July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಶಿಶು ವೈದ್ಯೆ ಡಾ.ಶಿಲ್ಪಾ ಹೆಗ್ಡೆ ನೇತೃತ್ವದ ಮಕ್ಕಳ ಸ್ನೇಹಿ‌ ಕಲರವ ಸೆಂಟರ್ ಬೆಳ್ತಂಗಡಿಯಲ್ಲಿ ಪ್ರಾರಂಭ

ಬೆಳ್ತಂಗಡಿ: ಶಿಶು ವೈದ್ಯೆ ಡಾ.ಶಿಲ್ಪಾ ಹೆಗ್ಡೆ ನೇತೃತ್ವದ ಮಕ್ಕಳ ಬೆಳವಣಿಗೆಯ ಸಮಸ್ಯೆಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಥೆರಪಿ ಹಾಗೂ ಕೌನ್ಸಿಲಿಂಗ್ ಸೇವೆ ನೀಡುವ ಮಕ್ಕಳ ಸ್ನೇಹಿ‌ ಕಲರವ ಸೆಂಟರ್ ಬೆಳ್ತಂಗಡಿಯ ಸುವರ್ಣ ಆರ್ಕೇಡ್ ಮೊದಲ ಮಹಡಿಯಲ್ಲಿ ಜು. 27ರಂದು ಪ್ರಾರಂಭಗೊಂಡಿದೆ.

ಬೆಳ್ತಂಗಡಿ ತಾಲೂಕಿನ ಹಿರಿಯ ವೈದ್ಯರಾದ ಡಾ.ಶ್ರೀನಿವಾಸ್ ಡೋಂಗ್ರೆ ನೂತನ ಕಲರವ ಸಂಟರನ್ನು ಉದ್ಘಾಟಿಸಿ ಶುಭ ಕೋರಿದರು.ಕಲರವ ಪೌಂಢೇಶನ್ ಸ್ಥಾಪಕರಾದ ಡಾ.ಶಿಲ್ಪಾ ಹೆಗ್ಡೆ ಮಾತನಾಡಿ ಮಕ್ಕಳಿಗೆ ಸಮಗ್ರವಾದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳ ಹಿಂದೆ ಕಲರವ ಸೆಂಟರನ್ನು ಪ್ರಾರಂಭಿಸಲಾಗಿದೆ.

ಮಕ್ಕಳಲ್ಲಿ ಅಡಕಗೊಂಡಿರುವ ಎಲ್ಲಾ ರೀತಿಯ ಬೆಳವಣಿಗೆಯ ಸಮಸ್ಯೆಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಥೆರಪಿ ಹಾಗೂ ಕೌನ್ಸಿಲಿಂಗ್ ಮೂಲಕ ಸೂಕ್ತ ಚಿಕಿತ್ಸೆ ನೀಡಿ ಮಕ್ಕಳಿಗೆ ಅರಿವು ಮತ್ತು ಬೆಂಬಲವನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.ವಾರದ ಎಲ್ಲಾ ದಿನವೂ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಕಲರವ ಸೆಂಟರ್ ತೆರೆದಿರುತ್ತದೆ. ಕಲರಸ ಸೆಂಟರ್ ಮಂಗಳೂರು,ಉಡುಪಿ, ಬೆಳ್ತಂಗಡಿಯಲ್ಲಿ ಕಾರ್ಯಚರಿಸುತ್ತದೆ.

ಬೆಳ್ತಂಗಡಿಯ ಪ್ರಸಿದ್ಧ ಎಲುಬು ತಜ್ಞ ಡಾ.ಶಶಿಕಾಂತ್ ಡೋಂಗ್ರೆ,ಗಜಾನನ ಹೆಗ್ಡೆ ಹುಬ್ಬಳ್ಳಿ, ಜಯಲಕ್ಷ್ಮಿ ಹೆಗ್ಡೆ ಹುಬ್ಬಳ್ಳಿ, ಡಾ.ಶಶಿಧರ ಡೋಂಗ್ರೆ,ಡಾ.ಸುಷ್ಮಾ ಡೋಂಗ್ರೆ, ಡಾ.ರಂಜನ್ ಕುಮಾರ್‌,ನರೇಂದ್ರ ತುಳಪುಳೆ,ಯಶವಂತ ಪಟವರ್ಧನ್,ಪ್ರಕಾಶ್ ಅಭ್ಯಾಂಕರ್,ಕಾಜುಮುಗೇರು ಸಂತೋಷ್ ಹೆಬ್ಬಾರ್,ಸಚಿನ್ ಭಿಡೆ ಮುಂಡಾಜೆ,ಮನೋಜ್ ಲೋಂಡೆ ಮುಂಡಾಜೆ,ಇನ್ನಿತರರು ಉಪಸ್ಥಿತರಿದ್ದರು.

ಅಳದಂಗಡಿಯ ಪ್ರಸಿದ್ಧ ವೈದ್ಯರಾದ ಡಾ.ಎನ್.ಎಮ್ ತುಳಪುಳೆ-ಶ್ರೀಮತಿ ಗೀತಾ ತುಳಪುಳೆ, ಇ.ಎನ್.ಟಿ ಸ್ಪೆಷಲಿಸ್ಟ್ ಡಾ.ಹರ್ಷ ತುಳಪುಳೆ ಅವರು ಆಗಮಿಸಿದ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ,ಸತ್ಕರಿಸಿದರು.

Related posts

ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ, ಹಳ್ಳಿಂಗೇರಿ, ಸೌತಡ್ಕ ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಹಣ್ಣು ಹಂಪಲು ಗಿಡ ವಿತರಣೆ

Suddi Udaya

ಬೆಳ್ತಂಗಡಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 233.13 ಕೋಟಿ ವ್ಯವಹಾರ, ಸದಸ್ಯರಿಗೆ ಶೇ. 15 ಡಿವಿಡೆಂಟ್

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ “ ಕಲೆಗಳ ದೃಷ್ಟಿಕೋನದಿಂದ ಶಿಕ್ಷಣದ ವ್ಯಾಖ್ಯಾನ” ಉಪನ್ಯಾಸಮಾಲಿಕೆ

Suddi Udaya

ಮೆದುಳು ಜ್ವರದಿಂದ ಕಿಲ್ಲೂರಿನ ಯುವಕ ಶಶಿರಾಜ್ ಪೂಜಾರಿ ನಿಧನ

Suddi Udaya

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುಂತೆ ಧರ್ಮಸ್ಥಳದ ಗ್ರಾಮಸ್ಥರು, ವರ್ತಕರು, ನೌಕರ ವೃಂದದವರಿಂದ ವಿಶೇಷ ಪ್ರಾರ್ಥನೆ

Suddi Udaya
error: Content is protected !!