July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ನಾವೂರು: ನಿoರ್ದಿ ಬಳಿ ರಸ್ತೆಗೆ ಬಿದ್ದ ಮರ ಗ್ರಾ.ಪಂ. ನಿಂದ ತೆರವು ಕಾರ್ಯ

ನಾವೂರು: ನಿನ್ನೆ (ಜು.8)ರಾತ್ರಿ ಸುರಿದ ಭಾರಿ ಮಳೆಗೆ ನಿoರ್ದಿ ರಸ್ತೆ ಬದಿಯ ಮರ ಬೆಳ್ತಂಗಡಿ -ಕಿಲ್ಲೂರು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿದ ತಕ್ಷಣ ಗ್ರಾ.ಪಂ. ಮರ ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಗಣೇಶ್ ಗೌಡ ನಾವೂರು ಹಾಗೂ ಪಂಚಾಯತ್ ಸದಸ್ಯ ಹಸೈನಾರ್, ಸ್ಥಳೀಯರಾದ ಎ.ಕೆ. ಅಬ್ಬಾಸ್, ಸತೀಶ್ ಸುವರ್ಣ, ಮಾಧವ ಗೌಡ ಒಳಗುಡ್ಡೆ, ಹಮೀದ್ ನಿoರ್ದಿ ರವರು ಮರವನ್ನು ತೇರವುಗೊಳಿಸಲು ಸಹಕರಿಸಿದರು.

ಸಾಲುಗಟ್ಟಿ ನಿಂತ ವಾಹನಗಳನ್ನು ಬದಲಿ ರಸ್ತೆಗಳಾದ ನವಗ್ರಾಮ ಜನತಾ ಕಾಲನಿ ಹಾಗೂ ಪಾಲೇದಬೆಟ್ಟು – ನಾವೂರು ರಸ್ತೆಯಲ್ಲಿ ಕಳಿಸಲಾಯಿತು.ರಸ್ತೆ ಬದಿಯಲ್ಲಿ ಹಲವಾರು ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಈಗಾಗಲೇ ಗ್ರಾ.ಪಂ. ನಿಂದ ಮನವಿ ಮಾಡಿದ್ದು ಮರ ತೆರವುಗೊಳಿಸಲು ಅನುಮತಿ ನೀಡಿರುತ್ತಾರೆ.

ಸಾರ್ವಜನಿಕರಿಗೆ ತೊಂದರೆ ಆಗುವ ಮೊದಲು ಮರ ತೆರವು ಗೊಳಿಸಿ ಮುಂದೆ ನಡೆಯುವ ಅನಾಹುತವನ್ನು ತಪ್ಪಿಸಬೇಕಾಗಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳಲ್ಲಿ ಪಂಚಾಯತ್ ನ ಮನವಿಯಾಗಿದೆ.

Related posts

ಉಜಿರೆ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಇದರ ವತಿಯಿಂದ ಸುನ್ನತ್ (ಮುಂಜಿ) ಕಾರ್ಯಕ್ರಮ

Suddi Udaya

ಮುಂಡೂರು : ಸಂಘದ ಹಣವನ್ನು ಕಟ್ಟಲು ಹೋದ ಮಹಿಳೆ ವಾಪಸ್ಸು ಮನೆಗೆ ಬಾರದೆ ನಾಪತ್ತೆ

Suddi Udaya

ಕಳೆಂಜ: ಶಿಬರಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಪರಪ್ಪು ಸಮೀಪ ಗುಡ್ಡ ಕುಸಿತ

Suddi Udaya

ಭಾರೀ ಮಳೆ ಹಿನ್ನೆಲೆ: ಇಂದು (ಮೇ 30) ದ.ಕ.ಜಿಲ್ಲೆಯ ಶಾಲೆಗಳಿಗೆ ರಜೆಘೋಷಣೆ

Suddi Udaya

ಎಸ್. ಎಸ್. ಎಲ್. ಸಿ ಪರೀಕ್ಷೆ: ಶ್ರೀ ಧ.ಮಂ. ಆಂ.ಮಾ. ಪ್ರೌಢಶಾಲಾ ವಿದ್ಯಾರ್ಥಿನಿ ಫಾತಿಮ ರಝ್ನೀನ ರಿಗೆ ಶೇ. 91.52

Suddi Udaya

ನಡ ಅಂತ್ರಾಯ ಗುಂಡಿಗೆ ಸ್ನಾನಕ್ಕೆ ಬಂದಿದ್ದ ನಾಲ್ವರಲ್ಲಿ ಓವ೯ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

Suddi Udaya
error: Content is protected !!