22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್ ಡಿ ಎಂ ಶಿಕ್ಷಣ ಸಂಸ್ಥೆಯಿಂದ ರೂ. 2.50 ಕೋಟಿ ವಿದ್ಯಾರ್ಥಿವೇತನ ವಿತರಣೆ

ಉಜಿರೆ:  ಗ್ರಾಮೀಣ ಪ್ರದೇಶದಿಂದ ಬಂದ ಬಡ ,ಪ್ರತಿಭಾವಂತ ವಿದ್ಯಾರ್ಥಿಗಳು  ಉನ್ನತ ಶಿಕ್ಷಣದಿಂದ ವಂಚಿತರಾಗದೆ  ಆಸಕ್ತಿಯ  ವಿಚಾರಗಳಲ್ಲಿ  ಸಂಶೋಧನೆ ನಡೆಸಲು   ಆರ್ಥಿಕ ಹಿನ್ನಡೆಯಲ್ಲಿರುವವರಿಗೆ  ಶಿಕ್ಷಣ  ಸಂಸ್ಥೆ  ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ.  ಇತರ ಶಿಕ್ಷಣ ಸಂಸ್ಥೆಗಳ ಬಡ,ಪ್ರತಿಭಾವಂತ ವಿದ್ಯಾರ್ಥಿಗಳಿಗೂ  ವಿದ್ಯಾರ್ಥಿವೇತನ ನೀಡಲಾಗುತ್ತಿದೆ.  ವಿದ್ಯಾರ್ಥಿಗಳು ಹಣವನ್ನು ಜಾಗೃತೆ ವಹಿಸಿ, ದುರ್ವ್ಯಯ ಮಾಡದೆ ,ವಿನಿಯೋಗಿಸಿ ಕಷ್ಟ ಪಟ್ಟು ಓದಿ ,ಉತ್ತಮ ಅಂಕ  ಪಡೆದು ,ಕೀರ್ತಿ ಗಳಿಸುವುದರೊಂದಿಗೆ ಸಮಾಜದಲ್ಲಿ ಪ್ರಕಾಶಿಸುವಂತಹ ವ್ಯಕ್ತಿಗಳಾಗಿ ಬೆಳೆಯಿರಿ  ಎಂದು  ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇನ್ದ್ರಕುಮಾರ್ ಹೇಳಿದರು.

ಅವರು ಜು. 10 ರಂದು ಉಜಿರೆ ಎಸ್ ಡಿ ಎಂ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ 2000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ  ರೂ 2.50  ಕೋಟಿ ಮೊತ್ತದ ವಿದ್ಯಾರ್ಥಿವೇತನವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು. ಕುಗ್ರಾಮವಾಗಿದ್ದ  ಉಜಿರೆಯ ಎಸ್ ಡಿ ಎಂ ಕಾಲೇಜು  ಉತ್ತಮ ಗುಣಮಟ್ಟದ ಶಿಕ್ಷಣದಿಂದ ರಾಷ್ಟ್ರ ಮಟ್ಟದಲ್ಲಿ 67 ನೇ ರಾಂಕ್  ಪಡೆಡಿದ್ದು, ಉಪನ್ಯಾಸಕ ವೃಂದದ ಪರಿಶ್ರಮ ಹಾಗೂ ವಿದ್ಯಾರ್ಥಿಗಳ  ಶ್ರಮ ಕಾರಣವಾಗಿ  ಎಸ್ ಡಿ ಎಂ ಉಜಿರೆಯ  ಲ್ಯಾಂಡ್  ಮಾರ್ಕ್  ಆಗಿ  ಗುರುತಿಸಲ್ಪಟ್ಟಿದೆ. 56  ಶಿಕ್ಷಣ ಸಂಸ್ಥೆಗಳನ್ನು ಹೊಂದಿದ  ಎಸ್ ಡಿ ಎಂ  ಶಿಕ್ಷಣ ಸಂಸ್ಥೆಯ  ಜತೆಗೆ  ಜು 14 ರಂದು ಕಾಂಚನದಲ್ಲಿ ರೂ 1.70ಕೋಟಿ  ವೆಚ್ಚದಲ್ಲಿ ಪ್ರಾಥಮಿಕ ಕನ್ನಡ ಶಾಲೆಯನ್ನು ಪ್ರಾರಂಭಿಸಲಾಗುತ್ತಿದ್ದು , ಸರಕಾರದ ದ್ವಿಭಾಷಾ ನೀತಿಯಂತೆ  ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ   ಭಾಷಾಧ್ಯಯನ  ಪ್ರಾರಂಭಿಸಲಾಗಿದೆ ಎಂದರು.                 

ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್,   ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ,ಸ್ನಾತಕೋತ್ತರ ವಿಭಾಗದ ಡೀನ್ ಡಾ.! ಸೌಮ್ಯ ಬಿ.ಪಿ,  ಉಪಸ್ಥಿತರಿದ್ದರು.  ಎಸ್ ಡಿ ಎಂ ಕಾಲೇಜು ಪ್ರಾಚಾರ್ಯ ಡಾ. ವಿಶ್ವನಾಥ ಪಿ. ಸ್ವಾಗತಿಸಿ,ಪ್ರಸ್ತಾವಿಸಿದರು.  ರಸಾಯನ ಶಾಸ್ತ್ರ   ವಿಭಾಗದ  ಡಾ. ನಫೀಸತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಎಂಜಿನೀಯರಿಂಗ್ ಕಾಲೇಜು  ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ ವಂದಿಸಿದರು.  ಪೂರ್ಣಿಮಾ ಅವರು ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಮಾಹಿತಿ ನೀಡಿದರು.

Related posts

ಜೇಎಸಿ ಆಫೀಸರ್ ಆಗಿ ಜೆಎಫ್ಎಮ್ ಚಿದಾನಂದ ಇಡ್ಯಾ ಆಯ್ಕೆ

Suddi Udaya

ರಾಷ್ಟ್ರಮಟ್ಟದ ಕರಾಟೆ ತೀರ್ಪುಗಾರರಾಗಿ ಸೆನ್ಸಾಯ್ ಅಶೋಕ್ ಆಚಾರ್ಯ ನೇಮಕ

Suddi Udaya

ಅಳದಂಗಡಿ ಪಲ್ಗುಣಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಬಿಜೆಪಿ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ಸಹಿಸುವುದಿಲ್ಲ; ಶಾಸಕ ಹರೀಶ್ ಪೂಂಜರ ಬಂಧನ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದೆ ಆಗುವ ವಿಚಾರಗಳಿಗೆ ಪೊಲೀಸ್ ಇಲಾಖೆ ಹಾಗೂ ಸರಕಾರ ನೇರ ಹೊಣೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ

Suddi Udaya

ಸರಕಾರಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ ನಲ್ಲಿ ನಶಮುಕ್ತ ಭಾರತ ಅಭಿಯಾನ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆರಂಬೋಡಿ ಕಿ. ಪ್ರಾ. ಶಾಲೆಗೆ ಬಟ್ಟಲು ಮತ್ತು ಗ್ಯಾಸ್ ಸ್ಟವ್ ವಿತರಣೆ

Suddi Udaya
error: Content is protected !!