22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಚ್ಚಿನದಲ್ಲಿ 1250 ಬಿದಿರು ಗಿಡ ವಿತರಣಾ ಕಾರ್ಯಕ್ರಮ

ಮಚ್ಚಿನ: ಬ್ಯಾಂಬೂ ಸೊಸೈಟಿ ಆಪ್ ಇಂಡಿಯಾ ಬಿದಿರು ಗ್ರಾಮಗಳ ಕ್ಲಸ್ಟರ್ ಯೋಜನೆ ಹಾಗೂ ಬೆಳ್ತಂಗಡಿ ರಬ್ಬರ್ ಸೊಸೈಟಿ ಹಾಗೂ ಶ್ರೀ ಕ್ಷೇ ಧ. ಗ್ರಾ. ಯೋ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಸಹಕಾರದೊಂದಿಗೆ 1250 ಬಿದಿರು ಗಿಡ ವಿತರಣೆ ಕಾರ್ಯಕ್ರಮ ನಡೆಯಿತು.

ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ದೇವಸ್ಥಾನ ಗುಮಾಸ್ತ ಬಾಲಕೃಷ್ಣ ಭಟ್ ಹಾಗೂ ಸುಧೀರ್ ಕುಮಾರ್ ಶೆಟ್ಟಿ (ಕೋರ ಬಿಟ್ಟು ಮನೆ) ಅವರಿಗೆ ಬಿದಿರು ಗಿಡವನ್ನು ಕೃಷಿ ವಿಭಾಗದ ಯೋಜನಾಧಿಕಾರಿ ಬಾಲಕೃಷ್ಣ ರವರು ವಿತರಣೆ ಮಾಡಿದರು.

ಬಿದಿರು ಬ್ಯಾಂಬೂ ಸೊಸೈಟಿಯ ಮೇಲ್ವಿಚಾರಕ ಕುಮಾರನಾಥ್ ಬಿದಿರು ಕೃಷಿ ಬಗ್ಗೆ ಮಾತನಾಡಿ ಬಿದಿರು ವೇಗವಾಗಿ ಬೆಳೆಯುವ ಕೃಷಿಯಾಗಿದೆ ಬಿದಿರಿನ ಬಹುಮುಖ ಉಪಯೋಗಗಳು ನಿರ್ಮಾಣ ಕಟ್ಟಡದ ಒಳಾಂಗಣ ಅಲಂಕಾರಕ್ಕಾಗಿ, ಪೀಠೋಪಕರಣಗಳ ತಯಾರಿಕೆಗಾಗಿ ಅಗರಬತ್ತಿ ತಯಾರಿಕೆಗೆ ಕಾಗದ ತಯಾರಿಕೆಗೆ ಅತಿ ಹೆಚ್ಚು ಉಪಯೋಗವಾಗುತ್ತದೆ ಬಿದಿರು ಗಿಡ ನಾಟಿ ಮಾಡುವ ವಿಧಾನ ಬಳಸಬೇಕಾದ ಗೊಬ್ಬರದ ಬಗ್ಗೆ ಮಾಹಿತಿಯನ್ನು ನೀಡಲಾಯಿತು

ಕಾರ್ಯಕ್ರಮದಲ್ಲಿ ಮಡಂತ್ಯಾರ್ ವಲಯದ ಮೇಲ್ವಿಚಾರಕ ಕೇಶವ ನಾಯ್ಕ, ಒಕ್ಕೂಟದ ಅಧ್ಯಕ್ಷವಿಜಯ್ ಮಡಕ್ಕಿಲ, ಮಚ್ಚಿನ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಸುಧಾ, ಕೃಷಿ ಮೇಲ್ವಿಚಾರಕ ಕೃಷ್ಣ, ಮಚ್ಚಿನ ಸೇವಾ ಪ್ರತಿನಿಧಿ ಪರಮೇಶ್ವರ, ಕುದ್ರಡ್ಕ ಸೇವಾ ಪ್ರತಿನಿಧಿ ಶ್ರೀಮತಿ ನಂದಿನಿ, ಶೌರ್ಯ ಘಟಕದ ಪ್ರತಿನಿಧಿ ಪ್ರಭಾಕರ ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ರವರಿಗೆ ‘ಆಯುಷ್ ರತ್ನ ಪ್ರಶಸ್ತಿ’ ಪುರಸ್ಕಾರ

Suddi Udaya

ಪಡಂಗಡಿ ರಸ್ತೆಯ ಗುಂಡಿಗಳನ್ನು ಸಿಮೆಂಟ್ ವೆಟ್ ಮಿಕ್ಸ್ ಹಾಕಿ ದುರಸ್ಥಿ

Suddi Udaya

ಭಟ್ಕಳ ಕರಿಕಲ್ ಧ್ಯಾನ ಮಂದಿರದ ಪ್ರತಿಷ್ಠಾಪನಾ ವರ್ಧಂತಿ ಉತ್ಸವ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Suddi Udaya

ಬಳಂಜ: ಉದ್ಯಮಿ ಯಶೋಧರ ಜೈನ್ ನಿಧನ

Suddi Udaya

ಕಾರಿಂಜ ವನಶಾಸ್ತಾರ, ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಚಪ್ಪರ ಮೂಹೂರ್ತ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!