September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್ ಡಿ ಎಂ ಶಿಕ್ಷಣ ಸಂಸ್ಥೆಯಿಂದ ರೂ. 2.50 ಕೋಟಿ ವಿದ್ಯಾರ್ಥಿವೇತನ ವಿತರಣೆ

ಉಜಿರೆ:  ಗ್ರಾಮೀಣ ಪ್ರದೇಶದಿಂದ ಬಂದ ಬಡ ,ಪ್ರತಿಭಾವಂತ ವಿದ್ಯಾರ್ಥಿಗಳು  ಉನ್ನತ ಶಿಕ್ಷಣದಿಂದ ವಂಚಿತರಾಗದೆ  ಆಸಕ್ತಿಯ  ವಿಚಾರಗಳಲ್ಲಿ  ಸಂಶೋಧನೆ ನಡೆಸಲು   ಆರ್ಥಿಕ ಹಿನ್ನಡೆಯಲ್ಲಿರುವವರಿಗೆ  ಶಿಕ್ಷಣ  ಸಂಸ್ಥೆ  ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ.  ಇತರ ಶಿಕ್ಷಣ ಸಂಸ್ಥೆಗಳ ಬಡ,ಪ್ರತಿಭಾವಂತ ವಿದ್ಯಾರ್ಥಿಗಳಿಗೂ  ವಿದ್ಯಾರ್ಥಿವೇತನ ನೀಡಲಾಗುತ್ತಿದೆ.  ವಿದ್ಯಾರ್ಥಿಗಳು ಹಣವನ್ನು ಜಾಗೃತೆ ವಹಿಸಿ, ದುರ್ವ್ಯಯ ಮಾಡದೆ ,ವಿನಿಯೋಗಿಸಿ ಕಷ್ಟ ಪಟ್ಟು ಓದಿ ,ಉತ್ತಮ ಅಂಕ  ಪಡೆದು ,ಕೀರ್ತಿ ಗಳಿಸುವುದರೊಂದಿಗೆ ಸಮಾಜದಲ್ಲಿ ಪ್ರಕಾಶಿಸುವಂತಹ ವ್ಯಕ್ತಿಗಳಾಗಿ ಬೆಳೆಯಿರಿ  ಎಂದು  ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇನ್ದ್ರಕುಮಾರ್ ಹೇಳಿದರು.

ಅವರು ಜು. 10 ರಂದು ಉಜಿರೆ ಎಸ್ ಡಿ ಎಂ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ 2000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ  ರೂ 2.50  ಕೋಟಿ ಮೊತ್ತದ ವಿದ್ಯಾರ್ಥಿವೇತನವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು. ಕುಗ್ರಾಮವಾಗಿದ್ದ  ಉಜಿರೆಯ ಎಸ್ ಡಿ ಎಂ ಕಾಲೇಜು  ಉತ್ತಮ ಗುಣಮಟ್ಟದ ಶಿಕ್ಷಣದಿಂದ ರಾಷ್ಟ್ರ ಮಟ್ಟದಲ್ಲಿ 67 ನೇ ರಾಂಕ್  ಪಡೆಡಿದ್ದು, ಉಪನ್ಯಾಸಕ ವೃಂದದ ಪರಿಶ್ರಮ ಹಾಗೂ ವಿದ್ಯಾರ್ಥಿಗಳ  ಶ್ರಮ ಕಾರಣವಾಗಿ  ಎಸ್ ಡಿ ಎಂ ಉಜಿರೆಯ  ಲ್ಯಾಂಡ್  ಮಾರ್ಕ್  ಆಗಿ  ಗುರುತಿಸಲ್ಪಟ್ಟಿದೆ. 56  ಶಿಕ್ಷಣ ಸಂಸ್ಥೆಗಳನ್ನು ಹೊಂದಿದ  ಎಸ್ ಡಿ ಎಂ  ಶಿಕ್ಷಣ ಸಂಸ್ಥೆಯ  ಜತೆಗೆ  ಜು 14 ರಂದು ಕಾಂಚನದಲ್ಲಿ ರೂ 1.70ಕೋಟಿ  ವೆಚ್ಚದಲ್ಲಿ ಪ್ರಾಥಮಿಕ ಕನ್ನಡ ಶಾಲೆಯನ್ನು ಪ್ರಾರಂಭಿಸಲಾಗುತ್ತಿದ್ದು , ಸರಕಾರದ ದ್ವಿಭಾಷಾ ನೀತಿಯಂತೆ  ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ   ಭಾಷಾಧ್ಯಯನ  ಪ್ರಾರಂಭಿಸಲಾಗಿದೆ ಎಂದರು.                 

ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್,   ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ,ಸ್ನಾತಕೋತ್ತರ ವಿಭಾಗದ ಡೀನ್ ಡಾ.! ಸೌಮ್ಯ ಬಿ.ಪಿ,  ಉಪಸ್ಥಿತರಿದ್ದರು.  ಎಸ್ ಡಿ ಎಂ ಕಾಲೇಜು ಪ್ರಾಚಾರ್ಯ ಡಾ. ವಿಶ್ವನಾಥ ಪಿ. ಸ್ವಾಗತಿಸಿ,ಪ್ರಸ್ತಾವಿಸಿದರು.  ರಸಾಯನ ಶಾಸ್ತ್ರ   ವಿಭಾಗದ  ಡಾ. ನಫೀಸತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಎಂಜಿನೀಯರಿಂಗ್ ಕಾಲೇಜು  ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ ವಂದಿಸಿದರು.  ಪೂರ್ಣಿಮಾ ಅವರು ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಮಾಹಿತಿ ನೀಡಿದರು.

Related posts

ಯೋಗಾಸನ ಸ್ಪರ್ಧೆಯಲ್ಲಿ ಶ್ರೀ ಧ. ಮ. ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Suddi Udaya

ಮಳೆಗೆ ಕೃತಕ ಕೆರೆಯಂತಾದ ಕಕ್ಕಿಂಜೆ–ನೆರಿಯ ರಸ್ತೆ

Suddi Udaya

ಐತಿಹಾಸಿಕ ಶೋಭಾಯಾತ್ರೆ “ಧರ್ಮಯಾನ” ಭಕ್ತಿಯ ಅಪೂರ್ವ ಯಾತ್ರೆ: ಮೋಹನ್ ಕುಮಾರ್

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಮಹಿಳಾ ವಿಭಾಗದ ಮತ್ತು ಯುವ ವಿಭಾಗದ ಪದಾಧಿಕಾರಿಗಳ ಆಯ್ಕೆ

Suddi Udaya

ಪಡಂಗಡಿ: ಸಿಡಿಲು ಬಡಿದು ಕಟ್ಟಡಕ್ಕೆ ಬೆಂಕಿ

Suddi Udaya

ಉಜಿರೆ: ಅನುಗ್ರಹ ಆಂ.ಮಾ. ಶಾಲೆಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya
error: Content is protected !!