ಅಳದಂಗಡಿ ಗ್ರಾಮದ ನಲ್ಕಂಡ ಮನೆಯ ಸುಭಾಷ್ ಭಂಡಾರಿ ಮತ್ತು ಶ್ರೀಮತಿ ಸುರೇಖಾ ಭಂಡಾರಿ ದಂಪತಿಗಳ ಪುತ್ರ ವಿಶ್ವಾಸ್ ಭಂಡಾರಿಯವರಿಗೆ ಬಿಲ್ಲವ ಸಮಾಜದ ಗುತ್ತು ಬರ್ಕೆಗಳ ಪೈಕಿ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೊಂಬೇಲ್ ಗುತ್ತುವಿನಲ್ಲಿ ಆಷಾಢ ಮಾಸದಲ್ಲಿ ಜರುಗಿದ ಕಲ್ಲುರ್ಟಿ ದೈವದ ಗಗ್ಗರ ಸೇವೆಯಲ್ಲಿ ಕೊಂಬು(ಕಹಳೆ) ಊದಿರುವುದಕ್ಕೆ ಸನ್ಮಾನಿಸಲಾಯಿತು.






