24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು ಗ್ರಾಮ ಪಂಚಾಯತ್ ಗ್ರಾಮ ಸಭೆ

ಬಂದಾರು: ಬಂದಾರು ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಜು.17 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಅಧ್ಯಕ್ಷತೆಯಲ್ಲಿ ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ್ ಸಭೆಯನ್ನು ಮುನ್ನಡೆಸಿದರು. ‌

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು.

ಈ ವೇಳೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಗ್ರಾಮಕ್ಕೆ ಹೆಸರು ತಂದು ಕೀರ್ತಿ ಪೆರ್ಲ ಬೈಪಾಡಿ ಹಾಗೂ ಬುಳೇರಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಗೌರವಿಸಲಾಯಿತು. ನಿವೃತ್ತ ಸರ್ಕಾರಿ ಅಧಿಕಾರಿ ರತ್ನವಾತಿ ಅವರನ್ನು ಸನ್ಮಾನಿಸಲಾಯಿತು

ಉಪಾಧ್ಯಕ್ಷೆ ಪುಷ್ಪಾವತಿ ಸದಸ್ಯರಾದ ಚೇತನ್ ಕುಮಾರ್, ವಿಮಲ, ಭಾರತಿ, ಗಂಗಧಾರ ಪೂಜಾರಿ, ಸುಚಿತ್ರಾ, ಅನಿತಾ, ಶಿವ ಗೌಡ, ಬಾಲಕೃಷ್ಣ ಗೌಡ ಎಂ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್ ಜಿ . ಸ್ವಾಗತಿಸಿದರು. ಸಿಬ್ಬಂದಿಗಳಾದ ದಿನಕರ ಜಮಾ ಖುರ್ಚಿನ ವಿವರ ನೀಡಿದರು ಮತ್ತು ಪ್ರವೀಣ್ ವಾರ್ಡ್ ಸಭೆ ಬೇಡಿಕೆ ವಾಚಿಸಿದರು. ಸಿಬ್ಬಂದಿಗಳಾದ ಶಾಂತಿ.ಬಿ, ಉಷಾ, ಪವಿತ್ರ, ಸಹನ, ಸರೋಜಿನಿ, ಕೇಶವ, ರಕ್ಷಿತಾ ಸಹಕರಿಸಿದರು.

Related posts

ಬೆಳ್ತಂಗಡಿ : ಕುಣಿತ ಭಜನಾ ತರಬೇತಿ ನೀಡುತ್ತಿರುವ ತರಬೇತಿದಾರರುಗಳ ಸಭೆ: ಪ್ರಥಮ ಬಾರಿಗೆ ಭಜನೆಯಲ್ಲಿ ನಿನ್ನೆ ಇಂದು ನಾಳೆಯ ಬಗ್ಗೆ ಗಂಭೀರ ಚರ್ಚೆ

Suddi Udaya

ಕುಕ್ಕಳ: ತುರ್ತು ಸ್ಪಂದಿಸಿ ಸಮಸ್ಯೆ ಪರಿಹರಿಸಿದ ಬೆಳ್ತಂಗಡಿ ಕಾರ್ಯಪಾಲಕರು

Suddi Udaya

ಇಂದು ಕಾಶಿ ಬೆಟ್ಟು ನಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಮೊಗ್ರು: ನೆಕ್ಕರಾಜೆ ನಿವಾಸಿ ಲಕ್ಷ್ಮೀ ನಿಧನ

Suddi Udaya

ಮೀಯಾರು ಕೆಮ್ಮಟ್ಟೆಯಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟ್ ವತಿಯಿಂದ ನೀರು ಉಳಿಸಿ ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ

Suddi Udaya

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ” ಹದಿಹರೆಯ ಮತ್ತು ಆರೋಗ್ಯ” ಕಾರ್ಯಕ್ರಮ

Suddi Udaya
error: Content is protected !!