22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಮುಖ್ಯ ದ್ವಾರದ ಬಳಿ ಪಾರ್ಕ್ ಮಾಡಿದ ದ್ವಿಚಕ್ರ ವಾಹನ ಕಳವು

ಧರ್ಮಸ್ಥಳ: ಧರ್ಮಸ್ಥಳ ಮುಖ್ಯ ದ್ವಾರದ ಬಳಿಯ ಪಾರ್ಕಿಂಗ್‌ನಲ್ಲಿ ದ್ವಿಚಕ್ರವಾಹವನ್ನು ಕಳ್ಳರು ಕಳವು ಮಾಡಿದ ಪ್ರಕರಣ ಜು.10 ರಂದು ವರದಿಯಾಗಿದೆ.


ನಿಡ್ಲೆ ಗ್ರಾಮದ ಮಜಲುಮಾರು ಸಂಜೀವ ಗೌಡರ ಪುತ್ರಿ ಉಜಿರೆ ಪ್ರಕಾಶ್ ಇಲೆಕ್ಟ್ರಾನಿಕ್ಸ್‌ನಲ್ಲಿ ಉದ್ಯೋಗದಲ್ಲಿರುವ ಆಶಾ ಅವರು ನಿಡ್ಲೆಯಿಂದ ಧರ್ಮಸ್ಥಳ ತನಕ ದ್ವಿಚಕ್ರವಾಹನದಲ್ಲಿ ಬಂದು ಧರ್ಮಸ್ಥಳದ ಮಹಾದ್ವಾರದ ಬಳಿಯ ವಾಹನ ಪಾರ್ಕ್‌ನಲ್ಲಿ ವಾಹನ ನಿಲ್ಲಿಸಿ ಉಜಿರೆಗೆ ಬರುತ್ತಿದ್ದರು. ಜು.10 ರಂದು ಬೆಳಿಗ್ಗೆ ಎಂದಿನಂತೆ ದ್ವಿಚಕ್ರ ವಾಹನ KA 21 X 7375 ನೇ ನಂಬ್ರದ ಹೋಂಡಾ ಕಂಪನಿಯ ಡಿಯೋ ವಾಹನವನ್ನು ಪಾರ್ಕ್ ಮಾಡಿ ಕೆಲಸಕ್ಕೆ ಉಜಿರೆಗೆ ಬಂದಿದ್ದರು. ಸಂಜೆ ಕೆಲಸ ಮುಗಿಸಿ ಹೋಗುವಾಗ ತಾನು ಪಾರ್ಕ್ ಮಾಡಿದ ಸ್ಥಳದಲ್ಲಿ ದ್ವಿಚಕ್ರವಾಹನ ಇರಲಿಲ್ಲ. ನಂತರ ಅಕ್ಕ ಪಕ್ಕದಲ್ಲಿ ಹುಡುಕಾಡಿ ಎಲ್ಲಿಯೂ ಪತ್ತೆಯಾಗಲಿಲ್ಲ. ಕೂಡಲೇ ತನ್ನ ತಂದೆಯವರಿಗೆ ವಿಷಯ ತಿಳಿಸಿ ಅವರ ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದಿರುವುದರಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳವಾದ ದ್ವಿಚಕ್ರವಾಹನದ ಮೌಲ್ಯ ರೂ. 25 ಸಾವಿರ ಎಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಣಿಯೂರು ಗ್ರಾಮ ಪಂಚಾಯತ್‌ ಗ್ರಾಮ ಸಭೆ

Suddi Udaya

ಜ.16-25: ಕಾಜೂರು ಮಖಾಂ ಉರೂಸ್: ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಜೊತೆ ಸಮನ್ವಯ ಸಭೆ

Suddi Udaya

ಗೇರುಕಟ್ಟೆ ಪತಂಜಲಿ ಯೋಗಶಾಖೆಯಲ್ಲಿ ತುಳಸಿ ಪೂಜೆ

Suddi Udaya

ಬೆಳ್ತಂಗಡಿ : ಮಕ್ಕಳ ಹಕ್ಕುಗಳ ಮಾಸೋತ್ಸವ ಉದ್ಘಾಟನೆ

Suddi Udaya

ಹತ್ಯಡ್ಕ ಪ್ರಾ.ಕೃ.ಪ. ಸಹಕಾರ ಸಂಘದ ನೂತನ “ಮುದ್ದಿಗೆ ಶಾಖೆ” ಉದ್ಘಾಟನೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮಹಿಳಾ ವಿಭಾಗದಿಂದ ಮಹಿಳಾ ಸಪ್ತಾಹ..

Suddi Udaya
error: Content is protected !!