September 6, 2026
ವರದಿ

ಕಿಲ್ಲೂರು ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ 79ನೇ ಸ್ವಾತಂತ್ರ ದಿನಾಚರಣೆ

ಬೆಳ್ತಂಗಡಿ: ಕಿಲ್ಲೂರು ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಬಹಳ ವಿಜೃಂಬಣೆಯಿಂದ 79 ನೇ ಸ್ವಾತಂತ್ರ ದಿನಾಚರಣೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು ಇವರ ನೇತೃತ್ವದಲ್ಲಿ ನಡೆಯಿತು.

ಜಮಾಅತ್ ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆ ಮನೆ ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ವಹಿಸಿದರು.ಜಮಾಅತ್ ಧರ್ಮ ಗುರುಗಳಾದ ಅಲ್ ಹಾಜ್ ಅಬ್ದುರಹ್ಮಾನ್ ಬಾಖವಿ ಕಕ್ಕಿಂಜೆ ಕಾರ್ಯಕ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಿಲ್ಲೂರು ಇರ್ಷಾದುಶ್ಶಿಬಿಯಾನ್ ಅರಬಿಕ್ ಮದರಸ ಮುಖ್ಯೋಪಾಧ್ಯಾಯರಾದ ಅಬ್ದುಲ್ ಅಝೀಝ್ ಸಅದಿ ಅಗ್ರಹಾರ ಸ್ವಾತಂತ್ರದ ಸಂದೇಶ ಭಾಷಣ ಮಾಡಿದರು. ಇರ್ಷಾದುಶ್ಶಿಬಿಯಾನ್ ಮದರಸ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ, ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಿತು.

ವಿಜೇತರಿಗೆ ಆಡಳಿತ ಕಮೀಟಿ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಜಮಾಅತ್ ಉಪಾಧ್ಯಕ್ಷ ಹಮೀದ್ ಅಮ್ಮಿ ಜಮಾಅತ್ ಕಾರ್ಯದರ್ಶಿ ಹಂಝತ್ ಕಿಲ್ಲೂರು , ಸದಸ್ಯರಾದ ಮಹಮ್ಮದ್ ಪುತ್ತುಮೋನು ಶ್ರವಣಗುಂಡ ,ಬದ್ರುದ್ದೀನ್ ಕಿಲ್ಲೂರು, ಮಹಮ್ಮದ್ ಮಣ್ಣಗುಂಡಿ , ಅಶ್ರಫ್ ಶ್ರವಣಗುಂಡ, ಮಾಜಿ ಖತೀಬರಾದ ಮುಹಮ್ಮದ್ ಉಸ್ತಾದ್ ಹಾಗೂ ಜಮಾಅತ್ ಗೆ ಒಳಪಟ್ಟ ಮಕ್ಕಳ ಪೋಷಕರು, ಊರಿನ ಹಿರಿಯರು ಉಪಸ್ಥಿತರಿದ್ದರು.

ಮದರಸ ವಿದ್ಯಾರ್ಥಿಗಳಿಗೆ ಯುವ ಉದ್ಯಮಿ ಕೊಡುಗೈ ದಾನಿ ಅಶ್ರಫ್ ತಿಮ್ಮನಬೆಟ್ಟು ರವರಿಂದ ಕುಡಿಯಲು ಪಾನೀಯ ಹಾಗೂ ಸಿಹಿ ತಿಂಡಿ ವಿತರಿಸಲಾಯಿತು. ಅಧ್ಯಾಪಕ ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿ ಧನ್ಯವಾದಗೈದರು.

Related posts

ಜಿಪಿಟಿ ಶಿಕ್ಷಕ ಮೋಹನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಸರ್ಕಾರಿ ಪ್ರೌಢಶಾಲೆ ವೇಣೂರುನಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ: ಪುಷ್ಪಾರ್ಚನೆ ಹಾಗೂ ಮೆರವಣಿಗೆ ಮೂಲಕ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

Suddi Udaya

ಎಸ್‌ಎಮ್‌ಎ: ಉತ್ತಮ ಸಮುದಾಯ ಅಭಿಯಾನ ಪ್ರಯುಕ್ತ ಬೆಳ್ತಂಗಡಿಯಲ್ಲಿ ಕಮ್ಯೂನಿಟಿ ಡಿಬೇಟ್ ಕಾರ್ಯಕ್ರಮ

Suddi Udaya

ಬಳಂಜ ಗ್ರಾ.ಪಂ ನೂತನ‌ ಅಧ್ಯಕ್ಷೆ,ಉಪಾಧ್ಯಕ್ಷ ರಿಗೆ ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ

Suddi Udaya

ಮುಂಡಾಜೆ: ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಜಾಲಿ ಓ ಎ ರವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಪ್ರಾಂಶುಪಾಲರಿಗೆ ಅಧಿಕಾರ ಹಸ್ತಾಂತರ

Suddi Udaya

ಸವಣಾಲು: ಆಟೋ ಚಾಲಕ ಲೋಕಯ್ಯ ಹೆಗ್ಡೆ ನಿಧನ

Suddi Udaya
error: Content is protected !!