July 23, 2026
ಆಯ್ಕೆ

ಬೆಳ್ತಂಗಡಿ ಲಯನ್ಸ್ ಕ್ಲಬ್ ಮುರಳಿ ಬಲಿಪ ತಂಡದ ಪದಗ್ರಹಣ

ಬೆಳ್ತಂಗಡಿ; ಸಂಪತ್ತು ಕೂಡಿಟ್ಟು ಕೊನೇಗೆ ಒಂದು ದಿನ ಸೇವೆ ಮಾಡುತ್ತೇವೆ ಎಂಬುದಾಗಿ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಇರುವ ಸಂಪತ್ತಿನಲ್ಲಿ ಅರ್ಹರು ಕಂಡ ತಕ್ಷಣ ಸೇವೆ ನೀಡುವ ಮೂಲಕ ಆದರ್ಶ ಮೆರೆಯಬೇಕು. ಅದಕ್ಕೆ ಲಯನ್ಸ್ ಕ್ಲಬ್ ಉತ್ತಮ ವೇದಿಕೆ ಎಂದು ಲಯನ್ಸ್ ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ಗೋವರ್ಧನ ಕೆ ಶೆಟ್ಟಿ ಹೇಳಿದರು.

ಲಯನ್ಸ್ ಕ್ಲಬ್ ಬೆಳ್ತಂಗಡಿ ನೂತನ ಅಧ್ಯಕ್ಷ ನ್ಯಾಯವಾದಿ ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಕೋಶಾಧಿಕಾರಿ ಸುಭಾಷಿಣಿ ಅವರ ನೂತನ ತಂಡಕ್ಕೆ ಪದಪ್ರದಾನ ಮಾಡಿ ಅವರು ಮಾತನಾಡಿದರು.

ಅಧಿಕಾರ ವಹಿಸಿ ಮಾತನಾಡಿದ
ಮುರಳಿ ಬಲಿಪ ಈ ವರ್ಷ ನಮ್ಮ ತಂಡ ನೀರಿನ ಸದ್ಭಳಕೆ, ಮರುಪೂರಣ, ಸರಕಾರಿ ಶಾಲೆ ಪುನರುಜ್ಜೀವನ ಮತ್ತು ಎಂಡೋ ಬಾಧಿತರಿಗೆ ನೆರವು ಈ ಮೂರು ಪ್ರಮುಖ ಸೇವಾ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ಜಲಕ್ಷ್ಯಾಮ ನಿವಾರಣೆಗೆ ಪಣ ತೊಟ್ಟು ಕನಿಷ್ಟ 50 ಕೊಳವೆ ಬಾವಿಯನ್ನು ಮರುಪೂರಣಗೊಳಿಸಲಾಗುವುದು ಎಂದರು. ನಿರ್ಗಮನಾಧ್ಯಕ್ಷ ದೇವದಾಸ ಶೆಟ್ಟಿ ಹಿಬರೋಡಿ ಮಾತನಾಡಿ, ಯಕ್ಷೋತ್ಸವ, ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನ ಜಾಗೃತಿ, 7 ಕಡೆ ತಂಗುದಾಣಗಳ ನಿರ್ಮಾಣ ಮೊದಲಾದ ಕಾರ್ಯಗಳೂ ಸೇರಿದಂತೆ 50 ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ಸೇವೆಗಳನ್ಮು ಅಭೂತಪೂರ್ವ ವಾಗಿ ನಡೆಸಲಾಗಿದೆ. ಈ ಬಗ್ಗೆ ತೃಪ್ತಿ ಇದೆ. ಈ ಸೇವಾ ಯಾನ ಇಲ್ಲಿಗೇ ಕೊನೆಯಾಗೂದಿಲ್ಲ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರತ್ಯೇಕ ಟ್ರಸ್ಟ್ ರಚಿಸಿ ವಾರ್ಷಿಕ10 ಲಕ್ಷ ರೂ ಯೋಜನೆ ರೂಪಿಸಲಾಗುವುದು ಎಂದರು.

