30.7 C
ಪುತ್ತೂರು, ಬೆಳ್ತಂಗಡಿ
April 24, 2026
ಚಿತ್ರ ವರದಿವರದಿ

ಹೊಕ್ಕಾಡಿಗೋಳಿ: ಮುಹಿಯುದ್ದೀನ್ ಜುಮಾ ಮಸೀದಿ – ಸಿರಾಜುಲ್ ಹುದಾ ಮದರಸ ಸಿರಾಜುಲ್ ಹುದ ಯಂಗ್ ಮೆನ್ಸ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಹೊಕ್ಕಾಡಿಗೋಳಿ: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಸಿರಾಜುಲ್ ಹುದಾ ಮದರಸ ಸಿರಾಜುಲ್ ಹುದ ಯಂಗ್ ಮೆನ್ಸ್ ಹೊಕ್ಕಡಿಗೋಳಿ ಇದರ ವತಿಯಿಂದ 79ನೇ ಸ್ವಾತಂತ್ರ್ಯ ದಿನಚರಣೆ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಸಿರಾಜುಲ್ ಹುದಾ ಮದ್ರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾತ್ ಅಧ್ಯಕ್ಷರಾದ ಹೆಚ್ ಕೆ ಮುಹಮ್ಮದ್ ಶರೀಫ್ ರವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಮಾತ್ ಕಾರ್ಯದರ್ಶಿ ಫಾರೂಕ್ ಹೊಕ್ಕಾಡಿಗೋಳಿ ಸ್ವಾಗತ ಭಾಷಣ ಮಾಡಿದರು. ಮಸೀದಿ ಖದೀಬರಾದ ಮುಹಮ್ಮದ್ ನಿಯಾಝ್ ಫೈಝಿ ದುಹಾದೊಂದಿಗೆ ಸ್ವಾತಂತ್ರದ ಬಗ್ಗೆ ಶುಭ ಸಂದೇಶ ನೀಡಿದರು. ಗೌರವಧ್ಯಕ್ಷ ಹೆಚ್ ಮಹಮ್ಮದ್ ಇಕ್ಬಾಲ್ ಸ್ವಾತಂತ್ರ್ಯಹೋರಾಟದ ಬಗ್ಗೆ ವಿವರಿಸಿದರು. ಮದರಸ ಮಕ್ಕಳು ಹಾಗೂ ಜಮಾತ್ ಬಾಂಧವರಿಗೆ ಮಸೀದಿ ವಿದ್ಯಾರ್ಥಿ ರಿಹಾನ್ ಅಹಮದ್ ಭಾವ ಸ್ವಾತಂತ್ರ್ಯದ ಹಾಡು ಹಾಡಿದರು.

ಈ ಕಾರ್ಯಕ್ರಮದಲ್ಲಿ ಸಿರಾಜುಲ್ ಹುದಾ ಯಂಗ್ ಮೆನ್ಸ್ ಅಧ್ಯಕ್ಷ ಹೆಚ್ ಕೆ ಲತೀಫ್, ಆಡಳಿತ ಕಮಿಟಿ ಸದಸ್ಯರು, ಯಂಗ್ ಮೆನ್ಸ್ ಸದಸ್ಯರು, ಜಮಾತ್ ಬಾಂಧವರು ಮತ್ತು ಮದ್ರಸ ಮಕ್ಕಳು ಉಪಸ್ಥಿತರಿದ್ದರು. ಸಿರಜುಲ್ ಹುದಾ ಯಂಗ್ ಮೆನ್ಸ್ ಕಾರ್ಯದರ್ಶಿ ಎಚ್ ಐ ರಫೀಕ್ ಧನ್ಯವಾದ ಸಮರ್ಪಿಸಿದರು. ರಾಷ್ಟ್ರ ಗೀತೆ ಹಾಡಿ ಸಿಹಿ ತಿಂಡಿ ವಿತರಣೆ ಮಾಡಿದ ನಂತರ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

Related posts

ಬೆಳಾಲು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ

Suddi Udaya

ದ.ಕ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಕ್ಯಾ| ಬ್ರಿಜೇಶ್ ಚೌಟ: 149208 ಮತಗಳ ಅಂತರದಿಂದ ಭರ್ಜರಿ ಗೆಲುವು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಸೋಲು

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಲಾಯಿಲ: ಶ್ರೀ ಗುರು ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದಿಂದ ಶ್ರೀ ಶನೇಶ್ವರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ ಪ್ರಕರಣ ಎಸ್.ಐ.ಟಿ ತನಿಖೆ ಪೂರ್ಣಗೊಂಡಿಲ್ಲ: ಪ್ರಣವ್ ಮೊಹಂತಿ

Suddi Udaya

ಗೇರುಕಟ್ಟೆ: ಕೊರಂಜ ಸ.ಉ.ಪ್ರಾ. ಶಾಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

Suddi Udaya
error: Content is protected !!