23.5 C
ಪುತ್ತೂರು, ಬೆಳ್ತಂಗಡಿ
June 8, 2026
ಕ್ರೀಡಾ ಸುದ್ದಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇದರ ಆಂತರಿಕ ಗುಣಮಟ್ಟ ಬರವಸ ಕೋಷ, ವಿದ್ಯಾರ್ಥಿ ಪ್ರತಿಭಾ ವೇದಿಕೆ, ರೋವರ್ಸ್ ರೆಂಜರ್ಸ್ ಘಟಕ, ಹಾಗೂ ಯುವ ರೆಡ್ ಕ್ರಾಸ್ ಘಟಕ ಇವುಗಳ ಸಂಯುಕ್ತ ಸಹಯೋಗದಲ್ಲಿ “ನಮ್ಮ ನಡೆ ಗದ್ದೆಯ ಕಡೆ” ಎಂಬ ವಿಶಿಷ್ಟ ಕಾರ್ಯಕ್ರಮ .

ಬೆಳ್ತಂಗಡಿ :ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇದರ ಆಂತರಿಕ ಗುಣಮಟ್ಟ ಬರವಸ ಕೋಷ, ವಿದ್ಯಾರ್ಥಿ ಪ್ರತಿಭಾ ವೇದಿಕೆ, ರೋವರ್ಸ್ ರೆಂಜರ್ಸ್ ಘಟಕ, ಹಾಗೂ ಯುವ ರೆಡ್ ಕ್ರಾಸ್ ಘಟಕ ಇವುಗಳ ಸಂಯುಕ್ತ ಸಹಯೋಗದಲ್ಲಿ “ನಮ್ಮ ನಡೆ ಗದ್ದೆಯ ಕಡೆ” ಎಂಬ ವಿಶಿಷ್ಟ ಕಾರ್ಯಕ್ರಮಆ 19. ರಂದು ದೊಡ್ಡ ಮನೆ ಸತೀಶ್ ಶೆಟ್ಟಿ ಯವರ ಗದ್ದೆ, ಹಳೆಕೋಟೆ, ಬೆಳ್ತಂಗಡಿಯಲ್ಲಿ ನಡೆಯಿತು .


ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ಮನರಂಜನಯೊಂದಿಗೆ, ಆಟ, ಊಟ, ಓಟ ಎಲ್ಲವನ್ನು ನಿಭಾಯಿಸಲು ಕಲಿತ ಸಂತೃಪ್ತಿಯ ದಿನವಾಗಿತ್ತು.

ಈ ಕಾರ್ಯಕ್ರಮದಲ್ಲಿ ನಡೆದ ಸ್ಪರ್ಧೆಗಳು ಈ ಕೆಳಗಿನಂತಿವೆ.
ಓಟ, ಮೂಟೆ ಹೊರುವುದು,. ಹಾಳೆಯಲ್ಲಿ ‌ಎಳೆಯುವುದು, . ನಿಧಿ ಶೋಧ, ಹಗ್ಗ ಜಗ್ಗಾಟ
ವಾಲಿಬಾಲ್
ಪ್ರೊ. ಪದ್ಮನಾಭ ಕೆ, ಪ್ರಾಸ್ತಾವಿಕ ನುಡಿಗಳನ್ನು ಆಡಿ ವಿದ್ಯಾರ್ಥಿಗಳಿಗೆ ತುಳು ನಾಡಿನ ಸಂಸ್ಕೃತಿ, ಮಣ್ಣಿನ ಮಹತ್ವ ಮತ್ತು ಕ್ರೀಡಾ ಸ್ಪೂರ್ತಿಯ ಬಗ್ಗೆ ವಿವರಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಪ್ರಾಂಶುಪಾಲರಾದ ಪ್ರೊ. ಸುರೇಶ್ ವಿ. ವಿದ್ಯಾರ್ಥಿಗಳು ಅನುಸರಿಸಬೇಕಾದ ಜಾಗೃತಿಗಳನ್ನು ತಿಳಿಸಿದರು. ಗದ್ದೆಯ ಮಾಲೀಕರಾದ ಶ್ರೀ ಸತೀಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಆಯೋಜಕರಾದ ಯವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಧಿಕಾರಿ, ರೊವರ್ ಸ್ಕೌಟ್ ಲೀಡರ್ ಡಾ. ರವಿ ಎಂ. ಎನ್. ಸ್ಪರ್ಧೆಗಳ ನೀತಿಗಳನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ಕುಶಾಲಪ್ಪ ಎಸ್. ಮತ್ತು ರೇಂಜರ್ ಲೀಡರ್ ಡಾ. ರಾಜೇಶ್ವರಿ ಎಚ್ ಎಸ್ ಉಪಸ್ಥಿತರಿದ್ದರು.
ಶ್ರೀ ಸತೀಶ್ ಶೆಟ್ಟಿ ಕುಟುಂಬದವರ ಸಹಕಾರವನ್ನು ಸ್ಮರಿಸಿ ಗೌರವಿಸಲಾಯಿತು. ಕಾಲೇಜಿನ ಎಲ್ಲಾ ಅಧ್ಯಾಪಕ ವೃಂದ, ಬೋಧಕೇತರ ವೃಂದ ಮತ್ತು ಕ್ರೀಡಾ ಸಂಘದ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮದ ಆಟೋಟಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿ ಶುಭವತಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಕ್ರತಿಕ್ಎಲ್ಲರನ್ನು ಸ್ವಾಗತಿಸಿದರು. ಪ್ರೊಫೆಸರ್ ವಿಜಯಲಕ್ಷ್ಮಿ ಪ್ರಾರ್ಥನೆ ಮಾಡಿದರು.
ಸಂದೇಶ ಸರ್ವರಿಗೂ ವಂದಿಸಿದರು.

Related posts

ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಮ್ಯಾಟ್ ಕಬಡ್ಡಿ ಪಂದ್ಯಾಟ : ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಗೆ ಪ್ರಶಸ್ತಿ

Suddi Udaya

ಶಿಶಿರ್ ಜಯವಿಕ್ರಮ್ ಗೆ ವಾಲಿಬಾಲ್ ವಲಯದ “ಸರ್ವಾಂಗೀಣ ಆಟಗಾರ “ಪ್ರಶಸ್ತಿ

Suddi Udaya

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಯಶಸ್ವಿ ದ್ವಿತೀಯ ಸ್ಥಾನ

Suddi Udaya

ಪದವಿಪೂರ್ವ ಕಾಲೇಜಗಳ ತ್ರೋಬಲ್ ಪಂದ್ಯಾಟ

Suddi Udaya

ಬಳಂಜ ಬಿವಿಎಲ್ ವಾಲಿವಾಲ್ ಪಂದ್ಯಾವಳಿ, ಕೋಟ್ಯಾನ್ ರಾಕರ್ಸ್ ಚಾಂಪಿಯನ್, ಇಕೋಪ್ರೇಶ್ ರನ್ನರ್

Suddi Udaya

ಮಿತ್ತಬಾಗಿಲು ವಿಭಾಷ್ ಮತ್ತು ವಿಭಾ – ಕರಾಟೆ ಅಖಾಡದಲ್ಲಿ ಚಾಂಪಿಯನ್‌ಶಿಪ್‌ ದ್ವಿರತ್ನ ಸಾಧನೆ

Suddi Udaya
error: Content is protected !!