕಾಏಕಿಯಾಗಿ ರಾಜು, ವಿನೋದ ಮತ್ತು ಅವರ ಮಗನಾದ ದೀಪಕ್ ರವರುಗಳು ಸೇರಿ ದೊಣ್ಣೆಗಳಿಂದ ಸುಭಾಷ್ ಪೂಜಾರಿರವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿಸಲಾಗಿದೆ.ಹಲ್ಲೆಯಿಂದ ಸುಭಾಷ್ ಪೂಜಾರಿ ರವರಿಗೆ ಗಾಯಗಳಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಎಕ್ಸೆಲ್‌ ಟೆಕ್ನೋ ಸ್ಕೂಲ್‌ಗೆ ಶೇ.100 ಫಲಿತಾಂಶ

Suddi Udaya

ಉಜಿರೆಯಲ್ಲಿ ರೈತ ಉತ್ಪಾದಕರ ಕಂಪನಿ ಉದ್ಘಾಟನೆ ಹಾಗೂ ಷೇರು ಪ್ರಮಾಣ ಪತ್ರ  ವಿತರಣೆ

Suddi Udaya

ಶಟ್ಲ್ ಬ್ಯಾಡ್ಮಿಂಟನ್ ವಂದನ್ ನೆಲ್ಯಾಡಿ ಮಾಲೀಕತ್ವದ ಎ.ಎಫ್.ಸಿ ಅಟಾಕರ್ಸ್ ಹೊಸಮಜಲು ನೆಲ್ಯಾಡಿ ತಂಡಕ್ಕೆ ಪ್ರಶಸ್ತಿ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಭಾರತೀಯ ಮಜ್ದೂರ್ ಸಂಘದಿಂದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಿರಿಯ ಅಧಿಕಾರಿಯವರಿಗೆ ಮನವಿ

Suddi Udaya

ಬೆಳ್ತಂಗಡಿ: ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸ್ಕೌಟ್ ಗೈಡ್ ವಿಶ್ವ ಸ್ಕಾರ್ಪ್ ದಿನಾಚರಣೆ ಹಾಗೂ ಸನ್ ರೈಸ್ ದಿನಾಚರಣೆ

Suddi Udaya
error: Content is protected !!