23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು : 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಾಲೋಚನಾ ಸಭೆ

ವೇಣೂರು: ಫಲ್ಗುಣಿ ಸೇವಾ ಸಂಘ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಜಂಟಿ ಸಮಾಲೋಚನೆಯು ವೇಣೂರು ಪಂಚಾಯತ್ ಸಭಾಭವನದಲ್ಲಿ ಜು.01 ರಂದು ನಡೆಯಿತು.

ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬದ 108 ತೆಂಗಿನಕಾಯಿ ಗಣಹೋಮದ ಕೂಪನನ್ನು ಗಣೇಶೋತ್ಸವ ಸಮಿತಿಯ ಗೌರಾವಾಧ್ಯಕ್ಷ ಡಾ| ಶಾಂತಿ ಪ್ರಸಾದ್ ನಮನ ಕ್ಲಿನಿಕ್ ಇವರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಫಲ್ಗುಣಿ ಸಂಘದ ಅಧ್ಯಕ್ಷ ವಿ. ಎಸ್ ಜಯರಾಜ್‌ರವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ್ ಪೈ, ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ, ಕಾರ್ಯದರ್ಶಿ ಪ್ರಶಾಂತ್ ಹೆಗ್ಡೆ ಕುಂಟಲ್ಮಾರು ಮತ್ತು ಸುದೀಪ್ ಪಟವರ್ಧನ್, ಕೋಶಾಧಿಕಾರಿ ಶ್ರೀಕಾಂತ್ ಉಡುಪ ಹಾಗೂ ಜಂಟಿ ಸಮಿತಿಗಳ ಎಲ್ಲಾ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ ಹೆಗ್ಡೆ ಮತ್ತು ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

ವೇಣೂರಿನ ಎಲ್ಲಾ ವ್ಯಾಪಾರಸ್ಥರು ತಮ್ಮ ಸಂಸ್ಥೆಗಳು, ಮನೆಗಳನ್ನು ವಿಧ್ಯುದ್ದೀಪಾಲಂಕಾರದಿಂದ ವೇಣೂರು ನಗರವನ್ನು ಕಂಗೊಳಿಸಿ 25ನೇ ವರ್ಷದ ಗಣೇಶೋತ್ಸವವನ್ನು ವೇಣೂರಿನ ಹಬ್ಬವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು.

Related posts

ಮುಳಿಕ್ಕಾರ್ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಉಮಾನಾಥ್, ಕಾರ್ಯದರ್ಶಿ ಶಾಂಭವಿ ಆಯ್ಕೆ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ವತಿಯಿಂದ 77 ನೇ ಗಣರಾಜ್ಯೋತ್ಸವ ದಿನಾಚರಣೆ

Suddi Udaya

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಗೂಡ್ಸ್ ಟೆಂಪೋ

Suddi Udaya

ಬೆಳ್ತಂಗಡಿ ತಾ.ಪಂ.ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ 132 ನೇ ಜನ್ಮದಿನಾಚರಣೆ

Suddi Udaya

ಪುದುವೆಟ್ಟು: ಮಿಯ್ಯಾರು ಜೈ ಭೀಮ್ ವಾಲಿಬಾಲ್ ಲೀಗ್ ಅಸೋಸಿಯೇಷನ್ ವತಿಯಿಂದ ವಾಲಿಬಾಲ್ ಪಂದ್ಯಾಟ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಗೇರುಕಟ್ಟೆ ಮನ್‌ಶರ್ ಕಾಲೇಜು ವತಿಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾವನದಲ್ಲಿ ವನಮಹೋತ್ಸವ ಆಚರಣೆ

Suddi Udaya
error: Content is protected !!