ನಿಕಟ ಪೂರ್ವ ಕಾರ್ಯದರ್ಶಿ ಲಯನ್ ಕಿರಣ್ ಕುಮಾರ್ ಶೆಟ್ಟಿ ವರದಿ, ಕೋಶಾಧಿಕಾರಿ ಲೆಕ್ಕಪತ್ರ ನೀಡಿದರು.
ಲಿಯೋ ಕ್ಲಬ್ ಅಧ್ಯಕ್ಷೆ ಅಪ್ಸರಾ ಎಚ್.ಆರ್ ಗೌಡ, ಕೋಶಾಧಿಕಾರಿ ಅಭಿಜ್ಞಾ ಬೊಲ್ಮ, ಪ್ರಾಂತೀಯ ಅಧ್ಯಕ್ಷ ಜಗದೀಶ್ ಚಂದ್ರ ಡಿ ಕೆ, ವಲಯ ಅಧ್ಯಕ್ಷ ಜೊಸ್ಸಿ ಮಿನೇಜಸ್, ವಿವಿಧ ಕ್ಲಬ್ ಗಳ ಅಧ್ಯಕ್ಷರುಗಳಾದ ಮೂಡಬಿದ್ರೆಯ ಶಿವಪ್ರಸಾದ್ ಹೆಗ್ಡೆ,
ವೇಣೂರಿನ ಸುಧೀರ್ ಭಂಡಾರಿ, ಮುಚ್ಚುರು ನೀರುಡೆಯ ಮುರಳಿದಾಸ್ ಕೆ,
ಅಲಂಗಾರಿನ ಅಮಿತ್ ಡಿಸಿಲ್ವ,
ಗುರುಪುರ ಕೈಕಂಬದ ಲಯನ್
ಜೇಸನ್ ಪೀಟರ್, ಬಪ್ಪನಾಡು ಇನ್ಸ್ಪೈರ್‌ನ ಅನಿಲ್ ಕುಮಾರ್,
ಸುಲ್ಕೇರಿಯ ಪ್ರಶಾಂತ್ ಶೆಟ್ಟಿ ಬೊಳ್ಳಿಮಾರು, ಬೆಳುವಾಯಿಯ ಜಾನೆಟ್ ಉಪಸ್ಥಿತರಿದ್ದರು.

ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ನಿರೂಪಿಸಿದರು. ನೂತನ ಕೋಶಾಧಿಕಾರಿ
ಸುಭಾಷಿಷಿ ಧನ್ಯವಾದ ಸಲ್ಲಿಸಿದರು.

Related posts

ಜಿಲ್ಲಾ ಮಟ್ಟದ ಸಹಕಾರಿಗಳ ಹಾಗೂ ನವೋದಯ ಸದಸ್ಯರುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಗುರುವಾಯನಕೆರೆಯ ಸಿಬ್ಬಂದಿ ಪ್ರವೀಣ್ ಕುಮಾರ್ ರವರಿಗೆ ಪ್ರಶಸ್ತಿ

Suddi Udaya

ಪಣಕಜೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಸಮಿತಿ ರಚನೆ

Suddi Udaya

ಉಜಿರೆಯ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳ ಮತ್ತು ಸ್ವಚ್ಛತಾ ಸೇನಾನಿಗಳ ಪದಪ್ರದಾನ ಕಾರ್ಯಕ್ರಮ

Suddi Udaya

ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಕೇಂದ್ರ ಕಮಿಟಿಯ ನೂತನ ಸಮಿತಿ ರಚನೆ

Suddi Udaya

ಬಳಂಜ ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಹೇವ

Suddi Udaya

ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು: ಅಧ್ಯಕ್ಷರಾಗಿ ಕಿರಣ್‌ ಬುಡ್ಲೆಗುತ್ತು, ಕಾರ್ಯದರ್ಶಿಯಾಗಿ ನವೀನಚಂದ್ರ ಗೌಡ ಭೋಜಾರ

Suddi Udaya
error: Content is protected !!