September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಶಿಶು ವೈದ್ಯೆ ಡಾ.ಶಿಲ್ಪಾ ಹೆಗ್ಡೆ ನೇತೃತ್ವದ ಮಕ್ಕಳ ಸ್ನೇಹಿ‌ ಕಲರವ ಸೆಂಟರ್ ಬೆಳ್ತಂಗಡಿಯಲ್ಲಿ ಪ್ರಾರಂಭ

ಬೆಳ್ತಂಗಡಿ: ಶಿಶು ವೈದ್ಯೆ ಡಾ.ಶಿಲ್ಪಾ ಹೆಗ್ಡೆ ನೇತೃತ್ವದ ಮಕ್ಕಳ ಬೆಳವಣಿಗೆಯ ಸಮಸ್ಯೆಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಥೆರಪಿ ಹಾಗೂ ಕೌನ್ಸಿಲಿಂಗ್ ಸೇವೆ ನೀಡುವ ಮಕ್ಕಳ ಸ್ನೇಹಿ‌ ಕಲರವ ಸೆಂಟರ್ ಬೆಳ್ತಂಗಡಿಯ ಸುವರ್ಣ ಆರ್ಕೇಡ್ ಮೊದಲ ಮಹಡಿಯಲ್ಲಿ ಜು. 27ರಂದು ಪ್ರಾರಂಭಗೊಂಡಿದೆ.

ಬೆಳ್ತಂಗಡಿ ತಾಲೂಕಿನ ಹಿರಿಯ ವೈದ್ಯರಾದ ಡಾ.ಶ್ರೀನಿವಾಸ್ ಡೋಂಗ್ರೆ ನೂತನ ಕಲರವ ಸಂಟರನ್ನು ಉದ್ಘಾಟಿಸಿ ಶುಭ ಕೋರಿದರು.ಕಲರವ ಪೌಂಢೇಶನ್ ಸ್ಥಾಪಕರಾದ ಡಾ.ಶಿಲ್ಪಾ ಹೆಗ್ಡೆ ಮಾತನಾಡಿ ಮಕ್ಕಳಿಗೆ ಸಮಗ್ರವಾದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳ ಹಿಂದೆ ಕಲರವ ಸೆಂಟರನ್ನು ಪ್ರಾರಂಭಿಸಲಾಗಿದೆ.

ಮಕ್ಕಳಲ್ಲಿ ಅಡಕಗೊಂಡಿರುವ ಎಲ್ಲಾ ರೀತಿಯ ಬೆಳವಣಿಗೆಯ ಸಮಸ್ಯೆಗಳನ್ನು ಪತ್ತೆಹಚ್ಚಿ ಅದಕ್ಕೆ ಸೂಕ್ತ ಥೆರಪಿ ಹಾಗೂ ಕೌನ್ಸಿಲಿಂಗ್ ಮೂಲಕ ಸೂಕ್ತ ಚಿಕಿತ್ಸೆ ನೀಡಿ ಮಕ್ಕಳಿಗೆ ಅರಿವು ಮತ್ತು ಬೆಂಬಲವನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.ವಾರದ ಎಲ್ಲಾ ದಿನವೂ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಕಲರವ ಸೆಂಟರ್ ತೆರೆದಿರುತ್ತದೆ. ಕಲರಸ ಸೆಂಟರ್ ಮಂಗಳೂರು,ಉಡುಪಿ, ಬೆಳ್ತಂಗಡಿಯಲ್ಲಿ ಕಾರ್ಯಚರಿಸುತ್ತದೆ.

ಬೆಳ್ತಂಗಡಿಯ ಪ್ರಸಿದ್ಧ ಎಲುಬು ತಜ್ಞ ಡಾ.ಶಶಿಕಾಂತ್ ಡೋಂಗ್ರೆ,ಗಜಾನನ ಹೆಗ್ಡೆ ಹುಬ್ಬಳ್ಳಿ, ಜಯಲಕ್ಷ್ಮಿ ಹೆಗ್ಡೆ ಹುಬ್ಬಳ್ಳಿ, ಡಾ.ಶಶಿಧರ ಡೋಂಗ್ರೆ,ಡಾ.ಸುಷ್ಮಾ ಡೋಂಗ್ರೆ, ಡಾ.ರಂಜನ್ ಕುಮಾರ್‌,ನರೇಂದ್ರ ತುಳಪುಳೆ,ಯಶವಂತ ಪಟವರ್ಧನ್,ಪ್ರಕಾಶ್ ಅಭ್ಯಾಂಕರ್,ಕಾಜುಮುಗೇರು ಸಂತೋಷ್ ಹೆಬ್ಬಾರ್,ಸಚಿನ್ ಭಿಡೆ ಮುಂಡಾಜೆ,ಮನೋಜ್ ಲೋಂಡೆ ಮುಂಡಾಜೆ,ಇನ್ನಿತರರು ಉಪಸ್ಥಿತರಿದ್ದರು.

ಅಳದಂಗಡಿಯ ಪ್ರಸಿದ್ಧ ವೈದ್ಯರಾದ ಡಾ.ಎನ್.ಎಮ್ ತುಳಪುಳೆ-ಶ್ರೀಮತಿ ಗೀತಾ ತುಳಪುಳೆ, ಇ.ಎನ್.ಟಿ ಸ್ಪೆಷಲಿಸ್ಟ್ ಡಾ.ಹರ್ಷ ತುಳಪುಳೆ ಅವರು ಆಗಮಿಸಿದ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ,ಸತ್ಕರಿಸಿದರು.

Related posts

ಧರ್ಮಸ್ಥಳ ಶ್ರೀ ಧ . ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೃತ್ಯ ಹಾಗೂ ಸಂಗೀತ ಉದ್ಘಾಟನೆ ಸಮಾರಂಭ

Suddi Udaya

ರಕ್ಷಿತ್ ಶಿವರಾಂ ಅವರ ಮನವಿಗೆ ಅಧಿಕಾರಿಗಳ ಸ್ಪಂದನೆ: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ

Suddi Udaya

ಕಣಿಯೂರು ವಲಯದ ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಮುಂಡಾಜೆ: ಸೀಟು ಪ್ರದೇಶದಲ್ಲಿ ವಾಲಿ ನಿಂತಿರುವ ವಿದ್ಯುತ್ ಕಂಬ

Suddi Udaya

ಕಾರು-ಬೈಕ್ ಡಿಕ್ಕಿ: ಬೈಕ್‌ ಸವಾರನಿಗೆ ಗಂಭೀರ ಗಾಯ

Suddi Udaya

ಬೆಳ್ತಂಗಡಿ: ಡಾ. ಸುಶ್ಮಿತಾ ಸಿ ಎಚ್ ರವರಿಗೆ ಪಿಹೆಚ್ ಡಿ ಪದವಿ

Suddi Udaya
error: Content is protected !!